ಐಂದ್ರಿತಾ ರೇ ಮಾತನಾಡಿ, ‘ಆನೆ ಆಹಾರ ಮತ್ತು ನೀರನ್ನು ಅರಸಿ ಕಾಡಿನಿಂದ ನಾಡಿಗೆ ಬರುತ್ತಿವೆ. ದಿನೇ ದಿನೇ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದೆ, ಆನೆಗಳು ನಾಡಿಗೆ ನುಗ್ಗುವುದರಿಂದ ಜನರೂ ತೊಂದರೆ ಅನುಭವಿಸುತ್ತಿದ್ದಾರೆ. ಆನೆಗಳೂ ಸ್ವಚ್ಛಂದವಾಗಿ ವಿಹರಿಸುವ ಸ್ವಾತಂತ್ರವಿಲ್ಲದೆ ನೋವು ಅನುಭವಿಸುತ್ತಿವೆ. ಈ ಸನ್ನಿವೇಶದಲ್ಲಿ ಮಠವು ಧಾರ್ಮಿಕ ಕಾರ್ಯಗಳಿಗಾಗಿ ರೋಬೋ ಆನೆಯನ್ನು ಬಳಸಲು ಪ್ರಾರಂಭಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.