<p>ಮೈಸೂರು: ‘ಮಿದುಳು ಟ್ಯೂಮರ್ (ಗಡ್ಡೆ) ಸಮಸ್ಯೆಯಿಂದ ಬಳಲುತ್ತಿರುವವರಿಗೆ ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ‘ಸ್ಟಿರಿಯೊಟ್ಯಾಕ್ಟಿಕ್ ರೇಡಿಯೊ ಸರ್ಜರಿ’ (ಎಸ್ಆರ್ಎಸ್) ಹಾಗೂ ‘ಸ್ಟಿರಿಯೊಟ್ಯಾಕ್ಟಿಕ್ ರೇಡಿಯೇಶನ್ ಥೆರಪಿ’ (ಎಸ್ಆರ್ಟಿ) ಚಿಕಿತ್ಸೆ ಸೌಲಭ್ಯವಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ಮಾಧವಿ ಹೇಳಿದರು.</p>.<p>ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪ್ರತಿ ತಿಂಗಳು 8ರಿಂದ 10 ಪ್ರಕರಣಗಳು ವರದಿಯಾಗುತ್ತಿವೆ. ಎಲ್ಲ ವಯೋಮಾನದವರೂ ಮಿದುಳು ಗಡ್ಡೆ ಸಮಸ್ಯೆ ಎದುರಿಸುತ್ತಿದ್ದಾರೆ. ಸುಧಾರಿತ ರೇಡಿಯೊಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.</p>.<p>‘ದೇಶದಲ್ಲಿ ವರ್ಷಕ್ಕೆ 24 ಸಾವಿರ ಮಂದಿ ರೋಗಕ್ಕೆ ಬಲಿಯಾಗುತ್ತಿದ್ದು, ರೋಗಲಕ್ಷಣಗಳನ್ನು ಅರಿಯಬೇಕು. ತಲೆನೋವು, ವಾಂತಿ, ದೃಷ್ಟಿ ಮಂದವಾಗುವುದು, ದೇಹದಲ್ಲಿ ಅಸಮತೋಲನ, ಸ್ನಾಯು ನೋವು ಉಂಟಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು’ ಎಂದು ಹೇಳಿದರು. </p>.<p>ಅಂಕಾಲಜಿಸ್ಟ್ ಡಾ.ವಿನಯ್ಕುಮಾರ್ ಮುತ್ತಗಿ ಮಾತನಾಡಿ, ‘ಜೂನ್ 8ರಂದು ವಿಶ್ವ ಮಿದುಳು ಗಡ್ಡೆ ದಿನವನ್ನು ಆಚರಿಸಲಾಗಿದ್ದು, ಮಿದುಳಿನ ಆರೋಗ್ಯ ಮತ್ತು ತಡೆಗಟ್ಟುವಿಕೆ ಈ ವರ್ಷದ ಧ್ಯೇಯವಾಕ್ಯವಾಗಿದೆ. ಗಡ್ಡೆ ಬೆಳೆದಾಗ ಮಿದುಳಿನ ಚಿಪ್ಪು ಅಗಲವಾಗುವುದಿಲ್ಲ. ಅದರಿಂದ ಅಪಾಯವು ಹೆಚ್ಚಿರುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಬೇಕು. ಟ್ಯೂಮರ್ ಬಗ್ಗೆ ಜಾಗೃತಿ ಅಗತ್ಯ’ ಎಂದರು. </p>.<p>‘ಆರೋಗ್ಯಕರ ಜೀವನಶೈಲಿ ನಡೆಸಬೇಕು. ನಿತ್ಯ 40 ನಿಮಿಷ ವ್ಯಾಯಾಮ, 8 ಗಂಟೆ ನಿದ್ದೆ ಮಾಡಬೇಕು. ಮೊಬೈಲ್ ನೋಡುವುದನ್ನು ಕಡಿಮೆ ಮಾಡಬೇಕು’ ಎಂದು ಸಲಹೆ ನೀಡಿದರು.</p>.<p>ಆಸ್ಪತ್ರೆಯ ಮಾರುಕಟ್ಟೆ ವ್ಯವಸ್ಥಾಪಕ ಆನಂದ್, ಗೌತಮ್ ಧಮೇರ್ಲಾ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಮಿದುಳು ಟ್ಯೂಮರ್ (ಗಡ್ಡೆ) ಸಮಸ್ಯೆಯಿಂದ ಬಳಲುತ್ತಿರುವವರಿಗೆ ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ‘ಸ್ಟಿರಿಯೊಟ್ಯಾಕ್ಟಿಕ್ ರೇಡಿಯೊ ಸರ್ಜರಿ’ (ಎಸ್ಆರ್ಎಸ್) ಹಾಗೂ ‘ಸ್ಟಿರಿಯೊಟ್ಯಾಕ್ಟಿಕ್ ರೇಡಿಯೇಶನ್ ಥೆರಪಿ’ (ಎಸ್ಆರ್ಟಿ) ಚಿಕಿತ್ಸೆ ಸೌಲಭ್ಯವಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ಮಾಧವಿ ಹೇಳಿದರು.</p>.<p>ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪ್ರತಿ ತಿಂಗಳು 8ರಿಂದ 10 ಪ್ರಕರಣಗಳು ವರದಿಯಾಗುತ್ತಿವೆ. ಎಲ್ಲ ವಯೋಮಾನದವರೂ ಮಿದುಳು ಗಡ್ಡೆ ಸಮಸ್ಯೆ ಎದುರಿಸುತ್ತಿದ್ದಾರೆ. ಸುಧಾರಿತ ರೇಡಿಯೊಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.</p>.<p>‘ದೇಶದಲ್ಲಿ ವರ್ಷಕ್ಕೆ 24 ಸಾವಿರ ಮಂದಿ ರೋಗಕ್ಕೆ ಬಲಿಯಾಗುತ್ತಿದ್ದು, ರೋಗಲಕ್ಷಣಗಳನ್ನು ಅರಿಯಬೇಕು. ತಲೆನೋವು, ವಾಂತಿ, ದೃಷ್ಟಿ ಮಂದವಾಗುವುದು, ದೇಹದಲ್ಲಿ ಅಸಮತೋಲನ, ಸ್ನಾಯು ನೋವು ಉಂಟಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು’ ಎಂದು ಹೇಳಿದರು. </p>.<p>ಅಂಕಾಲಜಿಸ್ಟ್ ಡಾ.ವಿನಯ್ಕುಮಾರ್ ಮುತ್ತಗಿ ಮಾತನಾಡಿ, ‘ಜೂನ್ 8ರಂದು ವಿಶ್ವ ಮಿದುಳು ಗಡ್ಡೆ ದಿನವನ್ನು ಆಚರಿಸಲಾಗಿದ್ದು, ಮಿದುಳಿನ ಆರೋಗ್ಯ ಮತ್ತು ತಡೆಗಟ್ಟುವಿಕೆ ಈ ವರ್ಷದ ಧ್ಯೇಯವಾಕ್ಯವಾಗಿದೆ. ಗಡ್ಡೆ ಬೆಳೆದಾಗ ಮಿದುಳಿನ ಚಿಪ್ಪು ಅಗಲವಾಗುವುದಿಲ್ಲ. ಅದರಿಂದ ಅಪಾಯವು ಹೆಚ್ಚಿರುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಬೇಕು. ಟ್ಯೂಮರ್ ಬಗ್ಗೆ ಜಾಗೃತಿ ಅಗತ್ಯ’ ಎಂದರು. </p>.<p>‘ಆರೋಗ್ಯಕರ ಜೀವನಶೈಲಿ ನಡೆಸಬೇಕು. ನಿತ್ಯ 40 ನಿಮಿಷ ವ್ಯಾಯಾಮ, 8 ಗಂಟೆ ನಿದ್ದೆ ಮಾಡಬೇಕು. ಮೊಬೈಲ್ ನೋಡುವುದನ್ನು ಕಡಿಮೆ ಮಾಡಬೇಕು’ ಎಂದು ಸಲಹೆ ನೀಡಿದರು.</p>.<p>ಆಸ್ಪತ್ರೆಯ ಮಾರುಕಟ್ಟೆ ವ್ಯವಸ್ಥಾಪಕ ಆನಂದ್, ಗೌತಮ್ ಧಮೇರ್ಲಾ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>