ಮೈಸೂರು: ಕೇರಳದಲ್ಲಿ ಕೊರೊನಾವೈರಸ್ ಲಾಕ್ಡೌನ್ ಮುಂದುವರಿದಿದ್ದು ಅಲ್ಲಿ ಇನ್ನೂ ಮದ್ಯದಂಗಡಿಗಳು ತೆರೆದಿಲ್ಲ. ಹೀಗಿರುವಾಗ ಕರ್ನಾಟಕ- ಕೇರಳ ಗಡಿಭಾಗದಲ್ಲಿರುವ ಜನರು ಕಪಿಲಾ ನದಿಯಲ್ಲಿ ಈಜಿ ಕರ್ನಾಟಕಕ್ಕೆ ಬಂದು ಮದ್ಯ ಖರೀದಿಸುತ್ತಿದ್ದಾರೆ.
ಕೇರಳದ ವಯನಾಡ್ ಜಿಲ್ಲೆಯಲ್ಲಿ ಹುಟ್ಟುವ ಕಪಿಲಾ ನದಿ ಮೈಸೂರು ಜಿಲ್ಲೆಯ ಎಚ್ಡಿ ಕೋಟೆ ತಾಲೂಕಿನಲ್ಲಿ ಹರಿಯುತ್ತೆ. ಈ ನದಿಯಲ್ಲಿ ಈಜಿ ಕೆಲವು ಮಂದಿ ಕರ್ನಾಟಕಕ್ಕೆ ಬರುತ್ತಿದ್ದಾರೆ.ಕೆಲವರು ನದಿಯಲ್ಲಿ ಈಜಿ ಕರ್ನಾಟಕಕ್ಕೆ ಬಂದು ಮದ್ಯ ಖರೀದಿಸಿ ಹೋಗುತ್ತಿದ್ದಾರೆ ಸ್ಥಳೀಯರು ಹೇಳಿದ್ದಾರೆ.