ಮೊದಲ ಪತಿಗೆ ಜನಿಸಿದ ಜಯಲಕ್ಷ್ಮೀ ತಮಗೆ ಹೊರೆ ಎಂದು ಭಾವಿಸಿದ ಪವಿತ್ರಾ, ಸೂರ್ಯ ಹಾಗೂ ಗೌರಮ್ಮ ಜತೆ ಸೇರಿ ಕೊಲೆ ಮಾಡಲು ನಿರ್ಧರಿಸುತ್ತಾಳೆ. ಆಗಸ್ಟ್ 25ರಂದು ಬೆಳಿಗ್ಗೆ 5.30ರ ಸಮಯದಲ್ಲಿ ಮಲಗಿದ್ದ ಮಗಳ ಕೈಗಳನ್ನು ತಾಯಿ ಪವಿತ್ರಾ ಕಾಲುಗಳನ್ನು ಅಜ್ಜಿ ಗೌರಮ್ಮ ಹಿಡಿದುಕೊಳ್ಳುತ್ತಾರೆ. ದಿಂಬನ್ನು ಮೂಗು ಮತ್ತು ಬಾಯಿಗೆ ಹಿಡಿದು ಉಸಿರುಗಟ್ಟಿಸಿ, ಕುತ್ತಿಗೆ ಹಿಸುಕಿ ಮಲತಂದೆ ಸೂರ್ಯ ಕೊಲೆ ಮಾಡುತ್ತಾನೆ. ನಂತರ, ಅನಾರೋಗ್ಯದಿಂದ ಮೃತಪಟ್ಟಳು ಎಂದು ತರಾತುರಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ.