‘ಆ.10ರಂದು ನನ್ನ ಜನ್ಮದಿನ. ಈ ಬಾರಿ ಹುಟ್ಟುಹಬ್ಬದ ಆಚರಣೆ ರದ್ದು ಮಾಡೋಣ. ನೊಂದವರಿಗೆ ನೆರವಾಗೋಣ. ನಮ್ಮ ನೋವು ನಮಗೆ ಗೊತ್ತಾದ ರೀತಿಯಲ್ಲೇ, ಇತರರ ನೋವು ಅರಿವಿಗೆ ಬಂದರೆ ಅದು ಮನುಷ್ಯತ್ವದ ಲಕ್ಷಣ. ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯವಿರುವವರಿಗೆ ಈ ಹಣವನ್ನು ನೀಡಿ ಪರರ ಕಷ್ಟಗಳಿಗೆ, ನೋವಿಗೆ ಸ್ಪಂದಿಸೋಣ’ ಎಂದು ಸಾಮಾಜಿಕ ಜಾಲತಾಣದ ಮೂಲಕ ಶಾಸಕರು ತಮ್ಮ ಬೆಂಬಲಿಗರು, ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.