‘ಕೂಡಲಸಂಗಮನಾಥನ ಸನ್ನಿಧಿಯಲ್ಲೇ ನಾವು ಬದುಕು ಕಟ್ಟಿಕೊಂಡಿದ್ವೀ. ಒಮ್ಮೆಗೇ ಕೃಷ್ಣೆ, ಘಟಪ್ರಭೆ, ಮಲಪ್ರಭೆ ಉಕ್ಕೇರಿದ್ವು. ನದಿಗಳ ಅಬ್ಬರ, ವರ್ಷಧಾರೆಯ ಹೊಡೆತಕ್ಕೆ ನಮ್ಮ ಮನೆ ಬಿದ್ದೋಯ್ತು. ದೇಗುಲದ ಆವರಣದಲ್ಲಿದ್ದ ಅಂಗಡಿಯೂ ಮುಳುಗ್ತು. ಬದುಕೇ ಭಾರವಾಯ್ತು. ಮುಂದೇನು ? ಎಂದು ಪೋಷಕರು ಚಿಂತಿಸುವಾಗಲೇ ಸುತ್ತೂರು ಮಠ ಆಸರೆ ಕಲ್ಪಿಸಿತು’ ಎಂದು ಸಹನಾ ಪ್ರವೀಣಗೌಡರ ಹೇಳಿದಳು.