<p><strong>ಮೈಸೂರು:</strong> ‘ಒಳ ಮೀಸಲಾತಿ ಪರಿಕಲ್ಪನೆ ಸಂವಿಧಾನ ವಿರೋಧಿಯಾಗಿದೆ. ನೂರಾರು ಉಪಜಾತಿಗಳಿದ್ದು, ಯಾರಿಗೆಂದು ಕೊಡುತ್ತೀರಿ? ಮೀಸಲಾತಿ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವಂತೆ ಬೇಕಾದರೆ ಹೋರಾಟ ಮಾಡೋಣ’ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಹೇಳಿದರು.</p>.<p>ಡಾ.ಬಿ.ಆರ್.ಅಂಬೇಡ್ಕರ್ ಪೀಠ, ವಿಸ್ತರಣಾ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ನಡೆದ ‘ನೂರು ವರ್ಷಗಳ ಮೀಸಲಾತಿಯ ನಡಿಗೆ–ಒಂದು ಪರಿಕಲ್ಪನೆ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ಒಳ ಮೀಸಲಾತಿ ನೀಡಲು ಸಾಧ್ಯವೇ ಇಲ್ಲ. ಈ ವಿಚಾರ ಈಗಾಗಲೇ ಆಂಧ್ರಪ್ರದೇಶದಲ್ಲಿ ವಿಫಲವಾಗಿದೆ. ದಲಿತರೆಂದರೆ ನೂರಾರು ವರ್ಷಗಳಿಂದ ನೋವುಂಡು ಬಂದವರು. ಆದರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪಟ್ಟಿಗೆ ಹೊಸದಾಗಿ ಜಾತಿಗಳು ಸೇರುತ್ತಲೇ ಇವೆ. ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಶಿಫಾರಸು ಮಾಡುತ್ತಿವೆ. ಲಾಬಿ ನಡೆಸಿ ಪಟ್ಟಿಗೆ ಸೇರಿಸಲಾಗುತ್ತಿದೆ’ ಎಂದರು.</p>.<p>‘ಇಂತಹ ಗೊಂದಲಗಳಿಂದಾಗಿಯೇ ಈ ಪರಿಕಲ್ಪನೆ ದುರ್ಬಲವಾಗುತ್ತಿದೆ. ಮೀಸಲಾತಿಗೆ ಒಂದು ಮಾನದಂಡ ಇರಬೇಕು. ಯಾವ ಜಾತಿಗಳನ್ನು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿಸ ಬೇಕೆಂದು ಪರಾಮರ್ಶೆ ನಡೆಯಬೇಕು. ಅದಕ್ಕೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಬೇಕು’ ಎಂದು ಅವರು ಸಲಹೆ ನೀಡಿದರು.</p>.<p>‘ರಾಜಕೀಯ ಮೀಸಲಾತಿ ಇಲ್ಲದಿದ್ದರೆ ನನ್ನಂಥವರಿಗೆ ಅವಕಾಶವೇ ಸಿಗುತ್ತಿರಲಿಲ್ಲ. ಲೋಕಸಭೆ, ವಿಧಾನಸಭೆಯಲ್ಲಿ ಇರುವಂತೆ ರಾಜಕೀಯ ಮೀಸಲಾತಿಯನ್ನು ರಾಜ್ಯಸಭೆ ಹಾಗೂ ವಿಧಾನಪರಿಷತ್ತಿಗೂ ವಿಸ್ತರಿಸಬೇಕು’ ಎಂದು ಹೇಳಿದರು.</p>.<p><strong>‘ನ್ಯಾಯಾಲಯವೂ ಸ್ಪಂದಿಸುತ್ತಿಲ್ಲ’</strong></p>.<p>‘ಮೀಸಲಾತಿ ವಿಚಾರದಲ್ಲಿ ನ್ಯಾಯಾಲಯಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಹಲವು ಪ್ರಕರಣಗಳಲ್ಲಿ ಮೀಸಲಾತಿಗೆ ವಿರುದ್ಧವಾಗಿ ತೀರ್ಪು ನೀಡಿವೆ. ಸೂಕ್ಷ್ಮ ವಿಚಾರ ಹಾಗೂ ಸತ್ಯ ಏನೆಂಬುದನ್ನು ಭಾರತದ ನ್ಯಾಯಾಲಯಗಳು ಅರಿಯಬೇಕಿದೆ’ ಎಂದು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಭಿಪ್ರಾಯಪಟ್ಟರು.</p>.<p>ಮೀಸಲಾತಿಗೆ ಸಂಬಂಧಿಸಿದಂತೆ 2012ರಲ್ಲಿ ಸಂಸತ್ತಿನಲ್ಲಿ ಮಂಡಿಸಿದ್ದ 117ನೇ ತಿದ್ದುಪಡಿ ಮಸೂದೆಯ ಅಂಗೀಕಾರಕ್ಕೆ ಪ್ರಯತ್ನಿಸಬೇಕು ಎಂದು ಕೋರಿದರು.</p>.<p><strong>ಪ್ರಸಾದ್ ಮಾತಿಗೆ ವಿರೋಧ</strong></p>.<p>ಒಳ ಮೀಸಲಾತಿ ಬೇಡವೆಂದು ಶ್ರೀನಿವಾಸಪ್ರಸಾದ್ ಭಾಷಣ ಮುಗಿಸುತ್ತಿದ್ದಂತೆಯೇ, ಸಭಿಕರೊಬ್ಬರು ಎದ್ದುನಿಂತು, ‘ನಿಮ್ಮ ಹೇಳಿಕೆಗೆ ನನ್ನ ವಿರೋಧವಿದೆ’ ಎಂದು ಹೇಳಿದರು.</p>.<p>ಆಗ ಪ್ರಸಾದ್, ‘ಒಳಮೀಸಲಾತಿ ಪರಿಕಲ್ಪನೆಯೇ ದಲಿತರಲ್ಲಿ ಒಡಕು ಉಂಟು ಮೂಡಿಸುವಂಥದ್ದಾಗಿದೆ. ಇದನ್ನು ಹೇಗೆ ಸಮರ್ಥಿಸುವುದು? ಸಂವಿಧಾನದಲ್ಲಿ ಇದಕ್ಕೆ ಅವಕಾಶವೇ ಇಲ್ಲ’ ಎಂದು ಸಮರ್ಥಿಸಿಕೊಂಡರು. ಅದಕ್ಕೆ ದನಿಗೂಡಿಸಿದ ನಾಗಮೋಹನದಾಸ್, ‘ಪ್ರಸಾದ್ ವಿಚಾರವನ್ನು ನೀವು ಒಪ್ಪಬೇಕಾಗಿಲ್ಲ. ಆದರೆ, ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಒಳ ಮೀಸಲಾತಿ ಪರಿಕಲ್ಪನೆ ಸಂವಿಧಾನ ವಿರೋಧಿಯಾಗಿದೆ. ನೂರಾರು ಉಪಜಾತಿಗಳಿದ್ದು, ಯಾರಿಗೆಂದು ಕೊಡುತ್ತೀರಿ? ಮೀಸಲಾತಿ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವಂತೆ ಬೇಕಾದರೆ ಹೋರಾಟ ಮಾಡೋಣ’ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಹೇಳಿದರು.</p>.<p>ಡಾ.ಬಿ.ಆರ್.ಅಂಬೇಡ್ಕರ್ ಪೀಠ, ವಿಸ್ತರಣಾ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ನಡೆದ ‘ನೂರು ವರ್ಷಗಳ ಮೀಸಲಾತಿಯ ನಡಿಗೆ–ಒಂದು ಪರಿಕಲ್ಪನೆ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ಒಳ ಮೀಸಲಾತಿ ನೀಡಲು ಸಾಧ್ಯವೇ ಇಲ್ಲ. ಈ ವಿಚಾರ ಈಗಾಗಲೇ ಆಂಧ್ರಪ್ರದೇಶದಲ್ಲಿ ವಿಫಲವಾಗಿದೆ. ದಲಿತರೆಂದರೆ ನೂರಾರು ವರ್ಷಗಳಿಂದ ನೋವುಂಡು ಬಂದವರು. ಆದರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪಟ್ಟಿಗೆ ಹೊಸದಾಗಿ ಜಾತಿಗಳು ಸೇರುತ್ತಲೇ ಇವೆ. ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಶಿಫಾರಸು ಮಾಡುತ್ತಿವೆ. ಲಾಬಿ ನಡೆಸಿ ಪಟ್ಟಿಗೆ ಸೇರಿಸಲಾಗುತ್ತಿದೆ’ ಎಂದರು.</p>.<p>‘ಇಂತಹ ಗೊಂದಲಗಳಿಂದಾಗಿಯೇ ಈ ಪರಿಕಲ್ಪನೆ ದುರ್ಬಲವಾಗುತ್ತಿದೆ. ಮೀಸಲಾತಿಗೆ ಒಂದು ಮಾನದಂಡ ಇರಬೇಕು. ಯಾವ ಜಾತಿಗಳನ್ನು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿಸ ಬೇಕೆಂದು ಪರಾಮರ್ಶೆ ನಡೆಯಬೇಕು. ಅದಕ್ಕೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಬೇಕು’ ಎಂದು ಅವರು ಸಲಹೆ ನೀಡಿದರು.</p>.<p>‘ರಾಜಕೀಯ ಮೀಸಲಾತಿ ಇಲ್ಲದಿದ್ದರೆ ನನ್ನಂಥವರಿಗೆ ಅವಕಾಶವೇ ಸಿಗುತ್ತಿರಲಿಲ್ಲ. ಲೋಕಸಭೆ, ವಿಧಾನಸಭೆಯಲ್ಲಿ ಇರುವಂತೆ ರಾಜಕೀಯ ಮೀಸಲಾತಿಯನ್ನು ರಾಜ್ಯಸಭೆ ಹಾಗೂ ವಿಧಾನಪರಿಷತ್ತಿಗೂ ವಿಸ್ತರಿಸಬೇಕು’ ಎಂದು ಹೇಳಿದರು.</p>.<p><strong>‘ನ್ಯಾಯಾಲಯವೂ ಸ್ಪಂದಿಸುತ್ತಿಲ್ಲ’</strong></p>.<p>‘ಮೀಸಲಾತಿ ವಿಚಾರದಲ್ಲಿ ನ್ಯಾಯಾಲಯಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಹಲವು ಪ್ರಕರಣಗಳಲ್ಲಿ ಮೀಸಲಾತಿಗೆ ವಿರುದ್ಧವಾಗಿ ತೀರ್ಪು ನೀಡಿವೆ. ಸೂಕ್ಷ್ಮ ವಿಚಾರ ಹಾಗೂ ಸತ್ಯ ಏನೆಂಬುದನ್ನು ಭಾರತದ ನ್ಯಾಯಾಲಯಗಳು ಅರಿಯಬೇಕಿದೆ’ ಎಂದು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಭಿಪ್ರಾಯಪಟ್ಟರು.</p>.<p>ಮೀಸಲಾತಿಗೆ ಸಂಬಂಧಿಸಿದಂತೆ 2012ರಲ್ಲಿ ಸಂಸತ್ತಿನಲ್ಲಿ ಮಂಡಿಸಿದ್ದ 117ನೇ ತಿದ್ದುಪಡಿ ಮಸೂದೆಯ ಅಂಗೀಕಾರಕ್ಕೆ ಪ್ರಯತ್ನಿಸಬೇಕು ಎಂದು ಕೋರಿದರು.</p>.<p><strong>ಪ್ರಸಾದ್ ಮಾತಿಗೆ ವಿರೋಧ</strong></p>.<p>ಒಳ ಮೀಸಲಾತಿ ಬೇಡವೆಂದು ಶ್ರೀನಿವಾಸಪ್ರಸಾದ್ ಭಾಷಣ ಮುಗಿಸುತ್ತಿದ್ದಂತೆಯೇ, ಸಭಿಕರೊಬ್ಬರು ಎದ್ದುನಿಂತು, ‘ನಿಮ್ಮ ಹೇಳಿಕೆಗೆ ನನ್ನ ವಿರೋಧವಿದೆ’ ಎಂದು ಹೇಳಿದರು.</p>.<p>ಆಗ ಪ್ರಸಾದ್, ‘ಒಳಮೀಸಲಾತಿ ಪರಿಕಲ್ಪನೆಯೇ ದಲಿತರಲ್ಲಿ ಒಡಕು ಉಂಟು ಮೂಡಿಸುವಂಥದ್ದಾಗಿದೆ. ಇದನ್ನು ಹೇಗೆ ಸಮರ್ಥಿಸುವುದು? ಸಂವಿಧಾನದಲ್ಲಿ ಇದಕ್ಕೆ ಅವಕಾಶವೇ ಇಲ್ಲ’ ಎಂದು ಸಮರ್ಥಿಸಿಕೊಂಡರು. ಅದಕ್ಕೆ ದನಿಗೂಡಿಸಿದ ನಾಗಮೋಹನದಾಸ್, ‘ಪ್ರಸಾದ್ ವಿಚಾರವನ್ನು ನೀವು ಒಪ್ಪಬೇಕಾಗಿಲ್ಲ. ಆದರೆ, ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>