<p><strong>ಮೈಸೂರು: </strong>ಇಲ್ಲಿನ ಸರಸ್ವತಿಪುರಂ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದರೋಡೆಗೆ ಹೊಂಚು ಹಾಕಿದ್ದ 8 ಮಂದಿಯನ್ನು ಬಂಧಿಸಿದ್ದಾರೆ.</p>.<p>ಶರತ್ (25), ಸುಮಂತ್ (24), ಧರ್ಮೇಶ್ (22), ದಿನೇಶ್ (26), ಕಾರ್ತೀಕ್ (25), ಮಹದೇವ (24), ಸುನಿಲ್ಕುಮಾರ್ (23), ಶಶಾಂಕ್ (22) ಬಂಧಿತರು ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್ಗೌಡ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಬೋಗಾದಿ ರಿಂಗ್ರಸ್ತೆಯಲ್ಲಿ ಓಮ್ನಿ ವಾಹನದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಇವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಇವರು ದರೋಡೆ ನಡೆಸಲು ಹೊಂಚು ಹಾಕುತ್ತಿದ್ದುದು ಗೊತ್ತಾಯಿತು ಎಂದರು.</p>.<p>‘ಹಂತ ಹಂತವಾಗಿ ವಿಚಾರಣೆ ನಡೆಸಿದಾಗ ಇವರು ಸರಸ್ವತಿಪುರಂ, ವಿದ್ಯಾರಣ್ಯಾಪುರಂ ಹಾಗೂ ಲಕ್ಷ್ಮೀಪುರಂ ಠಾಣೆಗಳಲ್ಲಿ ದರೋಡೆ ಮತ್ತು ವಿಜಯನಗರ, ಕೆ.ಆರ್.ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನದ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಪತ್ತೆಯಾಯಿತು’ ಎಂದು ಡಿಸಿಪಿ ಗೀತಾ ಪ್ರಸನ್ನ ತಿಳಿಸಿದರು.</p>.<p><strong>ಮತ್ತಷ್ಟು ಜನರು ತಂಡದಲ್ಲಿ?</strong></p>.<p>ಇವರೊಂದಿಗೆ ಇನ್ನಷ್ಟು ಮಂದಿ ತಂಡದಲ್ಲಿದ್ದು ದರೋಡೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂಬ ಅಂಶ ತನಿಖೆಯ ವೇಳೆ ಗೊತ್ತಾಗಿದೆ. ಇವರಿಗಾಗಿ ಬಿರುಸಿನ ಶೋಧ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.</p>.<p>ಬಂಧಿತರ ವಿಚಾರಣೆಯು ಡಿಸಿಪಿಗಳಾದ ಪ್ರಕಾಶ್ಗೌಡ, ಗೀತಾಪ್ರಸನ್ನ, ಎಸಿಪಿ ಪೂರ್ಣಚಂದ್ರತೇಜಸ್ವಿ ಅವರ ಉಸ್ತುವಾರಿಯಲ್ಲಿ ಇನ್ಸ್ಪೆಕ್ಟರ್ಗಳಾದ ಜೆ.ಸಿ.ರಾಜು, ಆರ್.ವಿಜಯಕುಮಾರ್, ಪಿಎಸ್ಐ ಭವ್ಯಾ, ಸಿಬ್ಬಂದಿಯಾದ ಸದಾಶಿವಪ್ಪ, ಅಶೋಕ್, ಕರುಣಾಕರ, ಬಸವರಾಜೇಅರಸ್, ಪ್ರಕಾಶ್, ರಾಘವೇಂದ್ರ, ಅರ್ಜುನ್, ಹರೀಶ್, ನಟರಾಜ ಕಾರ್ಯಾಚರಣೆ ತಂಡದಲ್ಲಿದ್ದರು.</p>.<p>ಸೋಮವಾರವಷ್ಟೇ ‘ಪ್ರಜಾವಾಣಿ’ಯಲ್ಲಿ ‘ಕೊರೊನಾ ಸಂಕಷ್ಟದಲ್ಲಿ ಹೆಚ್ಚಿದ ಕಳ್ಳತನ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.</p>.<p class="Briefhead"><strong>ಕೆಲಸ ನೀಡುವುದಾಗಿ ಹಣ ಪಡೆದು ವಂಚನೆ</strong></p>.<p><strong>ಮೈಸೂರು:</strong> ಕೆಲಸ ನೀಡುವುದಾಗಿ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಿ ಎಚ್.ಎಸ್.ಗಿರೀಶ್ ಎಂಬುವವರು ಇಲ್ಲಿನ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.</p>.<p>ಐಕೋನಿವೋ ಟೈರಾಂಟೋ ಕಂಪನಿಯ ಪ್ರತಿನಿಧಿಗಳು ಕೆಲಸ ನೀಡುವುದಾಗಿ ನಂಬಿಸಿ ತಲಾ ₹ 38 ಸಾವಿರ ಹಣವನ್ನು 10 ಮಂದಿಯಿಂದ ಪಡೆದು ಉದ್ಯೋಗ ನೀಡದೇ ವಂಚಿಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಇಲ್ಲಿನ ಸರಸ್ವತಿಪುರಂ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದರೋಡೆಗೆ ಹೊಂಚು ಹಾಕಿದ್ದ 8 ಮಂದಿಯನ್ನು ಬಂಧಿಸಿದ್ದಾರೆ.</p>.<p>ಶರತ್ (25), ಸುಮಂತ್ (24), ಧರ್ಮೇಶ್ (22), ದಿನೇಶ್ (26), ಕಾರ್ತೀಕ್ (25), ಮಹದೇವ (24), ಸುನಿಲ್ಕುಮಾರ್ (23), ಶಶಾಂಕ್ (22) ಬಂಧಿತರು ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್ಗೌಡ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಬೋಗಾದಿ ರಿಂಗ್ರಸ್ತೆಯಲ್ಲಿ ಓಮ್ನಿ ವಾಹನದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಇವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಇವರು ದರೋಡೆ ನಡೆಸಲು ಹೊಂಚು ಹಾಕುತ್ತಿದ್ದುದು ಗೊತ್ತಾಯಿತು ಎಂದರು.</p>.<p>‘ಹಂತ ಹಂತವಾಗಿ ವಿಚಾರಣೆ ನಡೆಸಿದಾಗ ಇವರು ಸರಸ್ವತಿಪುರಂ, ವಿದ್ಯಾರಣ್ಯಾಪುರಂ ಹಾಗೂ ಲಕ್ಷ್ಮೀಪುರಂ ಠಾಣೆಗಳಲ್ಲಿ ದರೋಡೆ ಮತ್ತು ವಿಜಯನಗರ, ಕೆ.ಆರ್.ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನದ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಪತ್ತೆಯಾಯಿತು’ ಎಂದು ಡಿಸಿಪಿ ಗೀತಾ ಪ್ರಸನ್ನ ತಿಳಿಸಿದರು.</p>.<p><strong>ಮತ್ತಷ್ಟು ಜನರು ತಂಡದಲ್ಲಿ?</strong></p>.<p>ಇವರೊಂದಿಗೆ ಇನ್ನಷ್ಟು ಮಂದಿ ತಂಡದಲ್ಲಿದ್ದು ದರೋಡೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂಬ ಅಂಶ ತನಿಖೆಯ ವೇಳೆ ಗೊತ್ತಾಗಿದೆ. ಇವರಿಗಾಗಿ ಬಿರುಸಿನ ಶೋಧ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.</p>.<p>ಬಂಧಿತರ ವಿಚಾರಣೆಯು ಡಿಸಿಪಿಗಳಾದ ಪ್ರಕಾಶ್ಗೌಡ, ಗೀತಾಪ್ರಸನ್ನ, ಎಸಿಪಿ ಪೂರ್ಣಚಂದ್ರತೇಜಸ್ವಿ ಅವರ ಉಸ್ತುವಾರಿಯಲ್ಲಿ ಇನ್ಸ್ಪೆಕ್ಟರ್ಗಳಾದ ಜೆ.ಸಿ.ರಾಜು, ಆರ್.ವಿಜಯಕುಮಾರ್, ಪಿಎಸ್ಐ ಭವ್ಯಾ, ಸಿಬ್ಬಂದಿಯಾದ ಸದಾಶಿವಪ್ಪ, ಅಶೋಕ್, ಕರುಣಾಕರ, ಬಸವರಾಜೇಅರಸ್, ಪ್ರಕಾಶ್, ರಾಘವೇಂದ್ರ, ಅರ್ಜುನ್, ಹರೀಶ್, ನಟರಾಜ ಕಾರ್ಯಾಚರಣೆ ತಂಡದಲ್ಲಿದ್ದರು.</p>.<p>ಸೋಮವಾರವಷ್ಟೇ ‘ಪ್ರಜಾವಾಣಿ’ಯಲ್ಲಿ ‘ಕೊರೊನಾ ಸಂಕಷ್ಟದಲ್ಲಿ ಹೆಚ್ಚಿದ ಕಳ್ಳತನ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.</p>.<p class="Briefhead"><strong>ಕೆಲಸ ನೀಡುವುದಾಗಿ ಹಣ ಪಡೆದು ವಂಚನೆ</strong></p>.<p><strong>ಮೈಸೂರು:</strong> ಕೆಲಸ ನೀಡುವುದಾಗಿ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಿ ಎಚ್.ಎಸ್.ಗಿರೀಶ್ ಎಂಬುವವರು ಇಲ್ಲಿನ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.</p>.<p>ಐಕೋನಿವೋ ಟೈರಾಂಟೋ ಕಂಪನಿಯ ಪ್ರತಿನಿಧಿಗಳು ಕೆಲಸ ನೀಡುವುದಾಗಿ ನಂಬಿಸಿ ತಲಾ ₹ 38 ಸಾವಿರ ಹಣವನ್ನು 10 ಮಂದಿಯಿಂದ ಪಡೆದು ಉದ್ಯೋಗ ನೀಡದೇ ವಂಚಿಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>