ಆಸ್ಪತ್ರೆಯ ಯೂನಿಟ್ ಹೆಡ್ ಎನ್.ಜಿ ಭರತೀಶ ರೆಡ್ಡಿ ಮಾತನಾಡಿ, ‘ಶುಚಿತ್ವವು ಕೇವಲ ಪರಿಕಲ್ಪನೆಯಲ್ಲ; ಇದು ಜೀವನದ ವಿಧಾನ. ರೋಗಿಗಳು, ಭೇಟಿ ನೀಡುವವರು ಮತ್ತು ಜನ ಸಮುದಾಯದ ಯೋಗಕ್ಷೇಮಕ್ಕಾಗಿ ಸ್ವಚ್ಛ ಪರಿಸರ ಕಾಪಾಡುವುದು ಮತ್ತು ಅದಕ್ಕೆ ಕೊಡಬೇಕಾದ ಪ್ರಾಮುಖ್ಯತೆಯು ನಮ್ಮ ಗಮನದಲ್ಲಿದೆ. ಆಸ್ಪತ್ರೆ ಮತ್ತು ಎಲ್ಲಾ ವಿಭಾಗಗಳೂ ಸ್ವಚ್ಛ ಭಾರತ ಅಭಿಯಾನದಲ್ಲಿ ಮನಪೂರ್ವಕವಾಗಿ ಭಾಗವಹಿಸುತ್ತಿವೆ’ ಎಂದರು.