<p><strong>ಮೈಸೂರು:</strong> ರಾಜ್ಯದಲ್ಲಿ ‘ಬಾಲಭಿಕ್ಷಾಟನೆ’ಯಲ್ಲಿ ತೊಡಗುವ ಮಕ್ಕಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಬರೆಯುವ ಕೈಗಳಿಗೆ ‘ಬರೆ’ ಬೀಳುತ್ತಿದೆ.</p>.<p>ಇಲ್ಲಿನ ಒಡನಾಡಿ ಸೇವಾ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ಸಲ್ಲಿಸಿದ್ದ ಅರ್ಜಿಗೆ ರಾಜ್ಯ ಮಕ್ಕಳ ನಿರ್ದೇಶನಾಲಯವು ಮಾಹಿತಿ ನೀಡಿದ್ದು, 2021ರಿಂದ 2023ರವರೆಗೆ ರಾಜ್ಯದಲ್ಲಿ 1,347 ಅಂಥ ಮಕ್ಕಳಿದ್ದಾರೆ.</p>.<p>ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ನಿರ್ದೇಶನಾಲಯ ನೀಡಿದ್ದು, ಅವರಲ್ಲಿ 632 ಬಾಲಕಿಯರಿದ್ದಾರೆ. ರಕ್ಷಿಸುತ್ತಿದ್ದರೂ ಬಾಲಕ–ಬಾಲಕಿಯರು ಮತ್ತೆ ಭಿಕ್ಷಾಟನೆಗಿಳಿಯುತ್ತಿದ್ದಾರೆ.</p>.<p><strong>ಕೂಸೆತ್ತಿಕೊಂಡು:</strong> </p>.<p>ಮೈಸೂರು ಸೇರಿದಂತೆ ಮಹಾನಗರಗಳ ಟ್ರಾಫಿಕ್ ಸಿಗ್ನಲ್ಗಳಲ್ಲಿ ಮಕ್ಕಳು ಭಿಕ್ಷೆ ಬೇಡುವುದು ಕಂಡುಬರುತ್ತಿದೆ. ಕಂಕುಳಲ್ಲಿ ಕೂಸು ಕೂರಿಸಿಕೊಂಡು ಹಣ ಕೇಳುತ್ತಾರೆ. ಕೆಲವರು, ಸಣ್ಣ ಬುಟ್ಟಿಯಲ್ಲಿ ದೇವರ ಫೋಟೊ ಅಥವಾ ವಿಗ್ರಹವನ್ನಿಟ್ಟುಕೊಂಡು ಭಿಕ್ಷೆಗೆ ನಿಲ್ಲುವುದು ಕಾಣಸಿಗುತ್ತಿದೆ. ಕೆಲವರ ಕೈ–ಕಾಲಿನಲ್ಲಿ ಗಾಯಗಳಿರುತ್ತವೆ.</p>.<p>‘ಬಾಲಭಿಕ್ಷಾಟನೆ ಮುಕ್ತ ರಾಜ್ಯ ನಿರ್ಮಾಣ ನಮ್ಮ ಗುರಿ ಎಂದು ಸರ್ಕಾರ ಅಥವಾ ಸಂಬಂಧಿಸಿದ ಇಲಾಖೆ ಹೇಳುತ್ತದೆ. ಆದರೆ, ಇವರಿಗೆ ಸಮರ್ಪಕ ಪುನರ್ವಸತಿ ಕಲ್ಪಿಸದೆ, ಭಿಕ್ಷಾಟನೆಗೆ ಇಳಿಯುತ್ತಲೇ ಇರುತ್ತಾರೆ. ಅವರನ್ನು ಬೀದಿಗೆ ತಳ್ಳುವ ಜಾಲವೂ ಇದೆ’ ಎಂಬ ಆರೋಪವೂ ಇದೆ.</p>.<p><strong>ಅಂಕಿ–ಅಂಶಗಳಿಂದಲೇ ದೃಢ:</strong></p>.<p>‘ಬೆಂಗಳೂರು, ಮೈಸೂರಿನಂತಹ ನಗರಗಳಲ್ಲಿ ಬಾಲಭಿಕ್ಷುಕರು ಹೆಚ್ಚಿದ್ದಾರೆ. ರಕ್ಷಿಸಿದ ಅಂಥ ಮಕ್ಕಳನ್ನು ಪೋಷಕರಿಗೇ ಒಪ್ಪಿಸಲಾಗುತ್ತಿದೆ. ಆ ಅಸಹಾಯಕರು ಅನಿವಾರ್ಯವಾಗಿ ಮತ್ತೆ ಭಿಕ್ಷಾಟನೆಗೆ ದೂಡುತ್ತಾರೆ. ಬಾಲಕಿಯರು ಲೈಂಗಿಕವಾಗಿ ದುರ್ಬಳಕೆಯಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ, ಅಂಥವರ ಪುನರ್ವಸತಿಗೆ ಸಮರ್ಪಕ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಎಂ.ಎಲ್.ಪರಶುರಾಮ್.</p>.<p>‘ಸಾಮಾನ್ಯ ಪುನರ್ವಸತಿ ಕಾರ್ಯಕ್ರಮಕ್ಕಿಂತ ಸಂಗೀತ, ನಾಟಕ, ವೈಜ್ಞಾನಿಕ ತಿಳಿವಳಿಕೆ, ಅನೌಪಚಾರಿಕ ಶಿಕ್ಷಣದಂತಹ ಚಟುವಟಿಕೆಗಳು ನಡೆಯಬೇಕಾಗಿದೆ. ಕೆಲವು ವರ್ಷಗಳು ಭಿಕ್ಷಾಟನೆಯಲ್ಲೇ ಇದ್ದವರನ್ನು ರಕ್ಷಿಸಿದರೂ, ಅವರಿಗೆ ಅದರತ್ತಲೇ ‘ಸೆಳೆತ’ವಿರುತ್ತದೆ. ಹೀಗಾಗಿ, ಅವರನ್ನು ಉತ್ತಮ ಮಾರ್ಗದಲ್ಲಿ ನಡೆಸುವಂತಹ ಪುನರ್ವಸತಿ ಅಗತ್ಯವಿದೆ’ ಎಂಬ ಸಲಹೆ ಅವರದು.</p>.<p><strong>ಪ್ರಯೋಜನ ಆಗದು:</strong></p>.<p>‘ಮಕ್ಕಳನ್ನು ರಕ್ಷಿಸಿ ಮತ್ತೆ ಭಿಕ್ಷಾಟನೆ ಮಾಡುವವರಿಗೇ ಒಪ್ಪಿಸಿದರೆ ಪ್ರಯೋಜನವಿಲ್ಲ. ಭಿಕ್ಷೆ ಕೇಳುವ ಅವರು ಮಾದಕ ವಸ್ತುಗಳ ದಾಸರಾಗುತ್ತಾರೆ. ಸರ್ಕಾರ ಇಂಥವರಿಗೆಂದೇ ಪ್ರತ್ಯೇಕವಾಗಿ ಪುನರ್ವಸತಿ ಕೇಂದ್ರಗಳನ್ನು ತೆರೆಯಬೇಕು. ಪೋಷಕರ ಮನವೊಲಿಸಬೇಕು’ ಎಂದು ಅವರು ಹೇಳಿದರು.</p>.<p>‘ಸುಪ್ರೀಂ ಕೋರ್ಟ್ ಆದೇಶದಂತೆ ಪುನರ್ವಸತಿ ಕೇಂದ್ರಗಳನ್ನು ನಡೆಸಲು ನಗರ ಸ್ಥಳೀಯ ಸಂಸ್ಥೆಗಳು ಕ್ರಮ ವಹಿಸುತ್ತಿಲ್ಲ. ಮಕ್ಕಳನ್ನು ರಕ್ಷಿಸಿದ ನಂತರ ಏನು ಮಾಡುತ್ತೇವೆಂಬುದು ಬಹಳ ಮುಖ್ಯ. ಸರ್ಕಾರ ಆ ಮಾಹಿತಿಯನ್ನೇ ಕೊಡುತ್ತಿಲ್ಲ. ಜವಾಬ್ದಾರಿ ಇಲ್ಲದ ಪೋಷಕತ್ವದಿಂದ ಅಥವಾ ಅಸಹಾಯಕತೆಯಿಂದ ಮಕ್ಕಳ ಭವಿಷ್ಯ ಕಮರುತ್ತಿರುವುದನ್ನು ಗಮನಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.</p>.<blockquote>ಬೆಂಗಳೂರು, ಕಲಬುರಗಿ, ಮೈಸೂರಲ್ಲಿ ಜಾಸ್ತಿ ಪುನರ್ವಸತಿ ಸಮರ್ಪಕವಾಗಿಲ್ಲ– ದೂರು ವಿಶೇಷ ಕಾರ್ಯಕ್ರಮ ಜಾರಿಗೆ ಸರ್ಕಾರಕ್ಕೆ ಮನವಿ</blockquote>.<div><blockquote>ಬಾಲಭಿಕ್ಷಾಟನೆಯಲ್ಲಿ ತೊಡಗಿದವರ ರಕ್ಷಣೆಗೆ ತುರ್ತು ಕ್ರಮ ಅಗತ್ಯ. ಅವರಿಗೆಂದೇ ಇರುವ ನಿಧಿ ಬಳಸಬೇಕು. ಇದಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು</blockquote><span class="attribution">ಎಂ.ಎಲ್. ಪರಶುರಾಮ್ ನಿರ್ದೇಶಕ ಒಡನಾಡಿ ಸೇವಾ ಸಂಸ್ಥೆ ಮೈಸೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ರಾಜ್ಯದಲ್ಲಿ ‘ಬಾಲಭಿಕ್ಷಾಟನೆ’ಯಲ್ಲಿ ತೊಡಗುವ ಮಕ್ಕಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಬರೆಯುವ ಕೈಗಳಿಗೆ ‘ಬರೆ’ ಬೀಳುತ್ತಿದೆ.</p>.<p>ಇಲ್ಲಿನ ಒಡನಾಡಿ ಸೇವಾ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ಸಲ್ಲಿಸಿದ್ದ ಅರ್ಜಿಗೆ ರಾಜ್ಯ ಮಕ್ಕಳ ನಿರ್ದೇಶನಾಲಯವು ಮಾಹಿತಿ ನೀಡಿದ್ದು, 2021ರಿಂದ 2023ರವರೆಗೆ ರಾಜ್ಯದಲ್ಲಿ 1,347 ಅಂಥ ಮಕ್ಕಳಿದ್ದಾರೆ.</p>.<p>ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ನಿರ್ದೇಶನಾಲಯ ನೀಡಿದ್ದು, ಅವರಲ್ಲಿ 632 ಬಾಲಕಿಯರಿದ್ದಾರೆ. ರಕ್ಷಿಸುತ್ತಿದ್ದರೂ ಬಾಲಕ–ಬಾಲಕಿಯರು ಮತ್ತೆ ಭಿಕ್ಷಾಟನೆಗಿಳಿಯುತ್ತಿದ್ದಾರೆ.</p>.<p><strong>ಕೂಸೆತ್ತಿಕೊಂಡು:</strong> </p>.<p>ಮೈಸೂರು ಸೇರಿದಂತೆ ಮಹಾನಗರಗಳ ಟ್ರಾಫಿಕ್ ಸಿಗ್ನಲ್ಗಳಲ್ಲಿ ಮಕ್ಕಳು ಭಿಕ್ಷೆ ಬೇಡುವುದು ಕಂಡುಬರುತ್ತಿದೆ. ಕಂಕುಳಲ್ಲಿ ಕೂಸು ಕೂರಿಸಿಕೊಂಡು ಹಣ ಕೇಳುತ್ತಾರೆ. ಕೆಲವರು, ಸಣ್ಣ ಬುಟ್ಟಿಯಲ್ಲಿ ದೇವರ ಫೋಟೊ ಅಥವಾ ವಿಗ್ರಹವನ್ನಿಟ್ಟುಕೊಂಡು ಭಿಕ್ಷೆಗೆ ನಿಲ್ಲುವುದು ಕಾಣಸಿಗುತ್ತಿದೆ. ಕೆಲವರ ಕೈ–ಕಾಲಿನಲ್ಲಿ ಗಾಯಗಳಿರುತ್ತವೆ.</p>.<p>‘ಬಾಲಭಿಕ್ಷಾಟನೆ ಮುಕ್ತ ರಾಜ್ಯ ನಿರ್ಮಾಣ ನಮ್ಮ ಗುರಿ ಎಂದು ಸರ್ಕಾರ ಅಥವಾ ಸಂಬಂಧಿಸಿದ ಇಲಾಖೆ ಹೇಳುತ್ತದೆ. ಆದರೆ, ಇವರಿಗೆ ಸಮರ್ಪಕ ಪುನರ್ವಸತಿ ಕಲ್ಪಿಸದೆ, ಭಿಕ್ಷಾಟನೆಗೆ ಇಳಿಯುತ್ತಲೇ ಇರುತ್ತಾರೆ. ಅವರನ್ನು ಬೀದಿಗೆ ತಳ್ಳುವ ಜಾಲವೂ ಇದೆ’ ಎಂಬ ಆರೋಪವೂ ಇದೆ.</p>.<p><strong>ಅಂಕಿ–ಅಂಶಗಳಿಂದಲೇ ದೃಢ:</strong></p>.<p>‘ಬೆಂಗಳೂರು, ಮೈಸೂರಿನಂತಹ ನಗರಗಳಲ್ಲಿ ಬಾಲಭಿಕ್ಷುಕರು ಹೆಚ್ಚಿದ್ದಾರೆ. ರಕ್ಷಿಸಿದ ಅಂಥ ಮಕ್ಕಳನ್ನು ಪೋಷಕರಿಗೇ ಒಪ್ಪಿಸಲಾಗುತ್ತಿದೆ. ಆ ಅಸಹಾಯಕರು ಅನಿವಾರ್ಯವಾಗಿ ಮತ್ತೆ ಭಿಕ್ಷಾಟನೆಗೆ ದೂಡುತ್ತಾರೆ. ಬಾಲಕಿಯರು ಲೈಂಗಿಕವಾಗಿ ದುರ್ಬಳಕೆಯಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ, ಅಂಥವರ ಪುನರ್ವಸತಿಗೆ ಸಮರ್ಪಕ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಎಂ.ಎಲ್.ಪರಶುರಾಮ್.</p>.<p>‘ಸಾಮಾನ್ಯ ಪುನರ್ವಸತಿ ಕಾರ್ಯಕ್ರಮಕ್ಕಿಂತ ಸಂಗೀತ, ನಾಟಕ, ವೈಜ್ಞಾನಿಕ ತಿಳಿವಳಿಕೆ, ಅನೌಪಚಾರಿಕ ಶಿಕ್ಷಣದಂತಹ ಚಟುವಟಿಕೆಗಳು ನಡೆಯಬೇಕಾಗಿದೆ. ಕೆಲವು ವರ್ಷಗಳು ಭಿಕ್ಷಾಟನೆಯಲ್ಲೇ ಇದ್ದವರನ್ನು ರಕ್ಷಿಸಿದರೂ, ಅವರಿಗೆ ಅದರತ್ತಲೇ ‘ಸೆಳೆತ’ವಿರುತ್ತದೆ. ಹೀಗಾಗಿ, ಅವರನ್ನು ಉತ್ತಮ ಮಾರ್ಗದಲ್ಲಿ ನಡೆಸುವಂತಹ ಪುನರ್ವಸತಿ ಅಗತ್ಯವಿದೆ’ ಎಂಬ ಸಲಹೆ ಅವರದು.</p>.<p><strong>ಪ್ರಯೋಜನ ಆಗದು:</strong></p>.<p>‘ಮಕ್ಕಳನ್ನು ರಕ್ಷಿಸಿ ಮತ್ತೆ ಭಿಕ್ಷಾಟನೆ ಮಾಡುವವರಿಗೇ ಒಪ್ಪಿಸಿದರೆ ಪ್ರಯೋಜನವಿಲ್ಲ. ಭಿಕ್ಷೆ ಕೇಳುವ ಅವರು ಮಾದಕ ವಸ್ತುಗಳ ದಾಸರಾಗುತ್ತಾರೆ. ಸರ್ಕಾರ ಇಂಥವರಿಗೆಂದೇ ಪ್ರತ್ಯೇಕವಾಗಿ ಪುನರ್ವಸತಿ ಕೇಂದ್ರಗಳನ್ನು ತೆರೆಯಬೇಕು. ಪೋಷಕರ ಮನವೊಲಿಸಬೇಕು’ ಎಂದು ಅವರು ಹೇಳಿದರು.</p>.<p>‘ಸುಪ್ರೀಂ ಕೋರ್ಟ್ ಆದೇಶದಂತೆ ಪುನರ್ವಸತಿ ಕೇಂದ್ರಗಳನ್ನು ನಡೆಸಲು ನಗರ ಸ್ಥಳೀಯ ಸಂಸ್ಥೆಗಳು ಕ್ರಮ ವಹಿಸುತ್ತಿಲ್ಲ. ಮಕ್ಕಳನ್ನು ರಕ್ಷಿಸಿದ ನಂತರ ಏನು ಮಾಡುತ್ತೇವೆಂಬುದು ಬಹಳ ಮುಖ್ಯ. ಸರ್ಕಾರ ಆ ಮಾಹಿತಿಯನ್ನೇ ಕೊಡುತ್ತಿಲ್ಲ. ಜವಾಬ್ದಾರಿ ಇಲ್ಲದ ಪೋಷಕತ್ವದಿಂದ ಅಥವಾ ಅಸಹಾಯಕತೆಯಿಂದ ಮಕ್ಕಳ ಭವಿಷ್ಯ ಕಮರುತ್ತಿರುವುದನ್ನು ಗಮನಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.</p>.<blockquote>ಬೆಂಗಳೂರು, ಕಲಬುರಗಿ, ಮೈಸೂರಲ್ಲಿ ಜಾಸ್ತಿ ಪುನರ್ವಸತಿ ಸಮರ್ಪಕವಾಗಿಲ್ಲ– ದೂರು ವಿಶೇಷ ಕಾರ್ಯಕ್ರಮ ಜಾರಿಗೆ ಸರ್ಕಾರಕ್ಕೆ ಮನವಿ</blockquote>.<div><blockquote>ಬಾಲಭಿಕ್ಷಾಟನೆಯಲ್ಲಿ ತೊಡಗಿದವರ ರಕ್ಷಣೆಗೆ ತುರ್ತು ಕ್ರಮ ಅಗತ್ಯ. ಅವರಿಗೆಂದೇ ಇರುವ ನಿಧಿ ಬಳಸಬೇಕು. ಇದಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು</blockquote><span class="attribution">ಎಂ.ಎಲ್. ಪರಶುರಾಮ್ ನಿರ್ದೇಶಕ ಒಡನಾಡಿ ಸೇವಾ ಸಂಸ್ಥೆ ಮೈಸೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>