<p><strong>ಎಚ್.ಡಿ.ಕೋಟೆ: </strong>ತಾಲ್ಲೂಕಿನ ಮೊತ್ತ ಗ್ರಾಮದ ಬಳಿ ಹುಲಿಯ ಹೆಜ್ಜೆಯ ಗುರುತುಗಳು ಪತ್ತೆಯಾಗಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.</p>.<p>ಅರಣ್ಯ ಅಧಿಕಾರಿಗಳಾದ ಅಂಥೋನಿ, ರವಿಕುಮಾರ್, ಸತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹುಲಿಯ ಹೆಜ್ಜೆ ಗುರುತುಗಳು ಎಂದು ಖಚಿತ ಪಡಿಸಿಕೊಂಡಿದ್ದಾರೆ.’</p>.<p>ನಂತರ ಹೆಜ್ಜೆಯ ಗುರುತುಗಳನ್ನು ಹಿಂಬಾಲಿಸಿ ಹೋಗಿದ್ದಾರೆ. ಮೊದಲಿಗೆ ರೈತ ಸಣ್ಣಸ್ವಾಮಿ ಅವರ ಜಮೀನಿನಿಂದ ದೇವಯ್ಯ ಅವರ ಜಮೀನಿನ ಕಡೆಗೆ ಬಂದಿದ್ದು, ಮೈಸೂರು ಮಾನಾಂದವಾಡಿ ರಸ್ತೆಯನ್ನು ದಾಟಿ, ಲಕ್ಷ್ಮಿಪುರ ರಸ್ತೆಯ ತಿರುವಿನಲ್ಲಿರುವ ಬಾಳೆತೋಟದ ಕಡೆಗೆ ಹೋಗಿದೆ.</p>.<p>ಅಲ್ಲಿ ಬಾಳೆಯ ತಂತಿ ಬೇಲಿ ನೆಗೆಯುವ ವೇಲೆ ಹುಲಿಯ ಕೂದಲುಗಳು ತಂತಿಗೆ ಸಿಕ್ಕಿಕೊಂಡು ಅಲ್ಲಿಯೇ ಉದುರಿವೆ. ಅಲ್ಲಿಂದ ಆನಗಟ್ಟಿ ಎಲ್ಲೆಯಲ್ಲಿರುವ ಶೀರನಹುಂಡಿ ಬೆಳ್ಳಿಯವರ ಜಮೀನಿನ ಮೂಲಕ ದೇವಯ್ಯನ ಕೆರೆಯ ಹತ್ತಿರ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನಿಡಿದ್ದಾರೆ.</p>.<p>15 ದಿನಗಳ ಹಿಂದೆ ರವಿ ಎಂಬುವವರ ತೋಟದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು ರೈತರು ಆತಂಕಗೊಂಡಿದ್ದಾರೆ. ಜಮೀನಿನಲ್ಲಿ ಬಿತ್ತನೆ ಮತ್ತು ಬೇಸಾಯ ಮಾಡಲು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಹುಲಿಯನ್ನು ಹಿಡಿಯುವಂತೆ ಗ್ರಾಮದ ದೇವರಾಜು ಒತ್ತಾಯಿಸಿದ್ದಾರೆ.</p>.<p>ಇದಕ್ಕೆ ಉತ್ತರಿಸಿದ ಪ್ರಾದೇಶಿಕ ವಲಯದ ಅಧಿಕಾರಿ ಮಧು ಹುಲಿ ಸೆರೆ ಹಿಡಿಯಲು ಈಗಾಗಲೇ ಬೋನನ್ನು ಇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಚ್.ಡಿ.ಕೋಟೆ: </strong>ತಾಲ್ಲೂಕಿನ ಮೊತ್ತ ಗ್ರಾಮದ ಬಳಿ ಹುಲಿಯ ಹೆಜ್ಜೆಯ ಗುರುತುಗಳು ಪತ್ತೆಯಾಗಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.</p>.<p>ಅರಣ್ಯ ಅಧಿಕಾರಿಗಳಾದ ಅಂಥೋನಿ, ರವಿಕುಮಾರ್, ಸತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹುಲಿಯ ಹೆಜ್ಜೆ ಗುರುತುಗಳು ಎಂದು ಖಚಿತ ಪಡಿಸಿಕೊಂಡಿದ್ದಾರೆ.’</p>.<p>ನಂತರ ಹೆಜ್ಜೆಯ ಗುರುತುಗಳನ್ನು ಹಿಂಬಾಲಿಸಿ ಹೋಗಿದ್ದಾರೆ. ಮೊದಲಿಗೆ ರೈತ ಸಣ್ಣಸ್ವಾಮಿ ಅವರ ಜಮೀನಿನಿಂದ ದೇವಯ್ಯ ಅವರ ಜಮೀನಿನ ಕಡೆಗೆ ಬಂದಿದ್ದು, ಮೈಸೂರು ಮಾನಾಂದವಾಡಿ ರಸ್ತೆಯನ್ನು ದಾಟಿ, ಲಕ್ಷ್ಮಿಪುರ ರಸ್ತೆಯ ತಿರುವಿನಲ್ಲಿರುವ ಬಾಳೆತೋಟದ ಕಡೆಗೆ ಹೋಗಿದೆ.</p>.<p>ಅಲ್ಲಿ ಬಾಳೆಯ ತಂತಿ ಬೇಲಿ ನೆಗೆಯುವ ವೇಲೆ ಹುಲಿಯ ಕೂದಲುಗಳು ತಂತಿಗೆ ಸಿಕ್ಕಿಕೊಂಡು ಅಲ್ಲಿಯೇ ಉದುರಿವೆ. ಅಲ್ಲಿಂದ ಆನಗಟ್ಟಿ ಎಲ್ಲೆಯಲ್ಲಿರುವ ಶೀರನಹುಂಡಿ ಬೆಳ್ಳಿಯವರ ಜಮೀನಿನ ಮೂಲಕ ದೇವಯ್ಯನ ಕೆರೆಯ ಹತ್ತಿರ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನಿಡಿದ್ದಾರೆ.</p>.<p>15 ದಿನಗಳ ಹಿಂದೆ ರವಿ ಎಂಬುವವರ ತೋಟದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು ರೈತರು ಆತಂಕಗೊಂಡಿದ್ದಾರೆ. ಜಮೀನಿನಲ್ಲಿ ಬಿತ್ತನೆ ಮತ್ತು ಬೇಸಾಯ ಮಾಡಲು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಹುಲಿಯನ್ನು ಹಿಡಿಯುವಂತೆ ಗ್ರಾಮದ ದೇವರಾಜು ಒತ್ತಾಯಿಸಿದ್ದಾರೆ.</p>.<p>ಇದಕ್ಕೆ ಉತ್ತರಿಸಿದ ಪ್ರಾದೇಶಿಕ ವಲಯದ ಅಧಿಕಾರಿ ಮಧು ಹುಲಿ ಸೆರೆ ಹಿಡಿಯಲು ಈಗಾಗಲೇ ಬೋನನ್ನು ಇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>