ಸತ್ಯಕ್ಕೆ ದೂರ– ಬಸವರಾಜ ಬೊಮ್ಮಾಯಿ
ಆರೋಪ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ವೆಂಟಿಲೇಟರ್ನ್ನು ಕೇಂದ್ರ ಸರ್ಕಾರ ಪೂರೈಸಿದೆ, ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇಲ್ಲ. ಲಕ್ಷ್ಮಣ್ ಹೇಳಿರುವ ಮಂಜುನಾಥ್ ನನ್ನ ಸಂಬಂಧಿಕರಲ್ಲ. ನಾನು ಕೋವಿಡ್ ಸಂಬಂಧಪಟ್ಟ ಖರೀದಿ ವ್ಯವಹಾರದ ಯಾವುದೇ ಸಮಿತಿಯಲ್ಲೂ ಇಲ್ಲ. ಸುಮ್ಮನೇ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಬಾರದು’ ಎಂದು ತಿಳಿಸಿದರು.