‘ನೀನು ಸಿನಿಮಾ ನಟ, ಬೇಕಾದ್ದೆಲ್ಲ ಇದೆ, ನಿನಗೆ ಇದೆಲ್ಲ ಯಾಕೆ, ನಿನ್ನ ಸಿನಿಮಾ, ಹಾಡು ಕಡಿಮೆ ಮಾಡುತ್ತಿದ್ದಾರೆ ಎಂದು ಅನೇಕರು ಕೇಳುತ್ತಾರೆ. ತ್ಯಾಗಕ್ಕೆ ಹೆದರದ ಶ್ರೀಮಂತ ನಾನು. ಅಂಬೇಡ್ಕರ್ ನನ್ನ ಶ್ರೀಮಂತಿಕೆ. ಲಂಕೇಶ್, ಕುವೆಂಪು, ತೇಜಸ್ವಿ ಇವರೇ ನನ್ನ ಶ್ರೀಮಂತಿಕೆ. ಇಂಥ ಸ್ವಾಭಿಮಾನದ ಕಾರ್ಯಕ್ರಮ, ಭೀಮಾ ಚೈತನ್ಯದಲ್ಲಿ ಪಾಲ್ಗೊಳ್ಳುವುದೇ ಶ್ರೀಮಂತಿಕೆ’ ಎಂದು ಪ್ರತಿಪಾದಿಸಿದರು.