ಬೆಂಗಳೂರು: ಪರಾಕಾಷ್ಠೆ ತಲುಪಿರುವ ಪರಿಸರ ಮಾಲಿನ್ಯದಿಂದ ನಗರದ ಜನ ನಲುಗುತ್ತಿದ್ದರೆ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಪ್ರಾಂಗಣವು ವಾತಾವರಣದ ಆಮ್ಲಜನಕ ಮರುಪೂರಣದ ಕಣಜವಾಗಿ ಅವರನ್ನು ಪೊರೆಯುತ್ತಿದೆ. ಈ ಜೈವಿಕ ಉದ್ಯಾನವು (ಬಯೋ ಪಾರ್ಕ್)ಪ್ರತಿ ಹೆಕ್ಟೇರ್ಗೆ 64 ಟನ್ ಇಂಗಾಲವನ್ನು ಸ್ಥಿರೀಕರಿಸಿ, ವರ್ಷದಲ್ಲಿ 7.07 ಕೋಟಿ ಲೀ. ಆಮ್ಲಜನಕವನ್ನು ಬಿಟ್ಟುಕೊಡುವ ಮೂಲಕ ಹಸಿರು ತಾಣ ಮಾತ್ರವಲ್ಲ ಜನರ ಪಾಲಿನ ‘ಉಸಿರು ತಾಣ’ವಾಗಿಯೂ ಗುರುತಿಸಿಕೊಂಡಿದೆ.