ಕೃಷ್ಣಮೂರ್ತಿಪುರಂ, ಚಾಮುಂಡಿಪುರಂ, ಸರಸ್ವತಿಪುರಂ ಹಾಗೂ ಮಿನಿ ವಿಧಾನಸೌಧದ ಎದುರು ಮರಗಳು ಉರುಳಿವೆ. ಜೆ.ಸಿ.ಬಡಾವಣೆ, ಕೆ.ಸಿ.ಬಡಾವಣೆ, ಜಯನಗರ, ಚಿನ್ನಗಿರಿಕೊಪ್ಪಲು ಬಡಾವಣೆಗಳಲ್ಲಿನ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಪಾಲಿಕೆಯ 3 ಅಭಯ್ ರಕ್ಷಣಾ ತಂಡಗಳು ರಕ್ಷಣಾ ಕಾರ್ಯ ನಡೆಸಿವೆ. ಜೆ.ಸಿ.ನಗರದ 3 ನೇ ಕ್ರಾಸ್ ನಲ್ಲಿ ಚರಂಡಿಯಲ್ಲಿ ಸಿಲುಕಿದ್ದ ಕರುವನ್ನು ರಕ್ಷಣಾ ತಂಡ ರಕ್ಷಿಸಿದೆ.