<p>ಮೈಸೂರು: ಕೊರೊನಾ ಸೋಂಕಿನ ಕರಿ ನೆರಳಿನಲ್ಲಿ ಈ ಬಾರಿಯ ಹೊಸ ವರ್ಷಾಚರಣೆ ನಗರದಲ್ಲಿ ನಡೆದಿದೆ. ಒಂದೆಡೆ ಹೋಟೆಲ್ ಉದ್ಯಮಕ್ಕೆ ಅತೀವ ನಷ್ಟ ಉಂಟು ಮಾಡಿದ್ದರೆ, ಮತ್ತೊಂ<br />ದೆಡೆ ಬೇಕರಿ ಮತ್ತು ಮದ್ಯದಂಗಡಿಗಳು ಜನರಿಂದ ತುಂಬಿ ಹೋಗಿದ್ದ ದೃಶ್ಯಗಳು ಗುರುವಾರ ಕಂಡು ಬಂತು.</p>.<p>ರಸ್ತೆಗಳಲ್ಲಿ ಹಿಂದಿನ ವರ್ಷಗಳಂತೆ ಸಂಭ್ರಮದ ಕಳೆ ಕಾಣಲಿಲ್ಲ. ನಿತ್ಯದಂತೆ ಸಂಚಾರ ಹಲವು ರಸ್ತೆಗಳಲ್ಲಿ ಕಂಡು ಬಂತು. ಅರಮನೆ ಸುತ್ತಲಿನ ರಸ್ತೆಗಳು ಬಿಕೊ ಎನ್ನುತ್ತಿದ್ದವು.</p>.<p>ಮದ್ಯದಂಗಡಿಗಳು ಹಾಗೂ ಬೇಕರಿಗಳು ಜನರಿಂದ ತುಂಬಿ ತುಳುಕುತ್ತಿ<br />ದ್ದವು. ಹಲವು ಪ್ರತಿಷ್ಠಿತ ಬೇಕರಿಗಳು ತಮ್ಮ ಅಂಗಡಿಗಳಿಗೆ ವಿಶೇಷ ಅಲಂಕಾರ<br />ಗಳನ್ನು ಮಾಡಿ ಜನರನ್ನು ಸೆಳೆಯುತ್ತಿ<br />ದ್ದವು. ವಿದ್ಯುತ್ ದೀಪಾಲಂಕರಾಗಳು ಮಾತ್ರವಲ್ಲ ಶಾಮಿಯಾನ ಹಾಕಿ ಗ್ರಾಹಕ<br />ರನ್ನು ಸೆಳೆಯುವ ಕಸರತ್ತು ನಡೆದಿತ್ತು.</p>.<p>ಬೇಕರಿಗಳಲ್ಲಿ ವಿಶೇಷ ವಿನ್ಯಾಸಗಳ ಕೇಕ್ಗಳನ್ನು ತಯಾರಿಸಲಾಗಿತ್ತು. ಗಾತ್ರ ಮತ್ತು ವಿನ್ಯಾಸಕ್ಕೆ ತಕ್ಕಂತೆ ದರ ನಿಗದಿಯಾಗಿತ್ತು. ಕೇಕ್ ಖರೀದಿಗೆ ಯುವತಿಯರೂ ಸೇರಿದಂತೆ ಯುವ ಸಮುದಾಯ ಮುಗಿಬಿದ್ದಿತ್ತು.</p>.<p>ಮದ್ಯದಂಗಡಿಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಹಲವು ತೆರನಾದ ಮದ್ಯದ ಬಾಟಲಿಗಳನ್ನು ಖರೀದಿಸಿ ತಮ್ಮ ತಮ್ಮ ಮನೆ ಅಥವಾ ರೂಂಗಳಿಗೆ ಕೊಂಡೊಯ್ದು ಮನೆಗಳಲ್ಲೇ ಔತಣಕೂಟ ನಡೆಸಿದರು. ಹೋಟೆಲ್ಗಳಲ್ಲಿ ವಿಶೇಷ ಕಾರ್ಯಕ್ರಮಗಳು ಇಲ್ಲದ್ದರಿಂದ ಮದ್ಯದಂಗಡಿಗಳಿಗೆ ಹೆಚ್ಚಿನ ಜನರು ಬರುವಂತಾಯಿತು.</p>.<p>ಮಂಕಾದ ಹೋಟೆಲ್ಗಳು: ನಗರದ ಬಹುತೇಕ ಹೋಟೆಲ್ಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಇರಲಿಲ್ಲ. ಔತಣಕೂಟಗಳು ತೀರಾ ಬೆರಳೆಣಿಕೆ ಸಂಖ್ಯೆಯಷ್ಟು ಇದ್ದವು. ಹಿಂದಿನ ವರ್ಷಗಳಂತೆ ಫ್ಯಾಷನ್ ಶೊಗಳಾಗಲಿ, ವಿಶೇಷ ಮನರಂಜನಾ ಕಾರ್ಯಕ್ರಮಗಳಾಗಲಿ, ನೃತ್ಯ, ಸಂಗೀತದ ಸಂಜೆಗಳಾಗಲಿ ಆಯೋಜನೆಗೊಂಡಿರಲಿಲ್ಲ. ಎಂದಿನಂತೆ ಹೋಟೆಲ್ಗಳಲ್ಲಿ ಸಾಮಾನ್ಯ ಸ್ಥಿತಿ ಇತ್ತು.</p>.<p>ನಿಷೇಧಾಜ್ಞೆ ಹೇರಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೋಟೆಲ್ಗಳಿಗೆ ಭೋಜನದಂತಹ ಕಾರ್ಯಕ್ರಮಕ್ಕೂ ಬಂದಿರಲಿಲ್ಲ. ಬೆರಳೆಣಿಕೆಯಷ್ಟು ಹೋಟೆಲ್ಗಳಲ್ಲಿ ಮಾತ್ರವೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾಣಿಸಿಕೊಂಡರು.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹೋಟೆಲ್ ಮಾಲೀಕರ ಸಂಘದ ನಗರ ಘಟಕದ ಅಧ್ಯಕ್ಷ ಸಿ.ನಾರಾಯಣಗೌಡ, ‘ಕೇವಲ ಒಂದು ದಿನಕ್ಕೆ ಹೋಟಲ್ ಉದ್ಯಮಕ್ಕೆ ₹ 2 ಕೋಟಿಯಷ್ಟು ನಷ್ಟ ಉಂಟಾಗಿದೆ. ಯಾವುದೇ ಹೋಟೆಲ್ಗಳಲ್ಲೂ ಔತಣಕೂಟಗಳು ನಡೆದಿಲ್ಲ’ ಎಂದು ತಿಳಿಸಿದರು.</p>.<p>ರಾತ್ರಿ 12 ಗಂಟೆಯಾಗುತ್ತಿದ್ದಂತೆ ಹಲವೆಡೆ ಪಟಾಕಿ ಸಿಡಿಸಿ ಜನರು ಸಂಭ್ರಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಕೊರೊನಾ ಸೋಂಕಿನ ಕರಿ ನೆರಳಿನಲ್ಲಿ ಈ ಬಾರಿಯ ಹೊಸ ವರ್ಷಾಚರಣೆ ನಗರದಲ್ಲಿ ನಡೆದಿದೆ. ಒಂದೆಡೆ ಹೋಟೆಲ್ ಉದ್ಯಮಕ್ಕೆ ಅತೀವ ನಷ್ಟ ಉಂಟು ಮಾಡಿದ್ದರೆ, ಮತ್ತೊಂ<br />ದೆಡೆ ಬೇಕರಿ ಮತ್ತು ಮದ್ಯದಂಗಡಿಗಳು ಜನರಿಂದ ತುಂಬಿ ಹೋಗಿದ್ದ ದೃಶ್ಯಗಳು ಗುರುವಾರ ಕಂಡು ಬಂತು.</p>.<p>ರಸ್ತೆಗಳಲ್ಲಿ ಹಿಂದಿನ ವರ್ಷಗಳಂತೆ ಸಂಭ್ರಮದ ಕಳೆ ಕಾಣಲಿಲ್ಲ. ನಿತ್ಯದಂತೆ ಸಂಚಾರ ಹಲವು ರಸ್ತೆಗಳಲ್ಲಿ ಕಂಡು ಬಂತು. ಅರಮನೆ ಸುತ್ತಲಿನ ರಸ್ತೆಗಳು ಬಿಕೊ ಎನ್ನುತ್ತಿದ್ದವು.</p>.<p>ಮದ್ಯದಂಗಡಿಗಳು ಹಾಗೂ ಬೇಕರಿಗಳು ಜನರಿಂದ ತುಂಬಿ ತುಳುಕುತ್ತಿ<br />ದ್ದವು. ಹಲವು ಪ್ರತಿಷ್ಠಿತ ಬೇಕರಿಗಳು ತಮ್ಮ ಅಂಗಡಿಗಳಿಗೆ ವಿಶೇಷ ಅಲಂಕಾರ<br />ಗಳನ್ನು ಮಾಡಿ ಜನರನ್ನು ಸೆಳೆಯುತ್ತಿ<br />ದ್ದವು. ವಿದ್ಯುತ್ ದೀಪಾಲಂಕರಾಗಳು ಮಾತ್ರವಲ್ಲ ಶಾಮಿಯಾನ ಹಾಕಿ ಗ್ರಾಹಕ<br />ರನ್ನು ಸೆಳೆಯುವ ಕಸರತ್ತು ನಡೆದಿತ್ತು.</p>.<p>ಬೇಕರಿಗಳಲ್ಲಿ ವಿಶೇಷ ವಿನ್ಯಾಸಗಳ ಕೇಕ್ಗಳನ್ನು ತಯಾರಿಸಲಾಗಿತ್ತು. ಗಾತ್ರ ಮತ್ತು ವಿನ್ಯಾಸಕ್ಕೆ ತಕ್ಕಂತೆ ದರ ನಿಗದಿಯಾಗಿತ್ತು. ಕೇಕ್ ಖರೀದಿಗೆ ಯುವತಿಯರೂ ಸೇರಿದಂತೆ ಯುವ ಸಮುದಾಯ ಮುಗಿಬಿದ್ದಿತ್ತು.</p>.<p>ಮದ್ಯದಂಗಡಿಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಹಲವು ತೆರನಾದ ಮದ್ಯದ ಬಾಟಲಿಗಳನ್ನು ಖರೀದಿಸಿ ತಮ್ಮ ತಮ್ಮ ಮನೆ ಅಥವಾ ರೂಂಗಳಿಗೆ ಕೊಂಡೊಯ್ದು ಮನೆಗಳಲ್ಲೇ ಔತಣಕೂಟ ನಡೆಸಿದರು. ಹೋಟೆಲ್ಗಳಲ್ಲಿ ವಿಶೇಷ ಕಾರ್ಯಕ್ರಮಗಳು ಇಲ್ಲದ್ದರಿಂದ ಮದ್ಯದಂಗಡಿಗಳಿಗೆ ಹೆಚ್ಚಿನ ಜನರು ಬರುವಂತಾಯಿತು.</p>.<p>ಮಂಕಾದ ಹೋಟೆಲ್ಗಳು: ನಗರದ ಬಹುತೇಕ ಹೋಟೆಲ್ಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಇರಲಿಲ್ಲ. ಔತಣಕೂಟಗಳು ತೀರಾ ಬೆರಳೆಣಿಕೆ ಸಂಖ್ಯೆಯಷ್ಟು ಇದ್ದವು. ಹಿಂದಿನ ವರ್ಷಗಳಂತೆ ಫ್ಯಾಷನ್ ಶೊಗಳಾಗಲಿ, ವಿಶೇಷ ಮನರಂಜನಾ ಕಾರ್ಯಕ್ರಮಗಳಾಗಲಿ, ನೃತ್ಯ, ಸಂಗೀತದ ಸಂಜೆಗಳಾಗಲಿ ಆಯೋಜನೆಗೊಂಡಿರಲಿಲ್ಲ. ಎಂದಿನಂತೆ ಹೋಟೆಲ್ಗಳಲ್ಲಿ ಸಾಮಾನ್ಯ ಸ್ಥಿತಿ ಇತ್ತು.</p>.<p>ನಿಷೇಧಾಜ್ಞೆ ಹೇರಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೋಟೆಲ್ಗಳಿಗೆ ಭೋಜನದಂತಹ ಕಾರ್ಯಕ್ರಮಕ್ಕೂ ಬಂದಿರಲಿಲ್ಲ. ಬೆರಳೆಣಿಕೆಯಷ್ಟು ಹೋಟೆಲ್ಗಳಲ್ಲಿ ಮಾತ್ರವೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾಣಿಸಿಕೊಂಡರು.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹೋಟೆಲ್ ಮಾಲೀಕರ ಸಂಘದ ನಗರ ಘಟಕದ ಅಧ್ಯಕ್ಷ ಸಿ.ನಾರಾಯಣಗೌಡ, ‘ಕೇವಲ ಒಂದು ದಿನಕ್ಕೆ ಹೋಟಲ್ ಉದ್ಯಮಕ್ಕೆ ₹ 2 ಕೋಟಿಯಷ್ಟು ನಷ್ಟ ಉಂಟಾಗಿದೆ. ಯಾವುದೇ ಹೋಟೆಲ್ಗಳಲ್ಲೂ ಔತಣಕೂಟಗಳು ನಡೆದಿಲ್ಲ’ ಎಂದು ತಿಳಿಸಿದರು.</p>.<p>ರಾತ್ರಿ 12 ಗಂಟೆಯಾಗುತ್ತಿದ್ದಂತೆ ಹಲವೆಡೆ ಪಟಾಕಿ ಸಿಡಿಸಿ ಜನರು ಸಂಭ್ರಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>