<p><strong>ಮೈಸೂರು:</strong> ಮೈಸೂರು ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ವರ್ಗಾವಣೆಯ ಹಗ್ಗಜಗ್ಗಾಟ ನಡೆದಿದೆ.</p>.<p>2015ನೇ ಬ್ಯಾಚಿನ ಐಪಿಎಸ್ ಅಧಿಕಾರಿ ಡಾ.ಎ.ಎನ್.ಪ್ರಕಾಶ್ಗೌಡ ಗುರುವಾರ ಮತ್ತೆ ಮೈಸೂರು ಡಿಸಿಪಿಯಾಗಿ ವರ್ಗಗೊಂಡಿದ್ದಾರೆ.</p>.<p>ಹಾಲಿ ಡಿಸಿಪಿಯಾಗಿದ್ದ ಮುತ್ತುರಾಜ್ ಅವರಿಗೆ ಯಾವುದೇ ಸ್ಥಳ, ಹುದ್ದೆ ನಿಯುಕ್ತಿಗೊಳಿಸದೆ ವರ್ಗ ಮಾಡಲಾಗಿದೆ.</p>.<p>ಪ್ರಕಾಶ್ಗೌಡ ಈ ಹಿಂದೆ ಮುತ್ತುರಾಜ್ ಜಾಗಕ್ಕೆ ಡಿಸಿಪಿಯಾಗಿ ವರ್ಗಾವಣೆಗೊಂಡಿದ್ದರು. ಅಧಿಕಾರವನ್ನು ಸ್ವೀಕರಿಸಿದ್ದರು. ಮುತ್ತುರಾಜ್ ಸಿಎಟಿಯಿಂದ ತಡೆಯಾಜ್ಞೆ ತಂದು, ಅದೇ ಹುದ್ದೆಯಲ್ಲಿ ಮುಂದುವರೆದಿದ್ದರು.</p>.<p>ವಿಚಾರಣೆ ನಡೆಸಿದ ಸಿಎಟಿ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದ್ದು, ಪ್ರತಿಯನ್ನು ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ರವಾನಿಸಿದೆ. ಇದರ ಬೆನ್ನಿಗೆ ಈ ವರ್ಗಾವಣೆ ನಡೆದಿದೆ.</p>.<p>ಈ ಹಿಂದೆ ಒಂದು ದಿನವಷ್ಟೇ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಡಾ.ಎ.ಎನ್ ಪ್ರಕಾಶ್ಗೌಡ ಇದೀಗ ಮತ್ತೆ ವರ್ಗಾವಣೆಗೊಂಡಿದ್ದು, ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಮೈಸೂರು ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ವರ್ಗಾವಣೆಯ ಹಗ್ಗಜಗ್ಗಾಟ ನಡೆದಿದೆ.</p>.<p>2015ನೇ ಬ್ಯಾಚಿನ ಐಪಿಎಸ್ ಅಧಿಕಾರಿ ಡಾ.ಎ.ಎನ್.ಪ್ರಕಾಶ್ಗೌಡ ಗುರುವಾರ ಮತ್ತೆ ಮೈಸೂರು ಡಿಸಿಪಿಯಾಗಿ ವರ್ಗಗೊಂಡಿದ್ದಾರೆ.</p>.<p>ಹಾಲಿ ಡಿಸಿಪಿಯಾಗಿದ್ದ ಮುತ್ತುರಾಜ್ ಅವರಿಗೆ ಯಾವುದೇ ಸ್ಥಳ, ಹುದ್ದೆ ನಿಯುಕ್ತಿಗೊಳಿಸದೆ ವರ್ಗ ಮಾಡಲಾಗಿದೆ.</p>.<p>ಪ್ರಕಾಶ್ಗೌಡ ಈ ಹಿಂದೆ ಮುತ್ತುರಾಜ್ ಜಾಗಕ್ಕೆ ಡಿಸಿಪಿಯಾಗಿ ವರ್ಗಾವಣೆಗೊಂಡಿದ್ದರು. ಅಧಿಕಾರವನ್ನು ಸ್ವೀಕರಿಸಿದ್ದರು. ಮುತ್ತುರಾಜ್ ಸಿಎಟಿಯಿಂದ ತಡೆಯಾಜ್ಞೆ ತಂದು, ಅದೇ ಹುದ್ದೆಯಲ್ಲಿ ಮುಂದುವರೆದಿದ್ದರು.</p>.<p>ವಿಚಾರಣೆ ನಡೆಸಿದ ಸಿಎಟಿ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದ್ದು, ಪ್ರತಿಯನ್ನು ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ರವಾನಿಸಿದೆ. ಇದರ ಬೆನ್ನಿಗೆ ಈ ವರ್ಗಾವಣೆ ನಡೆದಿದೆ.</p>.<p>ಈ ಹಿಂದೆ ಒಂದು ದಿನವಷ್ಟೇ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಡಾ.ಎ.ಎನ್ ಪ್ರಕಾಶ್ಗೌಡ ಇದೀಗ ಮತ್ತೆ ವರ್ಗಾವಣೆಗೊಂಡಿದ್ದು, ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>