<p><strong>ಮೈಸೂರು</strong>: ಬಾಲಿವುಡ್ ತಾರಾ ದಂಪತಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರ ನೂತನ ಮನೆಗೆ ಮೈಸೂರಿನಲ್ಲಿ ಗಣೇಶನ ಮೂರ್ತಿ ಸಿದ್ಧಗೊಂಡಿದ್ದು, ಶಿಲ್ಪಿ ಅರುಣ್ ಯೋಗಿರಾಜ್ ಮೂರ್ತಿಯ ಕೆತ್ತನೆ ಮಾಡಿದ್ದಾರೆ. </p>.<p>‘ಹೊಸ ಮನೆಯ ಪ್ರವೇಶ ದ್ವಾರದಲ್ಲಿ ಸ್ಥಾಪಿಸಲು ಆಲಿಯಾ ಭಟ್ ಗಣೇಶ ಮೂರ್ತಿಯನ್ನು ಕೆತ್ತಿಕೊಡುವಂತೆ ಕೇಳಿದ್ದರು. ಹೊಯ್ಸಳ ಹಾಗೂ ಮೈಸೂರು ಶೈಲಿಯಲ್ಲಿ ವಿಗ್ರಹವನ್ನು ಕೆತ್ತಲಾಗಿದೆ. ಮೂರು ಅಡಿಯ ಪೀಠವಿದ್ದು, 6 ಅಡಿ ಎತ್ತರವನ್ನು ಹೊಂದಿದೆ’ ಎಂದು ಶಿಲ್ಪಿ ಅರುಣ್ ಯೋಗಿರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p>‘ಅ.17ರಂದು ಆಲಿಯಾ ಭಟ್ ಕುಟುಂಬದವರು ಪೂಜೆ ಸಲ್ಲಿಸಲಿದ್ದಾರೆ. ಏಕಶಿಲಾ ಮೂರ್ತಿಯಾಗಿದ್ದು, 6 ತಿಂಗಳಿಂದ ನಿರಂತರವಾಗಿ ಕೆತ್ತನೆ ಕಾರ್ಯ ನಡೆದಿತ್ತು’ ಎಂದರು. </p>.<p>‘ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಮೂರ್ತಿಯ ಕೆತ್ತನೆ ಗಮನಿಸಿ ಅದೇ ಮಾದರಿಯ ಶಿಲೆಯಲ್ಲಿ ಗಣೇಶ ಮೂರ್ತಿ ಮಾಡಿಕೊಡುವಂತೆ ಕೇಳಿದ್ದರು. ಮುಂಬೈಗೆ ಕರೆಸಿಕೊಂಡು ಚರ್ಚಿಸಿದ್ದರು. ಮೂರ್ತಿ ಸಿದ್ಧವಾಗಿದ್ದು, ಅದನ್ನು ಸಾಗಿಸಲಾಗುತ್ತಿದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಬಾಲಿವುಡ್ ತಾರಾ ದಂಪತಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರ ನೂತನ ಮನೆಗೆ ಮೈಸೂರಿನಲ್ಲಿ ಗಣೇಶನ ಮೂರ್ತಿ ಸಿದ್ಧಗೊಂಡಿದ್ದು, ಶಿಲ್ಪಿ ಅರುಣ್ ಯೋಗಿರಾಜ್ ಮೂರ್ತಿಯ ಕೆತ್ತನೆ ಮಾಡಿದ್ದಾರೆ. </p>.<p>‘ಹೊಸ ಮನೆಯ ಪ್ರವೇಶ ದ್ವಾರದಲ್ಲಿ ಸ್ಥಾಪಿಸಲು ಆಲಿಯಾ ಭಟ್ ಗಣೇಶ ಮೂರ್ತಿಯನ್ನು ಕೆತ್ತಿಕೊಡುವಂತೆ ಕೇಳಿದ್ದರು. ಹೊಯ್ಸಳ ಹಾಗೂ ಮೈಸೂರು ಶೈಲಿಯಲ್ಲಿ ವಿಗ್ರಹವನ್ನು ಕೆತ್ತಲಾಗಿದೆ. ಮೂರು ಅಡಿಯ ಪೀಠವಿದ್ದು, 6 ಅಡಿ ಎತ್ತರವನ್ನು ಹೊಂದಿದೆ’ ಎಂದು ಶಿಲ್ಪಿ ಅರುಣ್ ಯೋಗಿರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p>‘ಅ.17ರಂದು ಆಲಿಯಾ ಭಟ್ ಕುಟುಂಬದವರು ಪೂಜೆ ಸಲ್ಲಿಸಲಿದ್ದಾರೆ. ಏಕಶಿಲಾ ಮೂರ್ತಿಯಾಗಿದ್ದು, 6 ತಿಂಗಳಿಂದ ನಿರಂತರವಾಗಿ ಕೆತ್ತನೆ ಕಾರ್ಯ ನಡೆದಿತ್ತು’ ಎಂದರು. </p>.<p>‘ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಮೂರ್ತಿಯ ಕೆತ್ತನೆ ಗಮನಿಸಿ ಅದೇ ಮಾದರಿಯ ಶಿಲೆಯಲ್ಲಿ ಗಣೇಶ ಮೂರ್ತಿ ಮಾಡಿಕೊಡುವಂತೆ ಕೇಳಿದ್ದರು. ಮುಂಬೈಗೆ ಕರೆಸಿಕೊಂಡು ಚರ್ಚಿಸಿದ್ದರು. ಮೂರ್ತಿ ಸಿದ್ಧವಾಗಿದ್ದು, ಅದನ್ನು ಸಾಗಿಸಲಾಗುತ್ತಿದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>