<p><strong>ಮೈಸೂರು:</strong> ಇಲ್ಲಿನ ನಟನ ರಂಗಶಾಲೆ ಯಲ್ಲಿ ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ ವತಿಯಿಂದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಿದ್ವಾನ್ ಗ.ನಾ.ಭಟ್ಟ ಅವರ ‘ಪ್ರಬೋಧ’, ‘ರಂಗಸ್ಪಂದ’ ಹಾಗೂ ‘ನೆಲದ ತಾರೆಗಳು’ ಪುಸ್ತಕಗಳನ್ನು ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಧರಣೀದೇವಿ ಮಾಲಗತ್ತಿ ಬಿಡುಗಡೆ ಮಾಡಿದರು.</p>.<p>ನಂತರ ಮಾತನಾಡಿದ ಧರಣೀ ದೇವಿ ಮಾಲಗತ್ತಿ, ‘ಈ ಮೂರು ಪುಸ್ತಕಗಳಲ್ಲಿ ಅಮೂಲ್ಯವಾದ ಜ್ಞಾನವೇ ಇದೆ. ಇದುವರೆಗೂ ಗ.ನಾ.ಭಟ್ಟ ಅವರು 18 ಪುಸ್ತಕಗಳನ್ನು ಬರೆದಿದ್ದಾರೆ. ಎಲ್ಲವೂ ಸುಲಭವಾಗಿ ಓದಿಸಿಕೊಂಡು ಹೋಗುವಂತಹ ಪುಸ್ತಕಗಳಾಗಿವೆ’ ಎಂದು ಶ್ಲಾಘಿಸಿದರು.</p>.<p>ಇವರು ಸಾಕಷ್ಟು ವಿಷಯಗಳ ಕುರಿತು ಪುಸ್ತಕಗಳನ್ನು ಬರೆದಿದ್ದಾರೆ. ಇನ್ನು ಮುಂದಾದರು ಇಂತಹ ಸಾಹಿತಿಗಳನ್ನು ಗುರುತಿಸುವ ಕೆಲಸ ಆಗಬೇಕು ಎಂದು ಅವರು ತಿಳಿಸಿದರು.</p>.<p>ಹಳೆಯ ಕಾಲದ ಕಟ್ಟುಪಾಡುಗಳನ್ನು ಉಳಿಸಿಕೊಂಡು ಹೋಗಲೇಬೇಕು ಎಂಬ ನಿಯಮವನ್ನು ಹೇರಿಕೊಳ್ಳ ಬಾರದು. ಯಾವುದು ಸಮಾಜಪರವಾಗಿ ರುತ್ತದೋ, ಜೀವಪರವಾಗಿರುತ್ತದೋ ಅಂಥವುಗಳನ್ನು ಮಾತ್ರ ಉಳಿಸಿಕೊಂಡು ಹೋಗಬೇಕು. ಇಂದಿನ ಕಾಲಕ್ಕೆ ಅಗತ್ಯವಲ್ಲ ಕಟ್ಟುಪಾಡುಗಳನ್ನು ಬಿಡಬಹುದು ಎಂದು ಹೇಳಿದರು.</p>.<p>ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡಿ, ‘ಸಂಸ್ಕೃತಿಯ ಬೆಳವಣಿಗೆಯನ್ನು ದಾಖಲಿಸುವುದು ಸಾಹಿತ್ಯದ ಕೆಲಸ. ಗ.ನಾ.ಭಟ್ಟ ಅವರು ಬರೆದಿರುವ ಪುಸ್ತಕದಲ್ಲಿ ನಟನ ರಂಗಶಾಲೆ ನಡೆದು ಬಂದ ಹಾದಿಯ ಕುರಿತು ಲೇಖನ ಇದೆ. ಇದರ ಮೂಲಕ ಈ ರಂಗಮಂದಿರದ ಇತಿಹಾಸವನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ’ ಎಂದು ಹೇಳಿದರು. ನಂತರ, ಅವರು ಪುಸ್ತಕಗಳನ್ನು ಕುರಿತು ಮಾತನಾಡಿದರು.</p>.<p>ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಸಂವಹನ ಸಲಹೆಗಾರ ಎನ್.ರವಿಶಂಕರ್, ನಟನ ರಂಗಶಾಲೆಯ ಸಂಸ್ಥಾಪಕ ಮಂಡ್ಯ ರಮೇಶ್, ಲೇಖಕ ವಿದ್ವಾನ್ ಗ.ನಾ.ಭಟ್ಟ, ವಿದ್ವಾಂಸರಾದ ಎನ್.ಪ್ರಭಾಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಇಲ್ಲಿನ ನಟನ ರಂಗಶಾಲೆ ಯಲ್ಲಿ ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ ವತಿಯಿಂದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಿದ್ವಾನ್ ಗ.ನಾ.ಭಟ್ಟ ಅವರ ‘ಪ್ರಬೋಧ’, ‘ರಂಗಸ್ಪಂದ’ ಹಾಗೂ ‘ನೆಲದ ತಾರೆಗಳು’ ಪುಸ್ತಕಗಳನ್ನು ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಧರಣೀದೇವಿ ಮಾಲಗತ್ತಿ ಬಿಡುಗಡೆ ಮಾಡಿದರು.</p>.<p>ನಂತರ ಮಾತನಾಡಿದ ಧರಣೀ ದೇವಿ ಮಾಲಗತ್ತಿ, ‘ಈ ಮೂರು ಪುಸ್ತಕಗಳಲ್ಲಿ ಅಮೂಲ್ಯವಾದ ಜ್ಞಾನವೇ ಇದೆ. ಇದುವರೆಗೂ ಗ.ನಾ.ಭಟ್ಟ ಅವರು 18 ಪುಸ್ತಕಗಳನ್ನು ಬರೆದಿದ್ದಾರೆ. ಎಲ್ಲವೂ ಸುಲಭವಾಗಿ ಓದಿಸಿಕೊಂಡು ಹೋಗುವಂತಹ ಪುಸ್ತಕಗಳಾಗಿವೆ’ ಎಂದು ಶ್ಲಾಘಿಸಿದರು.</p>.<p>ಇವರು ಸಾಕಷ್ಟು ವಿಷಯಗಳ ಕುರಿತು ಪುಸ್ತಕಗಳನ್ನು ಬರೆದಿದ್ದಾರೆ. ಇನ್ನು ಮುಂದಾದರು ಇಂತಹ ಸಾಹಿತಿಗಳನ್ನು ಗುರುತಿಸುವ ಕೆಲಸ ಆಗಬೇಕು ಎಂದು ಅವರು ತಿಳಿಸಿದರು.</p>.<p>ಹಳೆಯ ಕಾಲದ ಕಟ್ಟುಪಾಡುಗಳನ್ನು ಉಳಿಸಿಕೊಂಡು ಹೋಗಲೇಬೇಕು ಎಂಬ ನಿಯಮವನ್ನು ಹೇರಿಕೊಳ್ಳ ಬಾರದು. ಯಾವುದು ಸಮಾಜಪರವಾಗಿ ರುತ್ತದೋ, ಜೀವಪರವಾಗಿರುತ್ತದೋ ಅಂಥವುಗಳನ್ನು ಮಾತ್ರ ಉಳಿಸಿಕೊಂಡು ಹೋಗಬೇಕು. ಇಂದಿನ ಕಾಲಕ್ಕೆ ಅಗತ್ಯವಲ್ಲ ಕಟ್ಟುಪಾಡುಗಳನ್ನು ಬಿಡಬಹುದು ಎಂದು ಹೇಳಿದರು.</p>.<p>ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡಿ, ‘ಸಂಸ್ಕೃತಿಯ ಬೆಳವಣಿಗೆಯನ್ನು ದಾಖಲಿಸುವುದು ಸಾಹಿತ್ಯದ ಕೆಲಸ. ಗ.ನಾ.ಭಟ್ಟ ಅವರು ಬರೆದಿರುವ ಪುಸ್ತಕದಲ್ಲಿ ನಟನ ರಂಗಶಾಲೆ ನಡೆದು ಬಂದ ಹಾದಿಯ ಕುರಿತು ಲೇಖನ ಇದೆ. ಇದರ ಮೂಲಕ ಈ ರಂಗಮಂದಿರದ ಇತಿಹಾಸವನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ’ ಎಂದು ಹೇಳಿದರು. ನಂತರ, ಅವರು ಪುಸ್ತಕಗಳನ್ನು ಕುರಿತು ಮಾತನಾಡಿದರು.</p>.<p>ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಸಂವಹನ ಸಲಹೆಗಾರ ಎನ್.ರವಿಶಂಕರ್, ನಟನ ರಂಗಶಾಲೆಯ ಸಂಸ್ಥಾಪಕ ಮಂಡ್ಯ ರಮೇಶ್, ಲೇಖಕ ವಿದ್ವಾನ್ ಗ.ನಾ.ಭಟ್ಟ, ವಿದ್ವಾಂಸರಾದ ಎನ್.ಪ್ರಭಾಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>