<p><strong>ಮೈಸೂರು:</strong> ರಂಗಾಯಣದ ಬಹುರೂಪಿ ರಂಗೋತ್ಸವದಲ್ಲಿ ‘ಮುಖ್ಯಮಂತ್ರಿ‘ ಚಂದ್ರು ಅಭಿನಯದ 'ಮತ್ತೆ ಮುಖ್ಯಮಂತ್ರಿ' ನಾಟಕ ಮಾರ್ಚ್ 20 ರಂದು ಸಂಜೆ 7ಕ್ಕೆ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.</p>.<p>'ಮುಖ್ಯಮಂತ್ರಿ' ನಾಟಕ 735ಕ್ಕೂ ಅಧಿಕ ಪ್ರದರ್ಶನಗಳನ್ನು ಕಂಡು ದಾಖಲೆ ಸೃಷ್ಟಿಸಿತ್ತು. ಇದೀಗ ‘ಮುಖ್ಯಮಂತ್ರಿ’ ಚಂದ್ರು ಅವರೇ ಪ್ರಧಾನ ಪಾತ್ರದಲ್ಲಿರುವ 'ಮತ್ತೆ ಮುಖ್ಯಮಂತ್ರಿ' ಹೊಸ ನಾಟಕ ಸಿದ್ಧವಾಗಿದೆ.</p>.<p>ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಟ ‘ಮುಖ್ಯಮಂತ್ರಿ‘ ಚಂದ್ರು, ‘‘ಮುಖ್ಯಮಂತ್ರಿ’ ನಾಟಕವನ್ನೇ ಮತ್ತೆ ಮತ್ತೆ ಪ್ರದರ್ಶಿಸುವ ಬದಲು ಭಿನ್ನವಾದ ನಾಟಕ ಮಾಡಬೇಕೆಂಬ ಉದ್ದೇಶದಿಂದ ಹೊಸ ನಾಟಕ ತಯಾರಾಗಿದೆ’ ಎಂದರು.</p>.<p>‘ಹಳೆಯ ನಾಟಕಕ್ಕೂ, ಹೊಸದಕ್ಕೂ ಸಂಬಂಧವಿಲ್ಲ. ಡಾ.ಕೆ.ವೈ.ನಾರಾಯಣಸ್ವಾಮಿ ರಚಿಸಿರುವ ನಾಟಕ ಸಂಪೂರ್ಣ ಭಿನ್ನವಾಗಿದೆ. ಬೆಂಗಳೂರಿನಲ್ಲಿ ತಾಂತ್ರಿಕ ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರೇಕ್ಷಕರ ಮುಂದೆ ಮೊದಲ ಪ್ರದರ್ಶನ ಮೈಸೂರಿನಲ್ಲಿ ನಡೆಯಲಿದೆ’ ಎಂದರು.</p>.<p>‘ರಾಜ್ಯಕ್ಕೆ ಎಂಥ ಮುಖ್ಯಮಂತ್ರಿ ಬೇಕು? ನಾವು ಬಯಸಿದಂತಹ ವ್ಯಕ್ತಿ ಮುಖ್ಯಮಂತ್ರಿಯಾದರೆ ಏನೇನು ಆಗಬಹುದೆಂಬುದನ್ನು ಚಿತ್ರಿಸಲಾಗಿದೆ. ವ್ಯಕ್ತಿಗತವಾಗಿ ಯಾರನ್ನೂ ಗುರಿಯಾಗಿಸದೆಯೇ, ಪ್ರಜಾಪ್ರಭುತ್ವದ ಲೋಪಗಳನ್ನು ಎತ್ತಿತೋರಿಸಲು ಪ್ರಯತ್ನಿಸಿದ್ದೇವೆ. ಹಳೆಯ ನಾಟಕಕ್ಕಿಂತ ಈ ನಾಟಕದ ಪಾತ್ರ ತುಂಬಾ ಕಷ್ಟಕರವಾಗಿತ್ತು. ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆಂಬ ವಿಶ್ವಾಸವಿದೆ’ ಎಂದು ನುಡಿದರು.</p>.<p>ನಾಟಕದ ನಿರ್ದೇಶಕ ಡಾ.ಬಿ.ವಿ.ರಾಜಾರಾಂ ಮಾತನಾಡಿ, ‘ಚಂದ್ರು ಅವರು ‘ಹಳೆಯ ನಾಟಕದಲ್ಲಿ 1960–70ರ ದಶಕದ ರಾಜಕೀಯ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಇದು 2022ರ ನಾಟಕ. ಈಗಿನ ರಾಜಕೀಯದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ತೋರಿಸಿದ್ದೇವೆ’ ಎಂದರು. ಪ್ರಕಾಶಕ ಗಣೇಶ ಅಮೀನಗಡ ಸುದ್ದಿಗೋಷ್ಠಿಯಲ್ಲಿದ್ದರು.</p>.<p><strong>‘ಬಹುಮುಖಿಯಾಗಿರಬೇಕು’:</strong></p>.<p>‘ರಂಗಾಯಣದ ನಿರ್ದೇಶಕರ ಸ್ಥಾನದಲ್ಲಿರುವವರು ಏಕಮುಖಿಯಾಗಿ ವರ್ತಿಸದೆ, ಬಹುಮುಖಿಯಾಗಿರಬೇಕು’ ಎಂದು ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.</p>.<p>‘ಬೇರೆಯವರ ಭಾವನೆಗಳಿಗೆ ನೋವುಂಟು ಮಾಡಬಾರದು. ಯಾವುದೆ ಸಿದ್ಧಾಂತವನ್ನು ಹೇರಬಾರದು. ಒಪ್ಪುವುದು, ಬಿಡುವುದು ಬೇರೆ ವಿಚಾರ. ಸಿದ್ಧಾಂತದಿಂದ ಸಮಾಜಕ್ಕೆ ತೊಂದರೆ ಇದೆಯೇ, ಇಲ್ಲವೇ ಎಂಬುದನ್ನು ಗಮನಿಸಿ ಮಾತನಾಡಬೇಕು. ಪ್ರಚಾರಕ್ಕಾಗಿ ಏನೆಲ್ಲಾ ಮಾತನಾಡುವುದು ತಪ್ಪು’ ಎಂದರು.</p>.<p>‘ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರೊಂದಿಗೆ ನಾನು ಕೆಲಸ ಮಾಡಿಲ್ಲ. ಆದ್ದರಿಂದ ಅವರ ಕಾರ್ಯವೈಖರಿ ಬಗ್ಗೆ ಏನೂ ಹೇಳಲು ಆಗುವುದಿಲ್ಲ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ರಂಗಾಯಣದ ಬಹುರೂಪಿ ರಂಗೋತ್ಸವದಲ್ಲಿ ‘ಮುಖ್ಯಮಂತ್ರಿ‘ ಚಂದ್ರು ಅಭಿನಯದ 'ಮತ್ತೆ ಮುಖ್ಯಮಂತ್ರಿ' ನಾಟಕ ಮಾರ್ಚ್ 20 ರಂದು ಸಂಜೆ 7ಕ್ಕೆ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.</p>.<p>'ಮುಖ್ಯಮಂತ್ರಿ' ನಾಟಕ 735ಕ್ಕೂ ಅಧಿಕ ಪ್ರದರ್ಶನಗಳನ್ನು ಕಂಡು ದಾಖಲೆ ಸೃಷ್ಟಿಸಿತ್ತು. ಇದೀಗ ‘ಮುಖ್ಯಮಂತ್ರಿ’ ಚಂದ್ರು ಅವರೇ ಪ್ರಧಾನ ಪಾತ್ರದಲ್ಲಿರುವ 'ಮತ್ತೆ ಮುಖ್ಯಮಂತ್ರಿ' ಹೊಸ ನಾಟಕ ಸಿದ್ಧವಾಗಿದೆ.</p>.<p>ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಟ ‘ಮುಖ್ಯಮಂತ್ರಿ‘ ಚಂದ್ರು, ‘‘ಮುಖ್ಯಮಂತ್ರಿ’ ನಾಟಕವನ್ನೇ ಮತ್ತೆ ಮತ್ತೆ ಪ್ರದರ್ಶಿಸುವ ಬದಲು ಭಿನ್ನವಾದ ನಾಟಕ ಮಾಡಬೇಕೆಂಬ ಉದ್ದೇಶದಿಂದ ಹೊಸ ನಾಟಕ ತಯಾರಾಗಿದೆ’ ಎಂದರು.</p>.<p>‘ಹಳೆಯ ನಾಟಕಕ್ಕೂ, ಹೊಸದಕ್ಕೂ ಸಂಬಂಧವಿಲ್ಲ. ಡಾ.ಕೆ.ವೈ.ನಾರಾಯಣಸ್ವಾಮಿ ರಚಿಸಿರುವ ನಾಟಕ ಸಂಪೂರ್ಣ ಭಿನ್ನವಾಗಿದೆ. ಬೆಂಗಳೂರಿನಲ್ಲಿ ತಾಂತ್ರಿಕ ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರೇಕ್ಷಕರ ಮುಂದೆ ಮೊದಲ ಪ್ರದರ್ಶನ ಮೈಸೂರಿನಲ್ಲಿ ನಡೆಯಲಿದೆ’ ಎಂದರು.</p>.<p>‘ರಾಜ್ಯಕ್ಕೆ ಎಂಥ ಮುಖ್ಯಮಂತ್ರಿ ಬೇಕು? ನಾವು ಬಯಸಿದಂತಹ ವ್ಯಕ್ತಿ ಮುಖ್ಯಮಂತ್ರಿಯಾದರೆ ಏನೇನು ಆಗಬಹುದೆಂಬುದನ್ನು ಚಿತ್ರಿಸಲಾಗಿದೆ. ವ್ಯಕ್ತಿಗತವಾಗಿ ಯಾರನ್ನೂ ಗುರಿಯಾಗಿಸದೆಯೇ, ಪ್ರಜಾಪ್ರಭುತ್ವದ ಲೋಪಗಳನ್ನು ಎತ್ತಿತೋರಿಸಲು ಪ್ರಯತ್ನಿಸಿದ್ದೇವೆ. ಹಳೆಯ ನಾಟಕಕ್ಕಿಂತ ಈ ನಾಟಕದ ಪಾತ್ರ ತುಂಬಾ ಕಷ್ಟಕರವಾಗಿತ್ತು. ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆಂಬ ವಿಶ್ವಾಸವಿದೆ’ ಎಂದು ನುಡಿದರು.</p>.<p>ನಾಟಕದ ನಿರ್ದೇಶಕ ಡಾ.ಬಿ.ವಿ.ರಾಜಾರಾಂ ಮಾತನಾಡಿ, ‘ಚಂದ್ರು ಅವರು ‘ಹಳೆಯ ನಾಟಕದಲ್ಲಿ 1960–70ರ ದಶಕದ ರಾಜಕೀಯ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಇದು 2022ರ ನಾಟಕ. ಈಗಿನ ರಾಜಕೀಯದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ತೋರಿಸಿದ್ದೇವೆ’ ಎಂದರು. ಪ್ರಕಾಶಕ ಗಣೇಶ ಅಮೀನಗಡ ಸುದ್ದಿಗೋಷ್ಠಿಯಲ್ಲಿದ್ದರು.</p>.<p><strong>‘ಬಹುಮುಖಿಯಾಗಿರಬೇಕು’:</strong></p>.<p>‘ರಂಗಾಯಣದ ನಿರ್ದೇಶಕರ ಸ್ಥಾನದಲ್ಲಿರುವವರು ಏಕಮುಖಿಯಾಗಿ ವರ್ತಿಸದೆ, ಬಹುಮುಖಿಯಾಗಿರಬೇಕು’ ಎಂದು ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.</p>.<p>‘ಬೇರೆಯವರ ಭಾವನೆಗಳಿಗೆ ನೋವುಂಟು ಮಾಡಬಾರದು. ಯಾವುದೆ ಸಿದ್ಧಾಂತವನ್ನು ಹೇರಬಾರದು. ಒಪ್ಪುವುದು, ಬಿಡುವುದು ಬೇರೆ ವಿಚಾರ. ಸಿದ್ಧಾಂತದಿಂದ ಸಮಾಜಕ್ಕೆ ತೊಂದರೆ ಇದೆಯೇ, ಇಲ್ಲವೇ ಎಂಬುದನ್ನು ಗಮನಿಸಿ ಮಾತನಾಡಬೇಕು. ಪ್ರಚಾರಕ್ಕಾಗಿ ಏನೆಲ್ಲಾ ಮಾತನಾಡುವುದು ತಪ್ಪು’ ಎಂದರು.</p>.<p>‘ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರೊಂದಿಗೆ ನಾನು ಕೆಲಸ ಮಾಡಿಲ್ಲ. ಆದ್ದರಿಂದ ಅವರ ಕಾರ್ಯವೈಖರಿ ಬಗ್ಗೆ ಏನೂ ಹೇಳಲು ಆಗುವುದಿಲ್ಲ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>