<p><strong>ಮೈಸೂರು:</strong> ಜೆಎಲ್ಬಿ ರಸ್ತೆಯ ಐಡಿಯಲ್ ಜಾವಾ ಶಾಲೆ ಸಭಾಂಗಣ ಶನಿವಾರ ವಿಭಿನ್ನ ಬಗೆಯ ಕೃತಿ ಬಿಡುಗಡೆ ಸಮಾರಂಭಕ್ಕೆ ಸಾಕ್ಷಿಯಾಯಿತು. ಕಳೆದ ವರ್ಷ ನಿಧನರಾದ ‘ಹಾಡುಪಾಡು’ ರಾಮು ಅವರ ‘ ನುಡಿ ಬಾಗಿಲ ಹಾಯ್ಡು’ ಕೃತಿ ಅನಾವರಣಗೊಳಿಸಿದ ಅವರ ಒಡನಾಡಿಗಳು, ಮಾತಿಗಿಂತ ಹೆಚ್ಚಾಗಿ ಕವಿತೆ ವಾಚನದ ಮೂಲಕವೇ ರಾಮುಗೆ ನುಡಿನಮನ ಸಲ್ಲಿಸಿದರು.</p>.<p>ಕಾರ್ಯಕ್ರಮದಲ್ಲಿ ಪಾಲ್ಗೊಂಡ ಒಬ್ಬೊಬ್ಬ ಅತಿಥಿಯೂ ರಾಮು ಅವರ ಅಷ್ಟೂ ಕವಿತೆಗಳ ಪೈಕಿ ತಮ್ಮಿಷ್ಟದ 1–2 ಪದ್ಯ ಓದಿದರು. ಜೊತೆಗೆ ರಾಮು ತಮಗೆ ಯಾಕೆಲ್ಲ ಇಷ್ಟವಾಗಿದ್ದರು ಎಂಬುದನ್ನು ನೆನೆದರು.</p>.<p>ಕವಯತ್ರಿ ಚ. ಸರ್ವಮಂಗಳಾ ‘ರಾಮು ಅವರಿಗೆ ಎಲ್ಲವನ್ಮೂ ಮುಚ್ಚಿಟ್ಟು ಹೇಳುವ ಅಭ್ಯಾಸ ಹೆಚ್ಚು. ಆತ್ಮ ಸಂಗಾತದ ಕವಿತೆಗಳೇ ಇಲ್ಲಿ ಹೆಚ್ಚು’ ಎಂದು ಬಣ್ಣಿಸಿದರು.</p>.<p>ಲೇಖಕಿ ಜ.ನಾ. ತೇಜಶ್ರೀ ‘ರಾಮು ಕವಿತೆಗಳಲ್ಲಿ ಅನ್ಯ ಭಾಷೆಗಳ ಪದ ಬಳಕೆ ಹೆಚ್ಚು ಮತ್ತು ಅವು ಸಹಜ ಎಂಬಂತೆ ಕವಿತೆಯಲ್ಲಿ ಸೇರಿಕೊಳ್ಳುತ್ತವೆ. ರಾಮು ಬದುಕು ಕೂಡ ನೂರಾರು ನುಡಿಗಳನ್ನು ಮುರಿದ ಸೋಜಿಗ’ ಎಂದರು.</p>.<p>ಲೇಖಕ ರಾಜೇಂದ್ರ ಚೆನ್ನಿ, ‘ರಾಮು ಪದ್ಯಗಳು ಶ್ರದ್ಧೆಯ ಕಾವ್ಯ. ಅವರು ಬೇಂದ್ರೆ ಅವರ ವಾರಸುದಾರರಂತೆ ಕಾಣುತ್ತಾರೆ. ಇಡೀ ಕೃತಿಯಲ್ಲಿ ತಾಯ್ತನ ಹಾಸುಹೊಕ್ಕಾಗಿದೆ’ ಎಂದು ನುಡಿದರು.</p>.<p>ಲೇಖಕ ರಹಮತ್ ತರೀಕೆರೆ, ‘ಕಣ್ಣು ಮಂಜಾಗುವವರೆಗೂ ಓದಿದ್ದ ರಾಮು, ಲೇಖಕರ ಪ್ರೇಮಿ ಆಗಿದ್ದರು. ಕಿರಿಯ ಬರಹಗಾರರನ್ನು ಬೆಳೆಸುವ ತಾಯ್ತನ ಅವರಲ್ಲಿತ್ತು. ರಾಮು ಮನೆ ಅನುಭವ ಮಂಟಪದಂತೆ ಇತ್ತು. ರಾಮು ಮತ್ತು ರಾಜೀವ್ ತಾರಾನಾಥರು ಕನ್ನಡದ ಎರಡು ವಿಶಿಷ್ಟ ಪ್ರತಿಭೆಗಳು’ ಎಂದರು.</p>.<p>ವಿಮರ್ಶಕ ಓ.ಎಲ್. ನಾಗಭೂಷಣಸ್ವಾಮಿ, ವನ್ಯಜೀವಿ ತಜ್ಞ ಸೇನಾನಿ, ರಾಮು ಜೊತೆಗಿನ ನೆನಪು ತೆರದಿಟ್ಟರು. ವನ್ಯಜೀವಿ ತಜ್ಞ ಕೃಪಾಕರ, ಪ್ರಕಾಶಕಿ ಕೆ. ಅಕ್ಷತಾ ಪಾಲ್ಗೊಂಡರು.</p>.<p>ಕೃತಿ ಪರಿಚಯ ಕೃತಿ; ನುಡಿಯ ಬಾಗಿಲ ಹಾಯ್ಡು </p><p>ಪ್ರಕಾಶಕರು; ಅಹರ್ನಿಶಿ ಪ್ರಕಾಶನ </p><p>ಪುಟ; 215 </p><p>ಬೆಲೆ: ₹216</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಜೆಎಲ್ಬಿ ರಸ್ತೆಯ ಐಡಿಯಲ್ ಜಾವಾ ಶಾಲೆ ಸಭಾಂಗಣ ಶನಿವಾರ ವಿಭಿನ್ನ ಬಗೆಯ ಕೃತಿ ಬಿಡುಗಡೆ ಸಮಾರಂಭಕ್ಕೆ ಸಾಕ್ಷಿಯಾಯಿತು. ಕಳೆದ ವರ್ಷ ನಿಧನರಾದ ‘ಹಾಡುಪಾಡು’ ರಾಮು ಅವರ ‘ ನುಡಿ ಬಾಗಿಲ ಹಾಯ್ಡು’ ಕೃತಿ ಅನಾವರಣಗೊಳಿಸಿದ ಅವರ ಒಡನಾಡಿಗಳು, ಮಾತಿಗಿಂತ ಹೆಚ್ಚಾಗಿ ಕವಿತೆ ವಾಚನದ ಮೂಲಕವೇ ರಾಮುಗೆ ನುಡಿನಮನ ಸಲ್ಲಿಸಿದರು.</p>.<p>ಕಾರ್ಯಕ್ರಮದಲ್ಲಿ ಪಾಲ್ಗೊಂಡ ಒಬ್ಬೊಬ್ಬ ಅತಿಥಿಯೂ ರಾಮು ಅವರ ಅಷ್ಟೂ ಕವಿತೆಗಳ ಪೈಕಿ ತಮ್ಮಿಷ್ಟದ 1–2 ಪದ್ಯ ಓದಿದರು. ಜೊತೆಗೆ ರಾಮು ತಮಗೆ ಯಾಕೆಲ್ಲ ಇಷ್ಟವಾಗಿದ್ದರು ಎಂಬುದನ್ನು ನೆನೆದರು.</p>.<p>ಕವಯತ್ರಿ ಚ. ಸರ್ವಮಂಗಳಾ ‘ರಾಮು ಅವರಿಗೆ ಎಲ್ಲವನ್ಮೂ ಮುಚ್ಚಿಟ್ಟು ಹೇಳುವ ಅಭ್ಯಾಸ ಹೆಚ್ಚು. ಆತ್ಮ ಸಂಗಾತದ ಕವಿತೆಗಳೇ ಇಲ್ಲಿ ಹೆಚ್ಚು’ ಎಂದು ಬಣ್ಣಿಸಿದರು.</p>.<p>ಲೇಖಕಿ ಜ.ನಾ. ತೇಜಶ್ರೀ ‘ರಾಮು ಕವಿತೆಗಳಲ್ಲಿ ಅನ್ಯ ಭಾಷೆಗಳ ಪದ ಬಳಕೆ ಹೆಚ್ಚು ಮತ್ತು ಅವು ಸಹಜ ಎಂಬಂತೆ ಕವಿತೆಯಲ್ಲಿ ಸೇರಿಕೊಳ್ಳುತ್ತವೆ. ರಾಮು ಬದುಕು ಕೂಡ ನೂರಾರು ನುಡಿಗಳನ್ನು ಮುರಿದ ಸೋಜಿಗ’ ಎಂದರು.</p>.<p>ಲೇಖಕ ರಾಜೇಂದ್ರ ಚೆನ್ನಿ, ‘ರಾಮು ಪದ್ಯಗಳು ಶ್ರದ್ಧೆಯ ಕಾವ್ಯ. ಅವರು ಬೇಂದ್ರೆ ಅವರ ವಾರಸುದಾರರಂತೆ ಕಾಣುತ್ತಾರೆ. ಇಡೀ ಕೃತಿಯಲ್ಲಿ ತಾಯ್ತನ ಹಾಸುಹೊಕ್ಕಾಗಿದೆ’ ಎಂದು ನುಡಿದರು.</p>.<p>ಲೇಖಕ ರಹಮತ್ ತರೀಕೆರೆ, ‘ಕಣ್ಣು ಮಂಜಾಗುವವರೆಗೂ ಓದಿದ್ದ ರಾಮು, ಲೇಖಕರ ಪ್ರೇಮಿ ಆಗಿದ್ದರು. ಕಿರಿಯ ಬರಹಗಾರರನ್ನು ಬೆಳೆಸುವ ತಾಯ್ತನ ಅವರಲ್ಲಿತ್ತು. ರಾಮು ಮನೆ ಅನುಭವ ಮಂಟಪದಂತೆ ಇತ್ತು. ರಾಮು ಮತ್ತು ರಾಜೀವ್ ತಾರಾನಾಥರು ಕನ್ನಡದ ಎರಡು ವಿಶಿಷ್ಟ ಪ್ರತಿಭೆಗಳು’ ಎಂದರು.</p>.<p>ವಿಮರ್ಶಕ ಓ.ಎಲ್. ನಾಗಭೂಷಣಸ್ವಾಮಿ, ವನ್ಯಜೀವಿ ತಜ್ಞ ಸೇನಾನಿ, ರಾಮು ಜೊತೆಗಿನ ನೆನಪು ತೆರದಿಟ್ಟರು. ವನ್ಯಜೀವಿ ತಜ್ಞ ಕೃಪಾಕರ, ಪ್ರಕಾಶಕಿ ಕೆ. ಅಕ್ಷತಾ ಪಾಲ್ಗೊಂಡರು.</p>.<p>ಕೃತಿ ಪರಿಚಯ ಕೃತಿ; ನುಡಿಯ ಬಾಗಿಲ ಹಾಯ್ಡು </p><p>ಪ್ರಕಾಶಕರು; ಅಹರ್ನಿಶಿ ಪ್ರಕಾಶನ </p><p>ಪುಟ; 215 </p><p>ಬೆಲೆ: ₹216</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>