ಮಳೆ ಅಭಾವ ಹಾಗೂ ಹೆಚ್ಚಿರುವ ಬಿಸಿಲಿನ ತಾಪದ ಜೊತೆಗೆ ಕಳೆದ ವರ್ಷ ಏರಿ ಒಡೆದು ಹಾಕಿದ್ದರಿಂದ ಲಿಂಗಾಂಬುಧಿ ಕೆರೆ ಸಂಪೂರ್ಣ ಬತ್ತಿ ಹೋಗಿದೆ. ಸುತ್ತಮುತ್ತ ಬಡಾವಣೆಗಳು ನಿರ್ಮಾಣವಾಗಿದ್ದು, ಕೆರೆಗೆ ನೀರು ಪೂರೈಸುವ ರಾಜಕಾಲುವೆಗಳು ಒತ್ತುವರಿ ಆಗಿವೆ. ಇದರಿಂದ ಜಲಚರಗಳಿಗೂ, ಪ್ರಾಣಿ ಪಕ್ಷಿಗಳಿಗೂ ತೊಂದರೆ ಉಂಟಾಗಿದೆ. ಕೆರೆಯ ದಡದಲ್ಲಿ ತ್ಯಾಜ್ಯ ಸುರಿಯಲಾಗಿದೆ.