<p><strong>ತಲಕಾಡು:</strong> ಇಲ್ಲಿನ ಮಾಧವ ಮಂತ್ರಿ, ರಾಮಸ್ವಾಮಿ ನಾಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ಐದು ಸಾವಿರಕ್ಕೆ ಹೆಚ್ಚು ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು ಭತ್ತದ ಕಟಾವು ಕಳೆದ ಒಂದು ವಾರದಿಂದ ಭರದಿಂದ ಸಾಗಿದೆ.</p>.<p>ಈ ಬಾರಿ ಹೈಬ್ರಿಡ್ ಸಣ್ಣಭತ್ತಕ್ಕೆ ಬಾರಿ ಬೇಡಿಕೆ ಜೊತೆಗೆ ದಾಖಲೆಯ ಬೆಲೆ ಸಿಕ್ಕಿದೆ. ಐಆರ್ 64 ಭತ್ತಕ್ಕೂ ಸಹ ಈ ಬಾರಿ ₹2500 ವರೆಗೆ ಬೆಲೆ ಸಿಕ್ಕಿದೆ. ಜ್ಯೋತಿ ಭತ್ತಕ್ಕೆ ಗರಿಷ್ಠ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಬಾರಿ ನಿರೀಕ್ಷಿಸಿದಷ್ಟು ಬೆಲೆ ಸಿಗದೆ ಬೆಳೆಗಾರರಿಗೆ ನಿರಾಸೆ ಉಂಟಾಗಿದೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಬಾರಿ ರೋಗಭಾದೆಯಿಂದಾಗಿ ರೋಗ ನಿಯಂತ್ರಣಕ್ಕೆ ನಾಲ್ಕೈದು ಬಾರಿ ಔಷದಿ ಸಿಂಪಡಣೆಗೆ ಸಾಕಷ್ಟು ಹಣ ಖರ್ಚಾಗಿದೆ. ಆದರೆ ಬೆಲೆ ಹೆಚ್ಚಿರುವುದರಿಂದ ರೈತರು ನಿಟ್ಟುಸಿರುಬಿಡುವಂತಾಗಿದೆ.</p>.<p>ಸಣ್ಣ ಭತ್ತಕ್ಕೆ ಕ್ವಿಂಟಾಲಿಗೆ ಕನಿಷ್ಠ ಧಾರಣೆ ₹3 ಸಾವಿರ ಇದ್ದು, ಗರಿಷ್ಠ ₹3500 ತಲುಪಿದೆ. ಸಣ್ಣಭತ್ತಕ್ಕೆ ಉತ್ತಮ ಬೆಲೆ ದೊರೆಯುತ್ತಿರುವುದರಿಂದ ರೈತರು ಸಂಕಟದಿಂದ ಪಾರಾಗಿದ್ದಾರೆ ಎಂದು ರೈತ ರಂಗ ನಾಯಕ, ಕುಕ್ಕುರು ಶಾಂತರಾಜು, ಟೀ ಅಂಗಡಿ ಸೋಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಲಕಾಡು:</strong> ಇಲ್ಲಿನ ಮಾಧವ ಮಂತ್ರಿ, ರಾಮಸ್ವಾಮಿ ನಾಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ಐದು ಸಾವಿರಕ್ಕೆ ಹೆಚ್ಚು ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು ಭತ್ತದ ಕಟಾವು ಕಳೆದ ಒಂದು ವಾರದಿಂದ ಭರದಿಂದ ಸಾಗಿದೆ.</p>.<p>ಈ ಬಾರಿ ಹೈಬ್ರಿಡ್ ಸಣ್ಣಭತ್ತಕ್ಕೆ ಬಾರಿ ಬೇಡಿಕೆ ಜೊತೆಗೆ ದಾಖಲೆಯ ಬೆಲೆ ಸಿಕ್ಕಿದೆ. ಐಆರ್ 64 ಭತ್ತಕ್ಕೂ ಸಹ ಈ ಬಾರಿ ₹2500 ವರೆಗೆ ಬೆಲೆ ಸಿಕ್ಕಿದೆ. ಜ್ಯೋತಿ ಭತ್ತಕ್ಕೆ ಗರಿಷ್ಠ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಬಾರಿ ನಿರೀಕ್ಷಿಸಿದಷ್ಟು ಬೆಲೆ ಸಿಗದೆ ಬೆಳೆಗಾರರಿಗೆ ನಿರಾಸೆ ಉಂಟಾಗಿದೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಬಾರಿ ರೋಗಭಾದೆಯಿಂದಾಗಿ ರೋಗ ನಿಯಂತ್ರಣಕ್ಕೆ ನಾಲ್ಕೈದು ಬಾರಿ ಔಷದಿ ಸಿಂಪಡಣೆಗೆ ಸಾಕಷ್ಟು ಹಣ ಖರ್ಚಾಗಿದೆ. ಆದರೆ ಬೆಲೆ ಹೆಚ್ಚಿರುವುದರಿಂದ ರೈತರು ನಿಟ್ಟುಸಿರುಬಿಡುವಂತಾಗಿದೆ.</p>.<p>ಸಣ್ಣ ಭತ್ತಕ್ಕೆ ಕ್ವಿಂಟಾಲಿಗೆ ಕನಿಷ್ಠ ಧಾರಣೆ ₹3 ಸಾವಿರ ಇದ್ದು, ಗರಿಷ್ಠ ₹3500 ತಲುಪಿದೆ. ಸಣ್ಣಭತ್ತಕ್ಕೆ ಉತ್ತಮ ಬೆಲೆ ದೊರೆಯುತ್ತಿರುವುದರಿಂದ ರೈತರು ಸಂಕಟದಿಂದ ಪಾರಾಗಿದ್ದಾರೆ ಎಂದು ರೈತ ರಂಗ ನಾಯಕ, ಕುಕ್ಕುರು ಶಾಂತರಾಜು, ಟೀ ಅಂಗಡಿ ಸೋಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>