ನಾಗಾಪುರ ಬ್ಲಾಕ್ 2 ರ ಜೆ.ಕೆ.ಬಸಪ್ಪ ಮಾತನಾಡಿ, ‘ಸರ್ಕಾರ ನೀಡಿದ ಭೂಮಿಯಲ್ಲಿ ಕಳೆದ 10 ವರ್ಷದಿಂದ ಬೇಸಾಯ ಮಾಡುತ್ತಿದ್ದೇವೆ. ಆದರೆ, ಭೂ ದಾಖಲೆ ಇಲ್ಲದೆ ಗಿರಿಜನರಿಗೆ ಕೃಷಿ ಬ್ಯಾಂಕ್ ಸಾಲ ಇಲ್ಲವಾಗಿದೆ. ದಲ್ಲಾಳಿಯಿಂದ ಕೈ ಸಾಲ ಪಡೆದು ಬೇಸಾಯ ಮಾಡಿ ಅವರಿಗೆ ಮಾರಾಟ ಮಾಡಬೇಕಾಗಿದೆ. ಇದರಿಂದ ಲಾಭಾಂಶ ಕಡಿಮೆ’ ಎಂದು ಹೇಳಿದರು.