ಮೈಸೂರು: ನಗರದ ಮಂಡಿ ಮೊಹಲ್ಲಾದ ಕರಿಂ ಬ್ಲಾಕ್ನ ಸಯ್ಯದ್ ಜಾಕೀರ್ ಎಂಬುವರ ನಿವಾಸದಲ್ಲಿ 504 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದೆ.
‘ತಮ್ಮನೊಂದಿಗೆ ಮನೆಯಲ್ಲಿ ಮಲಗಿದ್ದೆ. ರಾತ್ರಿ ವೇಳೆ ಕಿಟಕಿಯಿಂದ ಮುಖ್ಯ ಬಾಗಿಲಿನ ಚಿಲಕ ತೆಗೆದುಕೊಂಡು ಒಳ ನುಗ್ಗಿರುವ ಕಳ್ಳರು, ನಾವು ಮಲಗಿದ್ದ ರೂಮುಗಳ ಬಾಗಿಲನ್ನು ಹೊರಗಿನಿಂದ ಹಾಕಿಕೊಂಡಿದ್ದಾರೆ.
ನಂತರ ಮತ್ತೊಂದು ರೂಮಿನಲ್ಲಿದ್ದ ಬೀರುವಿನ ಬಾಗಿಲು ತೆಗೆದು, ಅದರೊಳಗಿದ್ದ ಅರ್ಧ ಕೆ.ಜಿ.ತೂಕದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ ಎಂದು ಸಯ್ಯದ್ ಜಾಕೀರ್ ದೂರು ಕೊಟ್ಟಿದ್ದಾರೆ’ ಎಂದು ಮಂಡಿ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.