<p><strong>ಮೈಸೂರು:</strong> ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಎರಡು ದಿನ ನಡೆದ ಗೆಡ್ಡೆ–ಗೆಣಸು ಮೇಳಕ್ಕೆ ಭಾನುವಾರ ರಾತ್ರಿ ತೆರೆ ಬಿದ್ದಿತು.</p>.<p>ವಾರಾಂತ್ಯದ ದಿನಗಳಾಗಿದ್ದರಿಂದ ಅಪಾರ ಸಂಖ್ಯೆಯ ಮೈಸೂರಿಗರು ಮೇಳಕ್ಕೆ ಭೇಟಿ ನೀಡಿ, ಗೆಡ್ಡೆ–ಗೆಣಸಿನ ಖಾದ್ಯಗಳನ್ನು ಸವಿದರು. ತರಹೇವಾರಿ ಗೆಡ್ಡೆಗಳನ್ನು ಕಣ್ತುಂಬಿಕೊಂಡರು. ಸಾವಯವ ತರಕಾರಿ ಬೀಜಗಳನ್ನು ಖರೀದಿಸಿ ಮನೆಗೆ ಕೊಂಡೊಯ್ದರು.</p>.<p>ಮೇಳದ ಅಂಗವಾಗಿ ಭಾನುವಾರ ‘ಅಡುಗೆ ಸ್ಪರ್ಧೆ’ ನಡೆಯಿತು. 12 ಸ್ಪರ್ಧಿಗಳು ಗೆಡ್ಡೆ–ಗೆಣಸಿನ ವಿವಿಧ ಖಾದ್ಯವನ್ನು ಸ್ಪರ್ಧೆಗಾಗಿಯೇ ತಯಾರಿಸಿಕೊಂಡು ತಂದಿದ್ದರು.</p>.<p>ಶತಾವರಿ ಬೇರಿನ ಔಷಧೀಯ ಜಾಮೂನು, ಸಿಹಿ ಗೆಣಸಿನ ಸಮೋಸ, ಕರ್ಜಿಕಾಯಿ, ಪೂರಿ, ಲಡ್ಡು–ಪಾಯಸ, ಮರಗೆಣಸಿನ ಪಲ್ಯ–ರೊಟ್ಟಿ, ಪರ್ಪಲ್ ಯಾಮ್ನ ಪಲ್ಯ–ಜ್ಯೂಸ್ ಮೊದಲಾದ ತಿನಿಸುಗಳನ್ನು ಸ್ಪರ್ಧಿಗಳು ಪ್ರದರ್ಶಿಸಿದರು.</p>.<p>ಶ್ರೀದೇವಿ ಪಿ.ಹೆಗಡೆ ಅವರಿಗೆ ಮೊದಲ ಬಹುಮಾನ, ಮಂಜುಳಾ ಪ್ರಕಾಶ್ಗೆ ಎರಡನೇ ಬಹುಮಾನ, ರತಿ ಸಂತೋಷಿ ಅವರಿಗೆ ಮೂರನೇ ಬಹುಮಾನ ಲಭಿಸಿತು.</p>.<p>ಸಂತೋಷ ಕೌಲಗಿ, ವಿನಯ ಚಂದ್ರ, ಸೀಮಾ ಪ್ರಸಾದ್ ತೀರ್ಪುಗಾರರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಎರಡು ದಿನ ನಡೆದ ಗೆಡ್ಡೆ–ಗೆಣಸು ಮೇಳಕ್ಕೆ ಭಾನುವಾರ ರಾತ್ರಿ ತೆರೆ ಬಿದ್ದಿತು.</p>.<p>ವಾರಾಂತ್ಯದ ದಿನಗಳಾಗಿದ್ದರಿಂದ ಅಪಾರ ಸಂಖ್ಯೆಯ ಮೈಸೂರಿಗರು ಮೇಳಕ್ಕೆ ಭೇಟಿ ನೀಡಿ, ಗೆಡ್ಡೆ–ಗೆಣಸಿನ ಖಾದ್ಯಗಳನ್ನು ಸವಿದರು. ತರಹೇವಾರಿ ಗೆಡ್ಡೆಗಳನ್ನು ಕಣ್ತುಂಬಿಕೊಂಡರು. ಸಾವಯವ ತರಕಾರಿ ಬೀಜಗಳನ್ನು ಖರೀದಿಸಿ ಮನೆಗೆ ಕೊಂಡೊಯ್ದರು.</p>.<p>ಮೇಳದ ಅಂಗವಾಗಿ ಭಾನುವಾರ ‘ಅಡುಗೆ ಸ್ಪರ್ಧೆ’ ನಡೆಯಿತು. 12 ಸ್ಪರ್ಧಿಗಳು ಗೆಡ್ಡೆ–ಗೆಣಸಿನ ವಿವಿಧ ಖಾದ್ಯವನ್ನು ಸ್ಪರ್ಧೆಗಾಗಿಯೇ ತಯಾರಿಸಿಕೊಂಡು ತಂದಿದ್ದರು.</p>.<p>ಶತಾವರಿ ಬೇರಿನ ಔಷಧೀಯ ಜಾಮೂನು, ಸಿಹಿ ಗೆಣಸಿನ ಸಮೋಸ, ಕರ್ಜಿಕಾಯಿ, ಪೂರಿ, ಲಡ್ಡು–ಪಾಯಸ, ಮರಗೆಣಸಿನ ಪಲ್ಯ–ರೊಟ್ಟಿ, ಪರ್ಪಲ್ ಯಾಮ್ನ ಪಲ್ಯ–ಜ್ಯೂಸ್ ಮೊದಲಾದ ತಿನಿಸುಗಳನ್ನು ಸ್ಪರ್ಧಿಗಳು ಪ್ರದರ್ಶಿಸಿದರು.</p>.<p>ಶ್ರೀದೇವಿ ಪಿ.ಹೆಗಡೆ ಅವರಿಗೆ ಮೊದಲ ಬಹುಮಾನ, ಮಂಜುಳಾ ಪ್ರಕಾಶ್ಗೆ ಎರಡನೇ ಬಹುಮಾನ, ರತಿ ಸಂತೋಷಿ ಅವರಿಗೆ ಮೂರನೇ ಬಹುಮಾನ ಲಭಿಸಿತು.</p>.<p>ಸಂತೋಷ ಕೌಲಗಿ, ವಿನಯ ಚಂದ್ರ, ಸೀಮಾ ಪ್ರಸಾದ್ ತೀರ್ಪುಗಾರರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>