<p><strong>ಮೈಸೂರು</strong>: ‘ತೃತೀಯ ಲಿಂಗಿಗೆ ಮಾತ್ರವೇ ಕೋವಿಡ್ ಬಂದಿದೆಯಾ? ಇರಲಿ, ನಮ್ಮ ಬಗ್ಗೆ ಕೆಲವರಿಗೆ ಅನುಮಾನ ಇರಬಹುದೇನೋ, ಯಾರಿಗೂ ತೊಂದರೆ ಕೊಡಲ್ಲ, ಯಾರನ್ನೂ ದೂರುವುದಿಲ್ಲ. ಮತ್ತೆ ಮುಂಬೈಗೆ ಹೊರಡುತ್ತೇನೆ. ಅಲ್ಲೇ ದುಡಿದು ಬದುಕುತ್ತೇನೆ’</p>.<p>–ಹೀಗೆಂದು ಗದ್ಗದಿತ ದನಿಯಲ್ಲಿ ನುಡಿದಿದ್ದು ಕೋವಿಡ್ನಿಂದ ಗುಣಮುಖರಾಗಿರುವ ತೃತೀಯ ಲಿಂಗಿ ಮಧುರಾ (ಹೆಸರು ಬದಲಾಯಿಸಲಾಗಿದೆ).</p>.<p>ಕಳೆದ ತಿಂಗಳು ಮುಂಬೈನಿಂದ ಬಂದಿದ್ದ ಇವರು ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಬಳಿಯ ತಮ್ಮ ಗ್ರಾಮದ ಪರಿಚಯಸ್ಥರ ಹೊಲದ ಶೆಡ್ನಲ್ಲಿ ವಾಸಿಸುತ್ತಿದ್ದಾರೆ. ಊರಿನೊಳಗೆ ಬಿಟ್ಟುಕೊಳ್ಳಲು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದೇ ಗ್ರಾಮದಲ್ಲಿ ಇವರ ತಾಯಿ ನೆಲೆಸಿದ್ದಾರೆ.</p>.<p>30 ವರ್ಷಗಳ ಹಿಂದೆಯೇ ಮುಂಬೈಗೆ ತೆರಳಿದ್ದ ಮಧುರಾ, ಅಲ್ಲಿ ಮದುವೆ, ಮಗು ಜನಿಸಿದಾಗ ಹಾಗೂ ಇತರ ಶುಭ ಕಾರ್ಯಕ್ರಮಗಳಲ್ಲಿ ನೃತ್ಯ ಮಾಡಿ ಜೀವನ ನಡೆಸುತ್ತಿದ್ದಾರೆ. ಅಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿದ್ದರಿಂದ ತಮ್ಮೂರಿಗೆ ವಾಪಸಾಗಿದ್ದಾರೆ.</p>.<p>‘ಆರು ಜನ ತೃತೀಯ ಲಿಂಗಿಗಳು ಮುಂಬೈನಿಂದ ಉದ್ಯಾನ್ ಎಕ್ಸ್ಪ್ರೆಸ್ ರೈಲಿನಲ್ಲಿ ಬಂದೆವು. ಬೆಂಗಳೂರಿನಲ್ಲಿ ನಮ್ಮನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದರು. ನನಗೆ ಪಾಸಿಟಿವ್ ಇರುವುದು ಗೊತ್ತಾಯಿತು. ಮೈಸೂರಿಗೆ ಬಂದು ಕೋವಿಡ್ ಆಸ್ಪತ್ರೆಯಲ್ಲಿ<br />ಚಿಕಿತ್ಸೆ ಪಡೆದೆ. ಆರಂಭದಲ್ಲಿ ತುಸು ಭಯವಿತ್ತು. ವೈದ್ಯರು ಧೈರ್ಯ ತುಂಬಿ ಚೆನ್ನಾಗಿ ನೋಡಿಕೊಂಡರು. ಆತ್ಮವಿಶ್ವಾಸವಿದ್ದರೆ ಈ ಕಾಯಿಲೆಯಿಂದ ಬೇಗನೇ ಚೇತರಿಸಿಕೊಳ್ಳಬಹುದು’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>**</p>.<p>ನಮ್ಮನ್ನು ಕೆಲವರು ನೋಡುವುದೇ ಹೀಗೆ. ನಾವೇನು ತಪ್ಪು ಮಾಡಿದ್ದೇವೆ? ಗೊಣಗಿ ಪ್ರಯೋಜನವಿಲ್ಲ. ಇಷ್ಟು ದಿನ ಬದುಕಿದ್ದೇನೆ, ಹಾಗೆಯೇ ಬದುಕುತ್ತೇನೆ.<br /><em><strong>-ಮಧುರಾ, ತೃತೀಯ ಲಿಂಗಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ತೃತೀಯ ಲಿಂಗಿಗೆ ಮಾತ್ರವೇ ಕೋವಿಡ್ ಬಂದಿದೆಯಾ? ಇರಲಿ, ನಮ್ಮ ಬಗ್ಗೆ ಕೆಲವರಿಗೆ ಅನುಮಾನ ಇರಬಹುದೇನೋ, ಯಾರಿಗೂ ತೊಂದರೆ ಕೊಡಲ್ಲ, ಯಾರನ್ನೂ ದೂರುವುದಿಲ್ಲ. ಮತ್ತೆ ಮುಂಬೈಗೆ ಹೊರಡುತ್ತೇನೆ. ಅಲ್ಲೇ ದುಡಿದು ಬದುಕುತ್ತೇನೆ’</p>.<p>–ಹೀಗೆಂದು ಗದ್ಗದಿತ ದನಿಯಲ್ಲಿ ನುಡಿದಿದ್ದು ಕೋವಿಡ್ನಿಂದ ಗುಣಮುಖರಾಗಿರುವ ತೃತೀಯ ಲಿಂಗಿ ಮಧುರಾ (ಹೆಸರು ಬದಲಾಯಿಸಲಾಗಿದೆ).</p>.<p>ಕಳೆದ ತಿಂಗಳು ಮುಂಬೈನಿಂದ ಬಂದಿದ್ದ ಇವರು ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಬಳಿಯ ತಮ್ಮ ಗ್ರಾಮದ ಪರಿಚಯಸ್ಥರ ಹೊಲದ ಶೆಡ್ನಲ್ಲಿ ವಾಸಿಸುತ್ತಿದ್ದಾರೆ. ಊರಿನೊಳಗೆ ಬಿಟ್ಟುಕೊಳ್ಳಲು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದೇ ಗ್ರಾಮದಲ್ಲಿ ಇವರ ತಾಯಿ ನೆಲೆಸಿದ್ದಾರೆ.</p>.<p>30 ವರ್ಷಗಳ ಹಿಂದೆಯೇ ಮುಂಬೈಗೆ ತೆರಳಿದ್ದ ಮಧುರಾ, ಅಲ್ಲಿ ಮದುವೆ, ಮಗು ಜನಿಸಿದಾಗ ಹಾಗೂ ಇತರ ಶುಭ ಕಾರ್ಯಕ್ರಮಗಳಲ್ಲಿ ನೃತ್ಯ ಮಾಡಿ ಜೀವನ ನಡೆಸುತ್ತಿದ್ದಾರೆ. ಅಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿದ್ದರಿಂದ ತಮ್ಮೂರಿಗೆ ವಾಪಸಾಗಿದ್ದಾರೆ.</p>.<p>‘ಆರು ಜನ ತೃತೀಯ ಲಿಂಗಿಗಳು ಮುಂಬೈನಿಂದ ಉದ್ಯಾನ್ ಎಕ್ಸ್ಪ್ರೆಸ್ ರೈಲಿನಲ್ಲಿ ಬಂದೆವು. ಬೆಂಗಳೂರಿನಲ್ಲಿ ನಮ್ಮನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದರು. ನನಗೆ ಪಾಸಿಟಿವ್ ಇರುವುದು ಗೊತ್ತಾಯಿತು. ಮೈಸೂರಿಗೆ ಬಂದು ಕೋವಿಡ್ ಆಸ್ಪತ್ರೆಯಲ್ಲಿ<br />ಚಿಕಿತ್ಸೆ ಪಡೆದೆ. ಆರಂಭದಲ್ಲಿ ತುಸು ಭಯವಿತ್ತು. ವೈದ್ಯರು ಧೈರ್ಯ ತುಂಬಿ ಚೆನ್ನಾಗಿ ನೋಡಿಕೊಂಡರು. ಆತ್ಮವಿಶ್ವಾಸವಿದ್ದರೆ ಈ ಕಾಯಿಲೆಯಿಂದ ಬೇಗನೇ ಚೇತರಿಸಿಕೊಳ್ಳಬಹುದು’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>**</p>.<p>ನಮ್ಮನ್ನು ಕೆಲವರು ನೋಡುವುದೇ ಹೀಗೆ. ನಾವೇನು ತಪ್ಪು ಮಾಡಿದ್ದೇವೆ? ಗೊಣಗಿ ಪ್ರಯೋಜನವಿಲ್ಲ. ಇಷ್ಟು ದಿನ ಬದುಕಿದ್ದೇನೆ, ಹಾಗೆಯೇ ಬದುಕುತ್ತೇನೆ.<br /><em><strong>-ಮಧುರಾ, ತೃತೀಯ ಲಿಂಗಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>