ಎಚ್.ಡಿ.ಕೋಟೆ: ನಟ ಯಶ್, ಅವರ ಪತ್ನಿ ರಾಧಿಕಾ ಕುಟುಂಬವು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ದಮ್ಮನಕಟ್ಟೆ ವ್ಯಾಪ್ತಿಯಲ್ಲಿ ಸಫಾರಿ ಕೈಗೊಂಡು ವನ್ಯಜೀವಿಗಳನ್ನು ವೀಕ್ಷಿಸಿದರು.
ತಾಲ್ಲೂಕಿನ ದಮ್ಮನಕಟ್ಟೆ ಸಫಾರಿ ಕೇಂದ್ರಕ್ಕೆ ಮಂಗಳವಾರ ಇಬ್ಬರು ಮಕ್ಕಳು ಹಾಗೂ ರಾಧಿಕಾ ತಂದೆ-ತಾಯಿ ಜೊತೆಗೂಡಿ ಬಂದ ಯಶ್ ದಂಪತಿ ಜೀಪ್ನಲ್ಲಿ ಸಫಾರಿ ನಡೆಸಿದರು. ಈ ವೇಳೆ ಆನೆ, ಜಿಂಕೆ, ಕರಡಿಗಳನ್ನು ಕಂಡು ಸಂಭ್ರಮಪಟ್ಟರು.
ನಂತರ ಕಬಿನಿ ಹಿನ್ನೀರಿನ ಬೀರಂಬಳ್ಳಿ ಗ್ರಾಮದ ಸಮೀಪ ಇರುವ ಆರೆಂಜ್ ಕೌಂಟಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದರು. ನಾಳೆ ಬೆಳಿಗ್ಗೆ ಅವರು ಅಲ್ಲಿಂದ ತೆರಳಲಿದ್ದಾರೆ.