ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸ್ವಚ್ಛ ನಗರಿ | ಸಂಘಟಿತ ಯತ್ನ ಅಗತ್ಯ: ಪಾಲಿಕೆಗೆ ಮಾಜಿ ಮೇಯರ್‌ಗಳ ಸಲಹೆ

Published : 7 ಮಾರ್ಚ್ 2025, 16:23 IST
Last Updated : 7 ಮಾರ್ಚ್ 2025, 16:23 IST
ಫಾಲೋ ಮಾಡಿ
Comments
ಪಾಲಿಕೆ ಅಧಿಕಾರಿಗಳು ಅವರ ವ್ಯಾಪ್ತಿಯಲ್ಲಷ್ಟೇ ಕೆಲಸ ಮಾಡುತ್ತಿದ್ದಾರೆ. ನಾಯಿ ಸತ್ತು ಬಿದ್ದಿದ್ದರೂ ಅಧಿಕಾರಿಗಳಿಗೆ ಕರೆ ಮಾಡುವುದಿಲ್ಲ. ಸಮನ್ವಯ ಇಲ್ಲ
ಆರೀಫ್‌ ಹುಸೇನ್ ಮಾಜಿ ಮೇಯರ್
ದೇವರಾಜ ಮಾರುಕಟ್ಟೆ ಲ್ಯಾನ್ಸ್‌ಡೌನ್ ಬಿಲ್ಡಿಂಗ್ ಸೇರಿದಂತೆ ನಗರದ ಹೃದಯ ಭಾಗ ಸ್ವಚ್ಛಗೊಳ್ಳಬೇಕು. ಕಸದ ಬುಟ್ಟಿಗಳನ್ನು ಇಡಬೇಕು
ಎಂ.ಜೆ.ರವಿಕುಮಾರ್ ಮಾಜಿ ಮೇಯರ್
‘ಸುಸ್ಥಿರ ಮಾರ್ಗಗಳ ಅಳವಡಿಕೆ ಅಗತ್ಯ’
ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ ‘ಪ್ಲಾಸ್ಟಿಕ್ ಹಾಗೂ ಕಟ್ಟಡ ತ್ಯಾಜ್ಯದಿಂದ ಇಂಟರ್‌ ಲಾಕ್‌ ಟೈಲ್ಸ್‌ಗಳನ್ನು ಮಾಡುವ ಘಟಕವನ್ನು ಪಾಲಿಕೆ ಸ್ಥಾಪಿಸಬೇಕು. ಜಾಗೃತ್‌ ಟೆಕ್‌ ಕಂಪನಿಯ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದು ನನೆಗುದಿಗೆ ಬಿದ್ದಿದೆ’ ಎಂದರು. ‘ಇಂದೋರ್‌ ಸ್ವಚ್ಛ ನಗರಿಯಾಗಿ ಮುಂದುವರಿಯಲು ಅಲ್ಲಿನ ಪಾಲಿಕೆಯು ಸುಸ್ಥಿರ ಮಾರ್ಗಗಳನ್ನು ಅಳವಡಿಸಿಕೊಂಡಿದೆ. ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದಿಸಿ ಸಾರಿಗೆ ಹಾಗೂ ಕೈಗಾರಿಕೆಗಳಿಗೆ ಬಳಕೆ ಮಾಡಲಾಗುತ್ತಿದೆ’ ಎಂದು ಉದಾಹರಿಸಿದರು. ‘ಸೀವೇಜ್‌ ಫಾರಂನಲ್ಲಿ 7 ಲಕ್ಷ ಟನ್‌ ತ್ಯಾಜ್ಯಕ್ಕೆ ಬೆಂಕಿ ಬಿದ್ದು ವಿಷಾನಿಲ ಹೊಮ್ಮಿದೆ. ವೈಜ್ಞಾನಿಕ ವಿಲೇವಾರಿಗೆ ಕೇಂದ್ರ ಸರ್ಕಾರ ₹60 ಕೋಟಿ ಅನುದಾನ ನೀಡಿದ್ದು ಬಳಕೆ ಆಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT