<p><strong>ಹುಣಸೂರು:</strong> ಪಟ್ಟಣದಲ್ಲಿ ಗಾಂಜಾ ಹಾವಳಿ ಹೆಚ್ಚಿದೆ. ಗಾಂಜಾ ಮಾಫಿಯಾ ಯುವಕರನ್ನು ಬಲಿಪಡೆಯುತ್ತಿದ್ದು, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು ಎಂದು ನಗರಸಭೆ ಸದಸ್ಯರು ಆಗ್ರಹಿಸಿದರು.</p>.<p>ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಮಲ್ಲಿಕ್ ಪಾಶಾ ಮತ್ತು ಶಾಸಕ ಜಿ.ಡಿ.ಹರೀಶ್ ಗೌಡ ನೇತೃತ್ವದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಗಾಂಜಾ ಮತ್ತು ಇತರೆ ಮಾದಕ ವಸ್ತು ಹಾವಳಿ ತಡೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.</p>.<p>ಅಬಕಾರಿ ಇಲಾಖೆ ಸರ್ಕಲ್ ಇನ್ಸ್ಪೆಕ್ಟರ್ ಭೀಮ್ ಸಾಗರ್ ಮಾತನಾಡಿ, ‘ಈಗಾಗಲೇ ಹಲವು ಪ್ರಕರಣ ದಾಖಲಿಸಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಶೀಘ್ರ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.</p>.<p>‘ಅಬಕಾರಿ ಇಲಾಖೆಗೆ ಈ ಹಿಂದೆ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಜವಾಬ್ದಾರಿ ಇತ್ತು. ಇತ್ತೀಚೆಗೆ ಗಾಂಜಾ ಜಾಲ ಪತ್ತೆ ಮಾಡುವ ಅಧಿಕಾರವೂ ಸಿಕ್ಕಿದೆ. ಪೊಲೀಸ್ರು ಈ ಸಂಬಂಧ ಕಾರ್ಯೋನ್ಮುಖರಾಗಿದ್ದಾರೆ. ಸೂಕ್ತ ಸಾಕ್ಷಿಗಳಿಲ್ಲದ ಕಾರಣ ಆರೋಪಿಗಳು ಜಾಮೀನು ಪಡೆದು ಹೊರ ಬರುತ್ತಿದ್ದಾರೆ. ಇದರಿಂದಲೂ ಜಾಲ ಮತ್ತೆ ಸಕ್ರಿಯವಾಗುತ್ತದೆ’ ಎಂದು ಅಪರಾಧ ವಿಭಾಗದ ಪಿಎಸ್ಐ ಜಮೀರ್ ಅಹಮ್ಮದ್ ತಿಳಿಸಿದರು.</p>.<p>ಈ ಸಂಬಂಧ ಹಿರಿಯ ನಾಗರಿಕರು, ಜನಪ್ರತಿನಿಧಿ, ಪೊಲೀಸ್ ಅಬಕಾರಿ ಸೇರಿದಂತೆ ಹಲವರ ವಾಟ್ಸಆ್ಯಪ್ ಗ್ರೂಪ್ ರೂಪಿಸಿ ಮಾಹಿತಿ ರವಾನಿಸಿದರೆ ಕಾರ್ಯಾಚರಣೆಗೆ ಸಹಕಾರಿ ಆಗಲಿದೆ ಎಂದು ಹಲವರು ಸಲಹೆ ನೀಡಿದ್ದರಿಂದ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.</p>.<p>ಪೌರಕಾರ್ಮಿಕರಿಗೆ ವಸತಿ ಯೋಜನೆ ರೂಪಿಸಲು ಸರ್ಕಾರಿ ನಿವೇಶನ ಇಲ್ಲವಾಗಿದೆ. ಈ ಹಿಂದೆ ಗುರುತಿಸಿದ್ದ ಎರಡು ನಿವೇಶನ ಖಾಸಗಿ ಮಾಲಿಕತ್ವಕ್ಕೆ ಸೇರಿದೆ. ₹ 96 ಲಕ್ಷ ಅನುದಾನ ನಗರಸಭೆ ಖಾತೆಯಲ್ಲಿದ್ದು, ಸರ್ವ ಸದಸ್ಯರ ತೀರ್ಮಾನದಂತೆ ಮನೆ ನಿರ್ಮಿಸಿಕೊಳ್ಳುವ ಫಲಾನುಭವಿಗೆ ತಲಾ ₹ 3 ಲಕ್ಷ ನೀಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಶಾಸಕ ಹರೀಶ್ಗೌಡ ಸಭೆಗೆ ತಿಳಿಸಿದರು.</p>.<p class="Subhead">₹ 2 ಕೋಟಿ ನಷ್ಟ:</p>.<p>12 ತಿಂಗಳ ಹಿಂದೆ ಚಲನಚಿತ್ರ ಮಂದಿರವನ್ನು ನಗರಸಭೆ ಸುಪರ್ದಿಗೆ ಪಡೆದಿದ್ದು, ಎಂಜಿನಿಯರ್ ಶರ್ಮಿಳಾ ಅವರಿಗೆ ದುರಸ್ತಿಗೊಳಿಸಿ ಮರು ಟೆಂಡರ್ ಕರೆಯಲು ಸಾಮಾನ್ಯ ಸಭೆಯಲ್ಲಿ ಸಂಪೂರ್ಣ ಅಧಿಕಾರ ನೀಡಿದ್ದರೂ ಕ್ರಮವಹಿಸದೆಕಾರಣ ನಗರಸಭೆಗೆ ಕನಿಷ್ಠ ₹ 2 ಕೋಟಿ ಆದಾಯ ನಷ್ಟವಾಗಿದೆ. ಅಧಿಕಾರಿಗಳ ನಿರ್ಲಕ್ಷಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಶರವಣ ಆಗ್ರಹಿಸಿದರು.</p>.<p>ನಗರಸಭೆ ವ್ಯಾಪ್ತಿಯ ಪ್ರಮುಖ ಮುಖ್ಯ ರಸ್ತೆಗಳಿಗೆ ದೀಪ ಅಳವಡಿಸಲು ಈ ಹಿಂದಿನ ಸಭೆಯಲ್ಲಿ ಅನುಮತಿ ನೀಡಿದ್ದರೂ ಅಧಿಕಾರಿಗಳು ಕ್ರಮವಹಿಸಿಲ್ಲ. ಶೀಘ್ರವಾಗಿ ಪ್ರಮುಖ ರಸ್ತೆಗಳಿಗೆ 300 ಎಲ್ ಇಡಿ ದೀಪ ಮತ್ತು 31 ವಾರ್ಡ್ ಸದಸ್ಯರಿಗೆ 400 ದೀಪ ವಿತರಿಸುವಂತೆ ಶಾಸಕರು ಸೂಚಿಸಿದರು.</p>.<p>ನಗರಸಭೆ ಮುನೇಶ್ವರ ಕಾವಲ್ ಮೈದಾನದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ನೀಡಿರುವ ಸ್ಥಳ ತೆರವುಗೊಳಿಸಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸಿ ಸ್ಥಳಾಂತರಿಸಲು ನಗರಸಭೆ ಆಯುಕ್ತರಿಗೆ ಶಾಸಕರು ಸೂಚಿಸಿದರು.</p>.<p>ಕಾಂಗ್ರೆಸ್ ಸದಸ್ಯರು ಸಭೆಯಿಂದ ಹೊರಗುಳಿದಿದ್ದರು.</p>.<p>ಸಭೆಯಲ್ಲಿ ಉಪಾಧ್ಯಕ್ಷ ಆಶಾ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಆಯುಕ್ತೆ ಮಾನಸ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು:</strong> ಪಟ್ಟಣದಲ್ಲಿ ಗಾಂಜಾ ಹಾವಳಿ ಹೆಚ್ಚಿದೆ. ಗಾಂಜಾ ಮಾಫಿಯಾ ಯುವಕರನ್ನು ಬಲಿಪಡೆಯುತ್ತಿದ್ದು, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು ಎಂದು ನಗರಸಭೆ ಸದಸ್ಯರು ಆಗ್ರಹಿಸಿದರು.</p>.<p>ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಮಲ್ಲಿಕ್ ಪಾಶಾ ಮತ್ತು ಶಾಸಕ ಜಿ.ಡಿ.ಹರೀಶ್ ಗೌಡ ನೇತೃತ್ವದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಗಾಂಜಾ ಮತ್ತು ಇತರೆ ಮಾದಕ ವಸ್ತು ಹಾವಳಿ ತಡೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.</p>.<p>ಅಬಕಾರಿ ಇಲಾಖೆ ಸರ್ಕಲ್ ಇನ್ಸ್ಪೆಕ್ಟರ್ ಭೀಮ್ ಸಾಗರ್ ಮಾತನಾಡಿ, ‘ಈಗಾಗಲೇ ಹಲವು ಪ್ರಕರಣ ದಾಖಲಿಸಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಶೀಘ್ರ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.</p>.<p>‘ಅಬಕಾರಿ ಇಲಾಖೆಗೆ ಈ ಹಿಂದೆ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಜವಾಬ್ದಾರಿ ಇತ್ತು. ಇತ್ತೀಚೆಗೆ ಗಾಂಜಾ ಜಾಲ ಪತ್ತೆ ಮಾಡುವ ಅಧಿಕಾರವೂ ಸಿಕ್ಕಿದೆ. ಪೊಲೀಸ್ರು ಈ ಸಂಬಂಧ ಕಾರ್ಯೋನ್ಮುಖರಾಗಿದ್ದಾರೆ. ಸೂಕ್ತ ಸಾಕ್ಷಿಗಳಿಲ್ಲದ ಕಾರಣ ಆರೋಪಿಗಳು ಜಾಮೀನು ಪಡೆದು ಹೊರ ಬರುತ್ತಿದ್ದಾರೆ. ಇದರಿಂದಲೂ ಜಾಲ ಮತ್ತೆ ಸಕ್ರಿಯವಾಗುತ್ತದೆ’ ಎಂದು ಅಪರಾಧ ವಿಭಾಗದ ಪಿಎಸ್ಐ ಜಮೀರ್ ಅಹಮ್ಮದ್ ತಿಳಿಸಿದರು.</p>.<p>ಈ ಸಂಬಂಧ ಹಿರಿಯ ನಾಗರಿಕರು, ಜನಪ್ರತಿನಿಧಿ, ಪೊಲೀಸ್ ಅಬಕಾರಿ ಸೇರಿದಂತೆ ಹಲವರ ವಾಟ್ಸಆ್ಯಪ್ ಗ್ರೂಪ್ ರೂಪಿಸಿ ಮಾಹಿತಿ ರವಾನಿಸಿದರೆ ಕಾರ್ಯಾಚರಣೆಗೆ ಸಹಕಾರಿ ಆಗಲಿದೆ ಎಂದು ಹಲವರು ಸಲಹೆ ನೀಡಿದ್ದರಿಂದ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.</p>.<p>ಪೌರಕಾರ್ಮಿಕರಿಗೆ ವಸತಿ ಯೋಜನೆ ರೂಪಿಸಲು ಸರ್ಕಾರಿ ನಿವೇಶನ ಇಲ್ಲವಾಗಿದೆ. ಈ ಹಿಂದೆ ಗುರುತಿಸಿದ್ದ ಎರಡು ನಿವೇಶನ ಖಾಸಗಿ ಮಾಲಿಕತ್ವಕ್ಕೆ ಸೇರಿದೆ. ₹ 96 ಲಕ್ಷ ಅನುದಾನ ನಗರಸಭೆ ಖಾತೆಯಲ್ಲಿದ್ದು, ಸರ್ವ ಸದಸ್ಯರ ತೀರ್ಮಾನದಂತೆ ಮನೆ ನಿರ್ಮಿಸಿಕೊಳ್ಳುವ ಫಲಾನುಭವಿಗೆ ತಲಾ ₹ 3 ಲಕ್ಷ ನೀಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಶಾಸಕ ಹರೀಶ್ಗೌಡ ಸಭೆಗೆ ತಿಳಿಸಿದರು.</p>.<p class="Subhead">₹ 2 ಕೋಟಿ ನಷ್ಟ:</p>.<p>12 ತಿಂಗಳ ಹಿಂದೆ ಚಲನಚಿತ್ರ ಮಂದಿರವನ್ನು ನಗರಸಭೆ ಸುಪರ್ದಿಗೆ ಪಡೆದಿದ್ದು, ಎಂಜಿನಿಯರ್ ಶರ್ಮಿಳಾ ಅವರಿಗೆ ದುರಸ್ತಿಗೊಳಿಸಿ ಮರು ಟೆಂಡರ್ ಕರೆಯಲು ಸಾಮಾನ್ಯ ಸಭೆಯಲ್ಲಿ ಸಂಪೂರ್ಣ ಅಧಿಕಾರ ನೀಡಿದ್ದರೂ ಕ್ರಮವಹಿಸದೆಕಾರಣ ನಗರಸಭೆಗೆ ಕನಿಷ್ಠ ₹ 2 ಕೋಟಿ ಆದಾಯ ನಷ್ಟವಾಗಿದೆ. ಅಧಿಕಾರಿಗಳ ನಿರ್ಲಕ್ಷಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಶರವಣ ಆಗ್ರಹಿಸಿದರು.</p>.<p>ನಗರಸಭೆ ವ್ಯಾಪ್ತಿಯ ಪ್ರಮುಖ ಮುಖ್ಯ ರಸ್ತೆಗಳಿಗೆ ದೀಪ ಅಳವಡಿಸಲು ಈ ಹಿಂದಿನ ಸಭೆಯಲ್ಲಿ ಅನುಮತಿ ನೀಡಿದ್ದರೂ ಅಧಿಕಾರಿಗಳು ಕ್ರಮವಹಿಸಿಲ್ಲ. ಶೀಘ್ರವಾಗಿ ಪ್ರಮುಖ ರಸ್ತೆಗಳಿಗೆ 300 ಎಲ್ ಇಡಿ ದೀಪ ಮತ್ತು 31 ವಾರ್ಡ್ ಸದಸ್ಯರಿಗೆ 400 ದೀಪ ವಿತರಿಸುವಂತೆ ಶಾಸಕರು ಸೂಚಿಸಿದರು.</p>.<p>ನಗರಸಭೆ ಮುನೇಶ್ವರ ಕಾವಲ್ ಮೈದಾನದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ನೀಡಿರುವ ಸ್ಥಳ ತೆರವುಗೊಳಿಸಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸಿ ಸ್ಥಳಾಂತರಿಸಲು ನಗರಸಭೆ ಆಯುಕ್ತರಿಗೆ ಶಾಸಕರು ಸೂಚಿಸಿದರು.</p>.<p>ಕಾಂಗ್ರೆಸ್ ಸದಸ್ಯರು ಸಭೆಯಿಂದ ಹೊರಗುಳಿದಿದ್ದರು.</p>.<p>ಸಭೆಯಲ್ಲಿ ಉಪಾಧ್ಯಕ್ಷ ಆಶಾ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಆಯುಕ್ತೆ ಮಾನಸ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>