<p><strong>ಮೈಸೂರು</strong>: ರಾಜ್ಯದ ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯಗಳಲ್ಲಿ ಒಂದಾದ ಹಾಗೂ ಗೊಲ್ಲ ಸಮಾಜದ ಉಪ ಪಂಗಡವಾದ ‘ಗೋಪಾಲ’ (ಗೋಪಾಲ್) ಜಾತಿಯ ಕುಲಶಾಸ್ತ್ರೀಯ ಅಧ್ಯಯನದ ಜವಾಬ್ದಾರಿಯನ್ನು ರಾಜ್ಯ ಸರ್ಕಾರವು ಮೈಸೂರು ವಿಶ್ವವಿದ್ಯಾಲಯಕ್ಕೆ ವಹಿಸಿದೆ.</p>.<p>ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನ ಸಮಾಜವಿಜ್ಞಾನ ವಿಭಾಗದ ಪ್ರೊ.ರೇಖಾ ಜಾಧವ್ ಅಧ್ಯಯನದ ನೇತೃತ್ವ ವಹಿಸಲಿದ್ದು, ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆಯ ಅಧ್ಯಯನ ಕೇಂದ್ರದ ಡಿ.ಸಿ.ನಂಜುಂಡ ಸಹ ಸಂಶೋಧಕರಾಗಿರಲಿದ್ದಾರೆ. ಈ ಸಮಾಜದ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಸಂಶೋಧನೆ ನಡೆಸಲಾಗುತ್ತಿದೆ.</p>.<p>ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆಯು ಯೋಜನೆಯನ್ನು ಪ್ರಾಯೋಜಿಸಿದ್ದು, ₹13 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದೆ. ಅಧ್ಯಯನದ ಪೂರ್ವಸಿದ್ಧತೆಗಳು ನಡೆದಿವೆ.</p>.<p><strong>ವಿವಿಧ ಜಿಲ್ಲೆಗಳಲ್ಲಿ:</strong> ‘ಸಂಸ್ಥೆಯು 10ರಿಂದ 12 ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ ಕೈಗೆತ್ತಿಕೊಂಡಿದ್ದು, ‘ಗೋಪಾಲ’ ಸಮುದಾಯವೂ ಸೇರಿದೆ. ಸದ್ಯ ಈ ಸಮಾಜದವರನ್ನು ರಾಜ್ಯದ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯವಾಗಿ ಗುರುತಿಸಲಾಗಿದೆ’ ಎನ್ನುತ್ತಾರೆ ಪ್ರೊ.ರೇಖಾ ಜಾಧವ್.</p>.<p>ಈ ಜಾತಿಯು ಮೂಲತಃ ಅರೆ ಅಲೆಮಾರಿ ಸಮುದಾಯ. ಇವರು ಒಡಿಶಾ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ವಲಸೆ ಬಂದವರು. ಕೆಲವೆಡೆ ಇವರನ್ನು ‘ಯಾದವರು’ ಎಂದು ಕರೆಯಲಾಗುತ್ತದೆ. ರಾಜ್ಯದ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಮೈಸೂರು ಜಿಲ್ಲೆಯಲ್ಲಿ ಹೆಚ್ಚಿದ್ದಾರೆ.</p>.<p>‘ಸಮುದಾಯದ ಇತಿಹಾಸ, ವಲಸೆ, ಸಂಸ್ಕೃತಿ, ಚಲನಶೀಲತೆ, ಅನನ್ಯತೆ ಮೊದಲಾದ ಅಂಶಗಳ ಬಗ್ಗೆ ಹಾಗೂ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಕೈಗೊಳ್ಳಬಹುದಾದ ತುರ್ತು ಕ್ರಮಗಳ ಕುರಿತು ಅಧ್ಯಯನ ನಡೆಸಲಾಗುವುದು. ವಿಚಾರಸಂಕಿರಣ, ಸಮೀಕ್ಷೆ, ಮೌಲ್ಯಮಾಪನ ಪ್ರಕ್ರಿಯೆಯೂ ಅಧ್ಯಯನದ ಭಾಗವಾಗಿರಲಿದೆ’ ಎಂದು ರೇಖಾ ಮಾಹಿತಿ ನೀಡಿದರು.</p>.<p>‘ಗೋಪಾಲ ಸಮುದಾಯವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದ ಅತ್ಯಂತ ಅಲಕ್ಷಿತ ಅಲೆಮಾರಿ ಸಮುದಾಯ. ಪ್ರಸ್ತುತ ಅಧ್ಯಯನವು ಈ ಸಮುದಾಯದ ಒಳಗೊಳ್ಳುವಿಕೆಯ ಬೆಳವಣಿಗೆಗೆ ನೆರವಾಗಲಿ ಎಂಬ ಆಶಯ ನಮ್ಮದು’ ಎಂದು ಡಿ.ಸಿ. ನಂಜುಂಡ ಪ್ರತಿಕ್ರಿಯಿಸಿದರು.</p>.<blockquote>ದೇವರಾಜ ಅರಸು ಸಂಶೋಧನಾ ಸಂಸ್ಥೆಯ ಪ್ರಾಯೋಜಕತ್ವ ಹಿಂದುಳಿದ ಅರೆ ಅಲೆಮಾರಿ ಸಮುದಾಯಗಳಲ್ಲೊಂದು</blockquote>.<div><blockquote>ಈ ಕುಲಶಾಸ್ತ್ರೀಯ ಅಧ್ಯಯನವನ್ನು 18ರಿಂದ 24 ತಿಂಗಳೊಳಗೆ ಮುಗಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು</blockquote><span class="attribution">ಪ್ರೊ.ರೇಖಾ ಜಾಧವ್ ಮಹಾರಾಜ ಕಾಲೇಜು </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ರಾಜ್ಯದ ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯಗಳಲ್ಲಿ ಒಂದಾದ ಹಾಗೂ ಗೊಲ್ಲ ಸಮಾಜದ ಉಪ ಪಂಗಡವಾದ ‘ಗೋಪಾಲ’ (ಗೋಪಾಲ್) ಜಾತಿಯ ಕುಲಶಾಸ್ತ್ರೀಯ ಅಧ್ಯಯನದ ಜವಾಬ್ದಾರಿಯನ್ನು ರಾಜ್ಯ ಸರ್ಕಾರವು ಮೈಸೂರು ವಿಶ್ವವಿದ್ಯಾಲಯಕ್ಕೆ ವಹಿಸಿದೆ.</p>.<p>ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನ ಸಮಾಜವಿಜ್ಞಾನ ವಿಭಾಗದ ಪ್ರೊ.ರೇಖಾ ಜಾಧವ್ ಅಧ್ಯಯನದ ನೇತೃತ್ವ ವಹಿಸಲಿದ್ದು, ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆಯ ಅಧ್ಯಯನ ಕೇಂದ್ರದ ಡಿ.ಸಿ.ನಂಜುಂಡ ಸಹ ಸಂಶೋಧಕರಾಗಿರಲಿದ್ದಾರೆ. ಈ ಸಮಾಜದ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಸಂಶೋಧನೆ ನಡೆಸಲಾಗುತ್ತಿದೆ.</p>.<p>ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆಯು ಯೋಜನೆಯನ್ನು ಪ್ರಾಯೋಜಿಸಿದ್ದು, ₹13 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದೆ. ಅಧ್ಯಯನದ ಪೂರ್ವಸಿದ್ಧತೆಗಳು ನಡೆದಿವೆ.</p>.<p><strong>ವಿವಿಧ ಜಿಲ್ಲೆಗಳಲ್ಲಿ:</strong> ‘ಸಂಸ್ಥೆಯು 10ರಿಂದ 12 ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ ಕೈಗೆತ್ತಿಕೊಂಡಿದ್ದು, ‘ಗೋಪಾಲ’ ಸಮುದಾಯವೂ ಸೇರಿದೆ. ಸದ್ಯ ಈ ಸಮಾಜದವರನ್ನು ರಾಜ್ಯದ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯವಾಗಿ ಗುರುತಿಸಲಾಗಿದೆ’ ಎನ್ನುತ್ತಾರೆ ಪ್ರೊ.ರೇಖಾ ಜಾಧವ್.</p>.<p>ಈ ಜಾತಿಯು ಮೂಲತಃ ಅರೆ ಅಲೆಮಾರಿ ಸಮುದಾಯ. ಇವರು ಒಡಿಶಾ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ವಲಸೆ ಬಂದವರು. ಕೆಲವೆಡೆ ಇವರನ್ನು ‘ಯಾದವರು’ ಎಂದು ಕರೆಯಲಾಗುತ್ತದೆ. ರಾಜ್ಯದ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಮೈಸೂರು ಜಿಲ್ಲೆಯಲ್ಲಿ ಹೆಚ್ಚಿದ್ದಾರೆ.</p>.<p>‘ಸಮುದಾಯದ ಇತಿಹಾಸ, ವಲಸೆ, ಸಂಸ್ಕೃತಿ, ಚಲನಶೀಲತೆ, ಅನನ್ಯತೆ ಮೊದಲಾದ ಅಂಶಗಳ ಬಗ್ಗೆ ಹಾಗೂ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಕೈಗೊಳ್ಳಬಹುದಾದ ತುರ್ತು ಕ್ರಮಗಳ ಕುರಿತು ಅಧ್ಯಯನ ನಡೆಸಲಾಗುವುದು. ವಿಚಾರಸಂಕಿರಣ, ಸಮೀಕ್ಷೆ, ಮೌಲ್ಯಮಾಪನ ಪ್ರಕ್ರಿಯೆಯೂ ಅಧ್ಯಯನದ ಭಾಗವಾಗಿರಲಿದೆ’ ಎಂದು ರೇಖಾ ಮಾಹಿತಿ ನೀಡಿದರು.</p>.<p>‘ಗೋಪಾಲ ಸಮುದಾಯವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದ ಅತ್ಯಂತ ಅಲಕ್ಷಿತ ಅಲೆಮಾರಿ ಸಮುದಾಯ. ಪ್ರಸ್ತುತ ಅಧ್ಯಯನವು ಈ ಸಮುದಾಯದ ಒಳಗೊಳ್ಳುವಿಕೆಯ ಬೆಳವಣಿಗೆಗೆ ನೆರವಾಗಲಿ ಎಂಬ ಆಶಯ ನಮ್ಮದು’ ಎಂದು ಡಿ.ಸಿ. ನಂಜುಂಡ ಪ್ರತಿಕ್ರಿಯಿಸಿದರು.</p>.<blockquote>ದೇವರಾಜ ಅರಸು ಸಂಶೋಧನಾ ಸಂಸ್ಥೆಯ ಪ್ರಾಯೋಜಕತ್ವ ಹಿಂದುಳಿದ ಅರೆ ಅಲೆಮಾರಿ ಸಮುದಾಯಗಳಲ್ಲೊಂದು</blockquote>.<div><blockquote>ಈ ಕುಲಶಾಸ್ತ್ರೀಯ ಅಧ್ಯಯನವನ್ನು 18ರಿಂದ 24 ತಿಂಗಳೊಳಗೆ ಮುಗಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು</blockquote><span class="attribution">ಪ್ರೊ.ರೇಖಾ ಜಾಧವ್ ಮಹಾರಾಜ ಕಾಲೇಜು </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>