ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

‘ಪಿಎಂ–ವಿಶ್ವಕರ್ಮ’ ಉತ್ತಮ ಪ್ರತಿಕ್ರಿಯೆ: ಸೌಲಭ್ಯ ಕೋರಿ 1.58 ಲಕ್ಷ ಮಂದಿ ಅರ್ಜಿ

Published : 16 ಜನವರಿ 2025, 6:14 IST
Last Updated : 16 ಜನವರಿ 2025, 6:14 IST
ಫಾಲೋ ಮಾಡಿ
Comments
ಜಿ.ಲಕ್ಷ್ಮೀಕಾಂತ ರೆಡ್ಡಿ
ಜಿ.ಲಕ್ಷ್ಮೀಕಾಂತ ರೆಡ್ಡಿ
ವಿವಿಧ 18 ವೃತ್ತಿಯವರಿಗೆ ಅನುಕೂಲ ತರಬೇತಿಯೊಂದಿಗೆ ಸಾಲವನ್ನೂ ಪಡೆಯಬಹುದು ಪಾರಂಪರಿಕ ವೃತ್ತಿಯವರಿಗೆ ಸೌಲಭ್ಯ
ಪಿಎಂ–ವಿಶ್ವಕರ್ಮ ಯೋಜನೆಯಲ್ಲಿ ಟೈಲರಿಂಗ್‌ಗೆ ನಿರೀಕ್ಷೆಗೂ ಮೀರಿ ಅರ್ಜಿಗಳು ಬಂದಿವೆ. ಅವುಗಳನ್ನು ಸೂಕ್ಷ್ಮವಾಗಿ ಪರಾಮರ್ಶಿಸುವಂತೆ ಸೂಚಿಸಲಾಗಿದೆ. ಅರ್ಹರಿಗೆ ಸರ್ಕಾರದ ನೆರವು ದೊರೆಯಲಿದೆ
ಜಿ. ಲಕ್ಷ್ಮೀಕಾಂತ ರೆಡ್ಡಿ ಜಿಲ್ಲಾಧಿಕಾರಿ
ತರಬೇತಿಯೊಂದಿಗೆ ಶಿಷ್ಯವೇತನ
18 ವರ್ಷ ಮೀರಿದವರು ಅರ್ಜಿ ಸಲ್ಲಿಸಬಹುದು. ಗರಿಷ್ಠ ವಯಸ್ಸಿನ ಮಿತಿ ಇಲ್ಲ. ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ)ದಲ್ಲಿ ಮಾತ್ರ ನೋಂದಣಿ ಮಾಡಿಸಬೇಕು. ಯೋಜನೆಯಡಿ ಅನುಮೋದನೆಗೊಂಡ ಫಲಾನುಭವಿಗಳಿಗೆ ಪ್ರಮಾಣಪತ್ರ ಗುರುತಿನ ಚೀಟಿ ನೀಡಲಾಗುವುದು. 5ರಿಂದ 7 ದಿನಗಳವರೆಗೆ ದಿನಕ್ಕೆ ₹500 ಶಿಷ್ಯವೇತನದೊಂದಿಗೆ ಕೌಶಲ ಅಭಿವೃದ್ಧಿ ತರಬೇತಿ ಕೊಡಲಾಗುವುದು. ಗರಿಷ್ಠ ₹15 ಸಾವಿರ ಮೌಲ್ಯದ ಉಪಕರಣಗಳನ್ನು ಉಚಿತವಾಗಿ ನೀಡಲಾಗುವುದು. ಶೇ 5ರಷ್ಟು ಬಡ್ಡಿ ದರದಲ್ಲಿ ಮೊದಲಿಗೆ ₹1 ಲಕ್ಷ ಸಾಲ ಪಡೆಯಬಹುದಾಗಿದೆ. ಮಾನದಂಡದ ಪ್ರಕಾರ ಅರ್ಹರಿದ್ದರೆ ಯಾವುದೇ ಭದ್ರತೆ ಇಲ್ಲದೆ ಗರಿಷ್ಠ ₹3 ಲಕ್ಷ ಸಾಲ ಪಡೆದುಕೊಳ್ಳಲು ಅವಕಾಶವಿದೆ.
3 ಹಂತದ ಅನುಮೋದನೆ ಅಗತ್ಯ
‘ಯೋಜನೆಯಡಿ ನೆರವು ಪಡೆದುಕೊಳ್ಳಲು ಬಹಳಷ್ಟು ಮಂದಿ ಅರ್ಜಿ ಸಲ್ಲಿಸುತ್ತಿದ್ದಾರೆ. ಮೂರು ಹಂತದಲ್ಲಿ ಅಂದರೆ ಆಯಾ ಗ್ರಾಮ ಪಂಚಾಯಿತಿ ಅಥವಾ ಸ್ಥಳೀಯ ಪ್ರಾಧಿಕಾರ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಹಾಗೂ ರಾಜ್ಯಮಟ್ಟದ ಸಮಿತಿಯ ಅನುಮೋದನೆ ದೊರೆತ ನಂತರ ಸೌಲಭ್ಯ ದೊರೆಯುವುದು ಆರಂಭವಾಗುತ್ತದೆ. ಕೆಲವೆಡೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಬದಲಾವಣೆ ಮೊದಲಾದ ಕಾರಣದಿಂದ ಲಾಗ್‌ಇನ್‌ಗೆ ತಾಂತ್ರಿಕ ತೊಂದರೆ ಎದುರಾಗುತ್ತಿದೆ. ಅದೆಲ್ಲವನ್ನೂ ನಿವಾರಿಸಲಾಗುತ್ತಿದೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪ್ರಸ್ತುತ ಮೂರನೇ ಹಂತದ ಪರಿಶೀಲನೆ ನಂತರ 32466 ಮಂದಿಯನ್ನು ಫಲಾನುಭವಿಗಳೆಂದು ಅನುಮೋದನೆ ದೊರೆತಿದೆ. ಅವರಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಎಲ್ಲವೂ ಅವರವರ ಖಾತೆಗೆ ಬರುತ್ತದೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT