ಮೈಸೂರು: ದಸರಾ ಮಹೋತ್ಸವಕ್ಕಾಗಿ ಇಲ್ಲಿಗೆ ಬಂದಿರುವ ಗಜಪಡೆಯ ತಾಲೀಮು ಮಂಗಳವಾರ ಮುಂದುವರಿದಿದೆ.
ಧನಂಜಯ ಆನೆಯು ಸುಮಾರು 600 ಕೆ.ಜಿ. ತೂಕವನ್ನು ಹೊತ್ತು ತಾಲೀಮಿನಲ್ಲಿ ಭಾಗಿಯಾಯಿತು.
ಧನಂಜಯನ ಜೊತೆ ಉಳಿದ 7 ಆನೆಗಳು ಹೆಜ್ಜೆ ಹಾಕಿದವು. ಸೋಮವಾರ ಅಭಿಮನ್ಯು ಮರಳಿನ ಮೂಟೆಗಳನ್ನು ಹೊತ್ತು ತಾಲೀಮು ನಡೆಸಿತ್ತು. ಬುಧವಾರ ಗೋಪಾಲಸ್ವಾಮಿ ಭಾರ ಹೊರಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.