<p><strong>ಮೈಸೂರು:</strong> ಮುಂದಿನ ಜನವರಿಯಿಂದ ಜಿಲ್ಲೆಯಲ್ಲಿ ಆಟೊರಿಕ್ಷಾ ದರವು ಏರಿಕೆ ಆಗಲಿದೆ.</p>.<p>ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಕನಿಷ್ಠ ದರವನ್ನು ₹30ರಿಂದ ₹36ಕ್ಕೆ ಹಾಗೂ ನಂತರದ ಪ್ರತಿ ಕಿ.ಮೀ. ದರವನ್ನು ₹15ರಿಂದ ₹18 ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯು ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಈಶ್ವರ್ ಚೌಹಾಣ್ ಅವರಿಗೆ ಸೂಚಿಸಿದರು. </p>.<p>ಸಭೆಯಲ್ಲಿದ್ದ ಆಟೊ, ಚಾಲಕರು ಮತ್ತು ಮಾಲೀಕರ ಸಂಘದ ಸದಸ್ಯರು ಮಾತನಾಡಿ ‘ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಆಟೊ ದರ ಪರಿಷ್ಕರಣೆ ಮಾಡಿಲ್ಲ. ಆಗಾಗ್ಗೆ ಇಂಧನ ಬೆಲೆ ಏರಿಕೆ ಆಗುತ್ತಲೇ ಇದೆ. ಅಲ್ಲದೆ ರಿಕ್ಷಾ ದುರಸ್ತಿಯೂ ದುಬಾರಿ ಆಗುತ್ತಿದೆ. ದಿನಕ್ಕೆ ₹300–400 ಸಂಪಾದನೆ ಸಿಗುವುದೇ ಕಷ್ಟವಾಗಿದೆ. ಹೀಗಾಗಿ ದರ ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು.</p>.<p>ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ‘ಬೆಲೆ ನಿಯಂತ್ರಣ ಪ್ರಾಧಿಕಾರವು ರಾಜ್ಯಕ್ಕೆ ಅನ್ವಯವಾಗುವಂತೆ ದರ ಪರಿಷ್ಕರಣೆ ಮಾಡುತ್ತದೆ. ಅದು ಸಾಕಷ್ಟು ವಿಳಂಬವಾಗುತ್ತದೆ. ಸದ್ಯಕ್ಕೆ ಬೆಂಗಳೂರಿನಲ್ಲಿರುವ ದರದಂತೆ ಜನವರಿಯಿಂದ ಜಾರಿಯಾಗುವಂತೆ ಜಿಲ್ಲೆಯ ಆಟೊ ದರವನ್ನು ಹೆಚ್ಚಿಸಬೇಕು’ ಎಂದು ಸೂಚಿಸಿದರು.</p>.<p>ಬ್ಯಾಡ್ಜ್ ವಿತರಿಸಿ: ‘ವಿಮಾ ಕಂಪನಿಗಳು ಆಟೊ ಚಾಲಕರಿಗೆ ಬ್ಯಾಡ್ಜ್ ಇದ್ದರೆ ಮಾತ್ರ ವಿಮಾ ಪಾವತಿಗೆ ಪರಿಗಣಿಸುತ್ತಿವೆ. ಹೀಗಾಗಿ ವಿಶೇಷ ಅಭಿಯಾನದ ಮೂಲಕ ಎಲ್ಲರಿಗೂ ಬ್ಯಾಡ್ಜ್ ವಿತರಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.</p>.<p>ಹೊರ ರಾಜ್ಯ ವಾಹನ ತಪಾಸಣೆ: ‘ಮೈಸೂರಿನಲ್ಲಿ ಮಹಾರಾಷ್ಟ್ರ, ಕೇರಳ ಮೂಲದ ಆಟೊಗಳ ಓಡಾಟ ಹೆಚ್ಚಿದೆ. ಕಾನೂನಿನ ಪ್ರಕಾರ ದಾಖಲೆಗಳನ್ನು ನೀಡಿ ವರ್ಗಾವಣೆ ಮಾಡಿಕೊಳ್ಳಬೇಕು. ಈ ನಿಯಮ ಪಾಲನೆ ಮಾಡದೆ ರಿಕ್ಷಾಗಳನ್ನು ಚಾಲನೆ ಮಾಡಲಾಗುತ್ತಿದೆ’ ಎಂಬ ದೂರುಗಳು ಕೇಳಿಬಂದವು.</p>.<p>ಮುಂದಿನ 15 ದಿನಗಳವರೆಗೆ ಹೊರ ರಾಜ್ಯ ವಾಹನಗಳ ತಪಾಸಣೆ ಅಭಿಯಾನ ಆರಂಭಿಸಿ, ದಾಖಲೆಗಳ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.</p>.<p>ನಗರ ಪೂರ್ವ ವಲಯ ಆರ್ಟಿಒ ಮಧುರಾ, ಮೈಸೂರು ಆರ್ಟಿಒ ಪಶ್ಚಿಮ ರಾಮಚಂದ್ರಪ್ಪ, ಎಆರ್ಟಿಒ ನಯಾಜ್ ಪಾಷಾ, ಮಂಜುನಾಥ್, ಶಿವಕುಮಾರ್ ಇದ್ದರು.</p>.<p><strong>- ಪ್ರೀಪೇಯ್ಡ್ ಕೇಂದ್ರ ಹೆಚ್ಚಿಸಲು ಮನವಿ</strong></p><p> ‘ನಗರದಲ್ಲಿನ ಆಟೊ ಪ್ರೀಪೇಯ್ಡ್ ಕೇಂದ್ರಗಳ ಮೇಲೆ ಒತ್ತಡ ಹೆಚ್ಚಿದ್ದು ಇನ್ನಷ್ಟು ಕಡೆಗಳಲ್ಲಿ ಕೇಂದ್ರಗಳನ್ನು ಆರಂಭಿಸಬೇಕು. ಅಂತಹ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು’ ಎಂದು ಆಟೊ ಚಾಲಕರು ಮನವಿ ಮಾಡಿದರು. ‘ರಿಂಗ್ ರಸ್ತೆಯಿಂದ 8 ಕಿ.ಮೀ. ಆಚೆಗೆ ಆಟೊರಿಕ್ಷಾ ಸೇವೆ ನೀಡಲು ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ ಪೊಲೀಸರು ಅದಕ್ಕೆ ಅವಕಾಶ ಮಾಡುತ್ತಿಲ್ಲ. ಕೇಳಿದರೆ ನಮಗೆ ಆ ಬಗ್ಗೆ ಸೂಕ್ತ ನಿರ್ದೇಶನ ಬಂದಿಲ್ಲ ಎಂದು ಹೇಳುತ್ತಿದ್ದಾರೆ’ ಎಂದು ಸಂಘಟನೆಯ ಪದಾಧಿಕಾರಿಗಳು ದೂರಿದರು. ಸಂಚಾರ ವಿಭಾಗದ ಡಿಸಿಪಿ ಸುಂದರ್ರಾಜ್ ಪ್ರತಿಕ್ರಿಯಿಸಿ ‘ಈ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಲಾಗುವುದು’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಮುಂದಿನ ಜನವರಿಯಿಂದ ಜಿಲ್ಲೆಯಲ್ಲಿ ಆಟೊರಿಕ್ಷಾ ದರವು ಏರಿಕೆ ಆಗಲಿದೆ.</p>.<p>ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಕನಿಷ್ಠ ದರವನ್ನು ₹30ರಿಂದ ₹36ಕ್ಕೆ ಹಾಗೂ ನಂತರದ ಪ್ರತಿ ಕಿ.ಮೀ. ದರವನ್ನು ₹15ರಿಂದ ₹18 ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯು ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಈಶ್ವರ್ ಚೌಹಾಣ್ ಅವರಿಗೆ ಸೂಚಿಸಿದರು. </p>.<p>ಸಭೆಯಲ್ಲಿದ್ದ ಆಟೊ, ಚಾಲಕರು ಮತ್ತು ಮಾಲೀಕರ ಸಂಘದ ಸದಸ್ಯರು ಮಾತನಾಡಿ ‘ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಆಟೊ ದರ ಪರಿಷ್ಕರಣೆ ಮಾಡಿಲ್ಲ. ಆಗಾಗ್ಗೆ ಇಂಧನ ಬೆಲೆ ಏರಿಕೆ ಆಗುತ್ತಲೇ ಇದೆ. ಅಲ್ಲದೆ ರಿಕ್ಷಾ ದುರಸ್ತಿಯೂ ದುಬಾರಿ ಆಗುತ್ತಿದೆ. ದಿನಕ್ಕೆ ₹300–400 ಸಂಪಾದನೆ ಸಿಗುವುದೇ ಕಷ್ಟವಾಗಿದೆ. ಹೀಗಾಗಿ ದರ ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು.</p>.<p>ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ‘ಬೆಲೆ ನಿಯಂತ್ರಣ ಪ್ರಾಧಿಕಾರವು ರಾಜ್ಯಕ್ಕೆ ಅನ್ವಯವಾಗುವಂತೆ ದರ ಪರಿಷ್ಕರಣೆ ಮಾಡುತ್ತದೆ. ಅದು ಸಾಕಷ್ಟು ವಿಳಂಬವಾಗುತ್ತದೆ. ಸದ್ಯಕ್ಕೆ ಬೆಂಗಳೂರಿನಲ್ಲಿರುವ ದರದಂತೆ ಜನವರಿಯಿಂದ ಜಾರಿಯಾಗುವಂತೆ ಜಿಲ್ಲೆಯ ಆಟೊ ದರವನ್ನು ಹೆಚ್ಚಿಸಬೇಕು’ ಎಂದು ಸೂಚಿಸಿದರು.</p>.<p>ಬ್ಯಾಡ್ಜ್ ವಿತರಿಸಿ: ‘ವಿಮಾ ಕಂಪನಿಗಳು ಆಟೊ ಚಾಲಕರಿಗೆ ಬ್ಯಾಡ್ಜ್ ಇದ್ದರೆ ಮಾತ್ರ ವಿಮಾ ಪಾವತಿಗೆ ಪರಿಗಣಿಸುತ್ತಿವೆ. ಹೀಗಾಗಿ ವಿಶೇಷ ಅಭಿಯಾನದ ಮೂಲಕ ಎಲ್ಲರಿಗೂ ಬ್ಯಾಡ್ಜ್ ವಿತರಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.</p>.<p>ಹೊರ ರಾಜ್ಯ ವಾಹನ ತಪಾಸಣೆ: ‘ಮೈಸೂರಿನಲ್ಲಿ ಮಹಾರಾಷ್ಟ್ರ, ಕೇರಳ ಮೂಲದ ಆಟೊಗಳ ಓಡಾಟ ಹೆಚ್ಚಿದೆ. ಕಾನೂನಿನ ಪ್ರಕಾರ ದಾಖಲೆಗಳನ್ನು ನೀಡಿ ವರ್ಗಾವಣೆ ಮಾಡಿಕೊಳ್ಳಬೇಕು. ಈ ನಿಯಮ ಪಾಲನೆ ಮಾಡದೆ ರಿಕ್ಷಾಗಳನ್ನು ಚಾಲನೆ ಮಾಡಲಾಗುತ್ತಿದೆ’ ಎಂಬ ದೂರುಗಳು ಕೇಳಿಬಂದವು.</p>.<p>ಮುಂದಿನ 15 ದಿನಗಳವರೆಗೆ ಹೊರ ರಾಜ್ಯ ವಾಹನಗಳ ತಪಾಸಣೆ ಅಭಿಯಾನ ಆರಂಭಿಸಿ, ದಾಖಲೆಗಳ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.</p>.<p>ನಗರ ಪೂರ್ವ ವಲಯ ಆರ್ಟಿಒ ಮಧುರಾ, ಮೈಸೂರು ಆರ್ಟಿಒ ಪಶ್ಚಿಮ ರಾಮಚಂದ್ರಪ್ಪ, ಎಆರ್ಟಿಒ ನಯಾಜ್ ಪಾಷಾ, ಮಂಜುನಾಥ್, ಶಿವಕುಮಾರ್ ಇದ್ದರು.</p>.<p><strong>- ಪ್ರೀಪೇಯ್ಡ್ ಕೇಂದ್ರ ಹೆಚ್ಚಿಸಲು ಮನವಿ</strong></p><p> ‘ನಗರದಲ್ಲಿನ ಆಟೊ ಪ್ರೀಪೇಯ್ಡ್ ಕೇಂದ್ರಗಳ ಮೇಲೆ ಒತ್ತಡ ಹೆಚ್ಚಿದ್ದು ಇನ್ನಷ್ಟು ಕಡೆಗಳಲ್ಲಿ ಕೇಂದ್ರಗಳನ್ನು ಆರಂಭಿಸಬೇಕು. ಅಂತಹ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು’ ಎಂದು ಆಟೊ ಚಾಲಕರು ಮನವಿ ಮಾಡಿದರು. ‘ರಿಂಗ್ ರಸ್ತೆಯಿಂದ 8 ಕಿ.ಮೀ. ಆಚೆಗೆ ಆಟೊರಿಕ್ಷಾ ಸೇವೆ ನೀಡಲು ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ ಪೊಲೀಸರು ಅದಕ್ಕೆ ಅವಕಾಶ ಮಾಡುತ್ತಿಲ್ಲ. ಕೇಳಿದರೆ ನಮಗೆ ಆ ಬಗ್ಗೆ ಸೂಕ್ತ ನಿರ್ದೇಶನ ಬಂದಿಲ್ಲ ಎಂದು ಹೇಳುತ್ತಿದ್ದಾರೆ’ ಎಂದು ಸಂಘಟನೆಯ ಪದಾಧಿಕಾರಿಗಳು ದೂರಿದರು. ಸಂಚಾರ ವಿಭಾಗದ ಡಿಸಿಪಿ ಸುಂದರ್ರಾಜ್ ಪ್ರತಿಕ್ರಿಯಿಸಿ ‘ಈ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಲಾಗುವುದು’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>