<p><strong>ಮೈಸೂರು:</strong> ‘ಧರ್ಮಸ್ಥಳದ ಅತ್ಯಾಚಾರಿಗಳ ವಿರುದ್ಧದ ನ್ಯಾಯಬದ್ಧ ಹೋರಾಟದ ಹಳಿ ತಪ್ಪಿಸಲು ಧರ್ಮದ ಹೆಸರು ಬಳಸುತ್ತಿರುವ ಮತಾಂಧ ಶಕ್ತಿಗಳ ನಡೆಯನ್ನು ಖಂಡಿಸಿ’ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಚಿಕ್ಕಗಡಿಯಾರದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.</p>.<p>‘ಸೌಜನ್ಯ ಪ್ರಕರಣವೂ ಸೇರಿದಂತೆ ಧರ್ಮಸ್ಥಳದಲ್ಲಿ ನಾಲ್ಕೈದು ದಶಕಗಳಿಂದ ನಡೆದಿರುವ ಅತ್ಯಾಚಾರ, ಕೊಲೆ, ಮಹಿಳೆಯರ ಅಚಾನಕ್ ಕಾಣೆ ಪ್ರಕರಣಗಳ ಹಿಂದಿರುವ ಸತ್ಯ ತಿಳಿಯುವುದು ರಾಷ್ಟ್ರದ ಪ್ರತಿಯೊಬ್ಬರ ಹಕ್ಕು. ಆ ನಿಟ್ಟಿನಲ್ಲಿ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಷ್ಟಕ್ಕೇ ಬೆಚ್ಚಿ ಬಿದ್ದಿರುವ ಕೆಲವು ಮತಾಂಧ ಶಕ್ತಿಗಳು ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ಆರಂಭಿಸಿವೆ’ ಎಂದು ಆರೋಪಿಸಿದರು.</p>.<p>‘ವಿರೋಧ ಪಕ್ಷದ ನಾಯಕರೂ ಇದನ್ನು ಬೆಂಬಲಿಸುತ್ತಿರುವುದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಮುಕ್ತ, ಒತ್ತಡರಹಿತ ಹಾಗೂ ನ್ಯಾಯಯುತವಾಗಿ ತನಿಖೆ ನಡೆಸುವಂತೆ ಸರ್ಕಾರ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.</p>.<p>‘ಸತ್ಯವನ್ನು ಜನರ ಮುಂದಿಡಬೇಕು. ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು. ನೊಂದವರಿಗೆ ರಾಜ್ಯದಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಮೂಡಿಸಬೇಕು. ಹೋರಾಡುವವರಿಗೆ ರಕ್ಷಣೆ ನೀಡುವ ಹೊಣೆ ಹೊರಬೇಕು’ ಎಂದು ನಿರ್ಣಯ ಕೈಗೊಂಡರು.</p>.<p>ಮುಖಂಡರಾದ ಸವಿತಾ ಮಲ್ಲೇಶ್, ಹೊಸಕೋಟೆ ಬಸವರಾಜು, ಸಬಿಹಾ ಭೂಮಿಗೌಡ, ಕೆ.ವಿ.ಸ್ಟಾನ್ಲಿ, ರತಿರಾವ್, ಉಗ್ರನರಸಿಂಹೇ ಗೌಡ, ಟಿ.ಗುರುರಾಜ್, ಶಂಭುಲಿಂಗಸ್ವಾಮಿ, ವಿಜಯ್ ಕುಮಾರ್, ಲಿಲಿತಾ, ಸುಶೀಲಾ, ಪ್ರೊ. ಕಾಳಚನ್ನೇಗೌಡ, ರವಿ, ಮರಂಕಯ್ಯ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಧರ್ಮಸ್ಥಳದ ಅತ್ಯಾಚಾರಿಗಳ ವಿರುದ್ಧದ ನ್ಯಾಯಬದ್ಧ ಹೋರಾಟದ ಹಳಿ ತಪ್ಪಿಸಲು ಧರ್ಮದ ಹೆಸರು ಬಳಸುತ್ತಿರುವ ಮತಾಂಧ ಶಕ್ತಿಗಳ ನಡೆಯನ್ನು ಖಂಡಿಸಿ’ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಚಿಕ್ಕಗಡಿಯಾರದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.</p>.<p>‘ಸೌಜನ್ಯ ಪ್ರಕರಣವೂ ಸೇರಿದಂತೆ ಧರ್ಮಸ್ಥಳದಲ್ಲಿ ನಾಲ್ಕೈದು ದಶಕಗಳಿಂದ ನಡೆದಿರುವ ಅತ್ಯಾಚಾರ, ಕೊಲೆ, ಮಹಿಳೆಯರ ಅಚಾನಕ್ ಕಾಣೆ ಪ್ರಕರಣಗಳ ಹಿಂದಿರುವ ಸತ್ಯ ತಿಳಿಯುವುದು ರಾಷ್ಟ್ರದ ಪ್ರತಿಯೊಬ್ಬರ ಹಕ್ಕು. ಆ ನಿಟ್ಟಿನಲ್ಲಿ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಷ್ಟಕ್ಕೇ ಬೆಚ್ಚಿ ಬಿದ್ದಿರುವ ಕೆಲವು ಮತಾಂಧ ಶಕ್ತಿಗಳು ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ಆರಂಭಿಸಿವೆ’ ಎಂದು ಆರೋಪಿಸಿದರು.</p>.<p>‘ವಿರೋಧ ಪಕ್ಷದ ನಾಯಕರೂ ಇದನ್ನು ಬೆಂಬಲಿಸುತ್ತಿರುವುದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಮುಕ್ತ, ಒತ್ತಡರಹಿತ ಹಾಗೂ ನ್ಯಾಯಯುತವಾಗಿ ತನಿಖೆ ನಡೆಸುವಂತೆ ಸರ್ಕಾರ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.</p>.<p>‘ಸತ್ಯವನ್ನು ಜನರ ಮುಂದಿಡಬೇಕು. ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು. ನೊಂದವರಿಗೆ ರಾಜ್ಯದಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಮೂಡಿಸಬೇಕು. ಹೋರಾಡುವವರಿಗೆ ರಕ್ಷಣೆ ನೀಡುವ ಹೊಣೆ ಹೊರಬೇಕು’ ಎಂದು ನಿರ್ಣಯ ಕೈಗೊಂಡರು.</p>.<p>ಮುಖಂಡರಾದ ಸವಿತಾ ಮಲ್ಲೇಶ್, ಹೊಸಕೋಟೆ ಬಸವರಾಜು, ಸಬಿಹಾ ಭೂಮಿಗೌಡ, ಕೆ.ವಿ.ಸ್ಟಾನ್ಲಿ, ರತಿರಾವ್, ಉಗ್ರನರಸಿಂಹೇ ಗೌಡ, ಟಿ.ಗುರುರಾಜ್, ಶಂಭುಲಿಂಗಸ್ವಾಮಿ, ವಿಜಯ್ ಕುಮಾರ್, ಲಿಲಿತಾ, ಸುಶೀಲಾ, ಪ್ರೊ. ಕಾಳಚನ್ನೇಗೌಡ, ರವಿ, ಮರಂಕಯ್ಯ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>