<p>ಮೈಸೂರು: ‘ಕೋವಿಡ್ ಲಸಿಕೆ ನೀಡುವಿಕೆಯಲ್ಲಿ ತಾರತಮ್ಯ ಹೆಚ್ಚಾಗುತ್ತಿದೆ. ಬಹುಪಾಲು ಲಸಿಕೆ ಕೆ.ಆರ್.ಕ್ಷೇತ್ರದ ಪಾಲಾಗುತ್ತಿದೆ’ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ನಗರದಲ್ಲಿ ಮಂಗಳವಾರ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು.</p>.<p>‘ಲಸಿಕೆ ನೀಡುವಿಕೆಗೂ ಮುನ್ನ ನೀಡುವ ಟೋಕನ್ನಲ್ಲಿ ರಾಜಕೀಯ ಪಕ್ಷದ ಚಿಹ್ನೆ ಇರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ ಸದಸ್ಯರು ಜಿಲ್ಲಾ ಆರೋಗ್ಯಾಧಿಕಾರಿಯನ್ನು ಸಭೆಗೆ ಕರೆಸಬೇಕು ಎಂದು ಒತ್ತಾಯಿಸಿದರು. ಇದರೊಂದಿಗೆ, ಮೇಯರ್ ಚುನಾವಣೆ ಮುಂದೂಡಿಕೆ ವಿಷಯವೂ ಪ್ರಧಾನವಾಗಿ ಸಭೆಯು ಗದ್ದಲದಲ್ಲಿ ಮುಳುಗಿತು.</p>.<p>ಈ ಹಂತದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸದಸ್ಯರ ನಡುವಿನ ವಾಗ್ವಾದಗಳು ತಾರಕಕ್ಕೇರಿದಾಗ ಮಧ್ಯಪ್ರವೇಶಿಸಿದ ಪ್ರಭಾರ ಮೇಯರ್ ಅನ್ವರ್ಬೇಗ್, ‘ಇದು ನನ್ನ ಮೊದಲ ಸಭೆ. ಸಾಂಗವಾಗಿ ನಡೆಯಲು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು.</p>.<p>ಉದಯಗಿರಿ ವಾರ್ಡ್ 13ರ ಕಾಂಗ್ರೆಸ್ ಸದಸ್ಯ ಅಯೂಬ್ಖಾನ್ ಮಾತನಾಡಿ, ‘ಕೋವಿಡ್ ಲಸಿಕೆ ಶಾಸಕರ ಮನೆಯ ಆಸ್ತಿಯೇ’ ಎಂದು ಏರು ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಚರಕ ಆಸ್ಪತ್ರೆಯಲ್ಲಿ 500 ಮಂದಿಗೆ ಟೋಕನ್ ನೀಡಿ, ಕೇವಲ 100 ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಸಮರ್ಪಕವಾಗಿ ಲಸಿಕೆ ಪೂರೈಕೆಯಾಗುತ್ತಿಲ್ಲ’ ಎಂದು ಗೋಕುಲಂನ ವಾರ್ಡ್ 6ರ ಜೆಡಿಎಸ್ ಸದಸ್ಯ ಎಸ್ಬಿಎಂ ಮಂಜು ಕಿಡಿಕಾರಿದರು.</p>.<p>ಸುಭಾಷನಗರದ ವಾರ್ಡ್ ಸಂಖ್ಯೆ 16ರ ಆರಿಫ್ ಹುಸೇನ್, ‘ಲಸಿಕೆ ಪಡೆಯಲು ಒಂದು ದಿನದ ಕೂಲಿಯನ್ನು ನಷ್ಟ ಮಾಡಿಕೊಂಡು ಸಾಲಿನಲ್ಲಿ ನಿಂತು ಲಸಿಕೆ ತೆಗೆದುಕೊಳ್ಳುವ ಸ್ಥಿತಿ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಆರೋಪಗಳಿಗೆ ಪ್ರತಿಕ್ರಿಯಿಸಿದ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ, ‘ಬರುವ ಲಸಿಕೆಗಳನ್ನೆಲ್ಲ ಜುಲೈ ತಿಂಗಳಿನಿಂದ ವಿಧಾನಸಭಾ ಕ್ಷೇತ್ರವಾರು ಸಮನಾಗಿ ಹಂಚಿಕೆ ಮಾಡಲಾಗುತ್ತಿದೆ. ಸದಸ್ಯರ ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗುವುದು’ ಎಂದು ಹೇಳಿದ ಬಳಿಕೆ ಗದ್ದಲ ಕಡಿಮೆಯಾಯಿತು.</p>.<p>ಮಹಿಳಾ ಸದಸ್ಯರ ತರಾಟೆ: ಮೇಯರ್ ಚುನಾವಣೆ ಮುಂದೂಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷಭೇದ ಮರೆತು ಮಹಿಳಾ ಸದಸ್ಯರು ವಾಕ್ಪ್ರಹಾರ ನಡೆಸಿದರು.</p>.<p>ವಾರ್ಡ್ ಸಂಖ್ಯೆ 2ರ ಮಂಚೇಗೌಡನಕೊಪ್ಪಲಿನ ಜೆಡಿಎಸ್ ಸದಸ್ಯೆ ಪ್ರೇಮಾ ವಿಷಯ ಪ್ರಸ್ತಾಪಿಸಿ, ‘ಮೀಸಲಾತಿ ಇದ್ದರೂ ಮೇಯರ್ ಸ್ಥಾನಕ್ಕೆ ಮಹಿಳೆಯರಿಗೆ ಅವಕಾಶ ಮಾಡಿಕೊಡದಿರುವುದರಿಂದ ಹಕ್ಕುಚ್ಯುತಿಯಾಗಿದೆ’ ಎಂದರು.</p>.<p>‘ಮೇಯರ್ ಚುನಾವಣೆಗೆ ಅಡ್ಡಿ ಬರುವ ಕೋವಿಡ್, ಮುಖ್ಯಮಂತ್ರಿ ಬದಲಾವಣೆಗೆ ಅಡ್ಡಿ ಬರುವುದಿಲ್ಲವಂತೆ ಎಂದು ಆರಿಫ್ ಹುಸೇನ್ ವ್ಯಂಗ್ಯವಾಡಿದರು.</p>.<p>ವಾರ್ಡ್ ಸಂಖ್ಯೆ 32ರ ಗೌಸಿಯಾನಗರದ ಎಚ್.ಎಂ.ಶಾಂತಕುಮಾರಿ, ‘ಖಾಲಿ ಸ್ಥಾನಗಳನ್ನು ತುಂಬುವ ವಿಚಾರದಲ್ಲಿ ನಿಯಮಗಳು ಉಲ್ಲಂಘನೆಯಾಗಿವೆ’ ಎಂದು ದೂರಿದರು.</p>.<p>ಮೇಯರ್ ಚುನಾವಣೆಗೆ ನ್ಯಾಯಾಲದಿಂದ ತಡೆಯಾಜ್ಞೆ ತಂದವರು ಕಾಂಗ್ರೆಸ್ ಸದಸ್ಯರೇ ಆಗಿದ್ದಾರೆ ಎಂದು ವಿಜಯನಗರದ ವಾರ್ಡ್ ಸಂಖ್ಯೆ 20ರ ಬಿಜೆಪಿ ಸದಸ್ಯ ಯು.ಎಂ.ಸುಬ್ಬಯ್ಯ ಸೇರಿ ಬಿಜೆಪಿ ಸದಸ್ಯರು ತಿರುಗೇಟು ನೀಡಿದರು.</p>.<p>‘ಮೇಯರ್ ಚುನಾವಣೆ ನಡೆಸಬೇಕು’ ಎಂದು ನಿರ್ಣಯ ಕೈಗೊಂಡ ಸಭೆಯು ಈ ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಿತು.</p>.<p>ಇತ್ತೀಚೆಗೆ ನಿಧನರಾದ ಜಿ.ಮಾದೇಗೌಡ, ಸಂಚಾರಿ ವಿಜಯ್ ಅವರಿಗೆ ಸಭೆಯ ಆರಂಭದಲ್ಲಿ ಎಲ್ಲರೂ ಸಂತಾಪ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಕೋವಿಡ್ ಲಸಿಕೆ ನೀಡುವಿಕೆಯಲ್ಲಿ ತಾರತಮ್ಯ ಹೆಚ್ಚಾಗುತ್ತಿದೆ. ಬಹುಪಾಲು ಲಸಿಕೆ ಕೆ.ಆರ್.ಕ್ಷೇತ್ರದ ಪಾಲಾಗುತ್ತಿದೆ’ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ನಗರದಲ್ಲಿ ಮಂಗಳವಾರ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು.</p>.<p>‘ಲಸಿಕೆ ನೀಡುವಿಕೆಗೂ ಮುನ್ನ ನೀಡುವ ಟೋಕನ್ನಲ್ಲಿ ರಾಜಕೀಯ ಪಕ್ಷದ ಚಿಹ್ನೆ ಇರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ ಸದಸ್ಯರು ಜಿಲ್ಲಾ ಆರೋಗ್ಯಾಧಿಕಾರಿಯನ್ನು ಸಭೆಗೆ ಕರೆಸಬೇಕು ಎಂದು ಒತ್ತಾಯಿಸಿದರು. ಇದರೊಂದಿಗೆ, ಮೇಯರ್ ಚುನಾವಣೆ ಮುಂದೂಡಿಕೆ ವಿಷಯವೂ ಪ್ರಧಾನವಾಗಿ ಸಭೆಯು ಗದ್ದಲದಲ್ಲಿ ಮುಳುಗಿತು.</p>.<p>ಈ ಹಂತದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸದಸ್ಯರ ನಡುವಿನ ವಾಗ್ವಾದಗಳು ತಾರಕಕ್ಕೇರಿದಾಗ ಮಧ್ಯಪ್ರವೇಶಿಸಿದ ಪ್ರಭಾರ ಮೇಯರ್ ಅನ್ವರ್ಬೇಗ್, ‘ಇದು ನನ್ನ ಮೊದಲ ಸಭೆ. ಸಾಂಗವಾಗಿ ನಡೆಯಲು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು.</p>.<p>ಉದಯಗಿರಿ ವಾರ್ಡ್ 13ರ ಕಾಂಗ್ರೆಸ್ ಸದಸ್ಯ ಅಯೂಬ್ಖಾನ್ ಮಾತನಾಡಿ, ‘ಕೋವಿಡ್ ಲಸಿಕೆ ಶಾಸಕರ ಮನೆಯ ಆಸ್ತಿಯೇ’ ಎಂದು ಏರು ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಚರಕ ಆಸ್ಪತ್ರೆಯಲ್ಲಿ 500 ಮಂದಿಗೆ ಟೋಕನ್ ನೀಡಿ, ಕೇವಲ 100 ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಸಮರ್ಪಕವಾಗಿ ಲಸಿಕೆ ಪೂರೈಕೆಯಾಗುತ್ತಿಲ್ಲ’ ಎಂದು ಗೋಕುಲಂನ ವಾರ್ಡ್ 6ರ ಜೆಡಿಎಸ್ ಸದಸ್ಯ ಎಸ್ಬಿಎಂ ಮಂಜು ಕಿಡಿಕಾರಿದರು.</p>.<p>ಸುಭಾಷನಗರದ ವಾರ್ಡ್ ಸಂಖ್ಯೆ 16ರ ಆರಿಫ್ ಹುಸೇನ್, ‘ಲಸಿಕೆ ಪಡೆಯಲು ಒಂದು ದಿನದ ಕೂಲಿಯನ್ನು ನಷ್ಟ ಮಾಡಿಕೊಂಡು ಸಾಲಿನಲ್ಲಿ ನಿಂತು ಲಸಿಕೆ ತೆಗೆದುಕೊಳ್ಳುವ ಸ್ಥಿತಿ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಆರೋಪಗಳಿಗೆ ಪ್ರತಿಕ್ರಿಯಿಸಿದ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ, ‘ಬರುವ ಲಸಿಕೆಗಳನ್ನೆಲ್ಲ ಜುಲೈ ತಿಂಗಳಿನಿಂದ ವಿಧಾನಸಭಾ ಕ್ಷೇತ್ರವಾರು ಸಮನಾಗಿ ಹಂಚಿಕೆ ಮಾಡಲಾಗುತ್ತಿದೆ. ಸದಸ್ಯರ ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗುವುದು’ ಎಂದು ಹೇಳಿದ ಬಳಿಕೆ ಗದ್ದಲ ಕಡಿಮೆಯಾಯಿತು.</p>.<p>ಮಹಿಳಾ ಸದಸ್ಯರ ತರಾಟೆ: ಮೇಯರ್ ಚುನಾವಣೆ ಮುಂದೂಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷಭೇದ ಮರೆತು ಮಹಿಳಾ ಸದಸ್ಯರು ವಾಕ್ಪ್ರಹಾರ ನಡೆಸಿದರು.</p>.<p>ವಾರ್ಡ್ ಸಂಖ್ಯೆ 2ರ ಮಂಚೇಗೌಡನಕೊಪ್ಪಲಿನ ಜೆಡಿಎಸ್ ಸದಸ್ಯೆ ಪ್ರೇಮಾ ವಿಷಯ ಪ್ರಸ್ತಾಪಿಸಿ, ‘ಮೀಸಲಾತಿ ಇದ್ದರೂ ಮೇಯರ್ ಸ್ಥಾನಕ್ಕೆ ಮಹಿಳೆಯರಿಗೆ ಅವಕಾಶ ಮಾಡಿಕೊಡದಿರುವುದರಿಂದ ಹಕ್ಕುಚ್ಯುತಿಯಾಗಿದೆ’ ಎಂದರು.</p>.<p>‘ಮೇಯರ್ ಚುನಾವಣೆಗೆ ಅಡ್ಡಿ ಬರುವ ಕೋವಿಡ್, ಮುಖ್ಯಮಂತ್ರಿ ಬದಲಾವಣೆಗೆ ಅಡ್ಡಿ ಬರುವುದಿಲ್ಲವಂತೆ ಎಂದು ಆರಿಫ್ ಹುಸೇನ್ ವ್ಯಂಗ್ಯವಾಡಿದರು.</p>.<p>ವಾರ್ಡ್ ಸಂಖ್ಯೆ 32ರ ಗೌಸಿಯಾನಗರದ ಎಚ್.ಎಂ.ಶಾಂತಕುಮಾರಿ, ‘ಖಾಲಿ ಸ್ಥಾನಗಳನ್ನು ತುಂಬುವ ವಿಚಾರದಲ್ಲಿ ನಿಯಮಗಳು ಉಲ್ಲಂಘನೆಯಾಗಿವೆ’ ಎಂದು ದೂರಿದರು.</p>.<p>ಮೇಯರ್ ಚುನಾವಣೆಗೆ ನ್ಯಾಯಾಲದಿಂದ ತಡೆಯಾಜ್ಞೆ ತಂದವರು ಕಾಂಗ್ರೆಸ್ ಸದಸ್ಯರೇ ಆಗಿದ್ದಾರೆ ಎಂದು ವಿಜಯನಗರದ ವಾರ್ಡ್ ಸಂಖ್ಯೆ 20ರ ಬಿಜೆಪಿ ಸದಸ್ಯ ಯು.ಎಂ.ಸುಬ್ಬಯ್ಯ ಸೇರಿ ಬಿಜೆಪಿ ಸದಸ್ಯರು ತಿರುಗೇಟು ನೀಡಿದರು.</p>.<p>‘ಮೇಯರ್ ಚುನಾವಣೆ ನಡೆಸಬೇಕು’ ಎಂದು ನಿರ್ಣಯ ಕೈಗೊಂಡ ಸಭೆಯು ಈ ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಿತು.</p>.<p>ಇತ್ತೀಚೆಗೆ ನಿಧನರಾದ ಜಿ.ಮಾದೇಗೌಡ, ಸಂಚಾರಿ ವಿಜಯ್ ಅವರಿಗೆ ಸಭೆಯ ಆರಂಭದಲ್ಲಿ ಎಲ್ಲರೂ ಸಂತಾಪ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>