<p><strong>ಹುಣಸೂರು</strong>: ರೈತರು ಸಾಗುವಳಿ ಮಾಡುತ್ತಿರುವ ದರಖಾಸ್ತು ಭೂಮಿಗೆ ಸಂಬಂಧಿಸಿದ 137 ಅರ್ಜಿಗಳನ್ನು ಬಗರ್ ಹುಕುಂ ಸಮಿತಿ ಸಭೆಯಲ್ಲಿ ಅನುಮೋದಿಸಿ ಭೂಮಿ ಮಂಜೂರು ಮಾಡಲಾಗಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.</p>.<p>ನಗರದ ತಾಲ್ಲೂಕು ಕಚೇರಿಯಲ್ಲಿ ನಡೆದ ಬಗರ್ ಹುಕುಂ ಸಮಿತಿ ಸಭೆಯ ಬಳಿಕ ಅವರು ಮಾತನಾಡಿ, ಸಮಿತಿ ಚಾಲ್ತಿಗೆ ಬಂದ ಬಳಿಕ ತಾಲ್ಲೂಕಿನಲ್ಲಿ ಸಾಗುವಳಿ ಕೋರಿ 3,588 ಅರ್ಜಿಗಳು ಪರಿಶೀಲಿಸಿದೆ. ಈ ಪೈಕಿ 2,858 ಅರ್ಜಿದಾರರು ಗೋಮಾಳದಲ್ಲಿ ಸಾಗುವಳಿ ಮಾಡುತ್ತಿದ್ದು, ವಜಾಗೊಳಿಸಿದೆ ಎಂದರು.</p>.<p> ಅಂತಿಮವಾಗಿ 450 ಅರ್ಜಿಗಳಿದ್ದು, ಅವುಗಳಲ್ಲಿ 137 ಅರ್ಜಿಗಳನ್ನು ಪರಾಮರ್ಶಿಸಿ ಮಂಜೂರು ಮಾಡಿದೆ. ಸರ್ವೆ, ಅರಣ್ಯದಂಚಿನಲ್ಲಿ ಭೂಮಿ ಜಂಟಿ ಸರ್ವೆ ಸೇರಿದಂತೆ ವಿವಿಧ ಹಂತದಲ್ಲಿದ್ದು, 4 ತಿಂಗಳಲ್ಲಿ ಪ್ರಕ್ರಿಯೆ ಮುಗಿದ ಬಳಿಕ ಫಲಾನುಭವಿಗೆ ಸಾಗುವಳಿ ಪತ್ರ ವಿತರಿಸಲಿದ್ದೇವೆ ಎಂದರು. ಸಾಗುವಳಿ ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದ ವೀರನಹೊಸಹಳ್ಳಿ ಗ್ರಾಮದ ಕೆರೆ ಹಾಡಿಯ ಗಿರಿಜನ ಮಹಿಳೆ ಜೆ.ಕೆ. ನಾಗಮ್ಮ ಅವರಿಗೆ 1 .9 ಎಕರೆ ಭೂಮಿ ಮಂಜೂರಾತಿ ನೀಡಿ ಸ್ವಾವಲಂಬಿ ಬದುಕಿಗೆ ಸಮಿತಿ ಸ್ಪಂದಿಸಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ತಿಳಿಸಿದರು.</p>.<p> ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಸಭೆಯಲ್ಲಿ 20 ಅರ್ಜಿಗಳನ್ನು ಅನುಮೋದಿಸಿ ಸಾಗುವಳಿ ಮಂಜೂರಾತಿ ಮಾಡಲಾಗಿದೆ ಎಂದರು. ಸಮಿತಿ ಸದಸ್ಯರಾದ ಕುಮಾರ್, ಗುಣಶೇಖರ್, ಲತಾ ಮತ್ತು ನಾಲ್ಕು ಹೋಬಳಿ ರಾಜಸ್ವ ನಿರೀಕ್ಷಣಾಧಿಕಾರಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ರೈತರು ಸಾಗುವಳಿ ಮಾಡುತ್ತಿರುವ ದರಖಾಸ್ತು ಭೂಮಿಗೆ ಸಂಬಂಧಿಸಿದ 137 ಅರ್ಜಿಗಳನ್ನು ಬಗರ್ ಹುಕುಂ ಸಮಿತಿ ಸಭೆಯಲ್ಲಿ ಅನುಮೋದಿಸಿ ಭೂಮಿ ಮಂಜೂರು ಮಾಡಲಾಗಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.</p>.<p>ನಗರದ ತಾಲ್ಲೂಕು ಕಚೇರಿಯಲ್ಲಿ ನಡೆದ ಬಗರ್ ಹುಕುಂ ಸಮಿತಿ ಸಭೆಯ ಬಳಿಕ ಅವರು ಮಾತನಾಡಿ, ಸಮಿತಿ ಚಾಲ್ತಿಗೆ ಬಂದ ಬಳಿಕ ತಾಲ್ಲೂಕಿನಲ್ಲಿ ಸಾಗುವಳಿ ಕೋರಿ 3,588 ಅರ್ಜಿಗಳು ಪರಿಶೀಲಿಸಿದೆ. ಈ ಪೈಕಿ 2,858 ಅರ್ಜಿದಾರರು ಗೋಮಾಳದಲ್ಲಿ ಸಾಗುವಳಿ ಮಾಡುತ್ತಿದ್ದು, ವಜಾಗೊಳಿಸಿದೆ ಎಂದರು.</p>.<p> ಅಂತಿಮವಾಗಿ 450 ಅರ್ಜಿಗಳಿದ್ದು, ಅವುಗಳಲ್ಲಿ 137 ಅರ್ಜಿಗಳನ್ನು ಪರಾಮರ್ಶಿಸಿ ಮಂಜೂರು ಮಾಡಿದೆ. ಸರ್ವೆ, ಅರಣ್ಯದಂಚಿನಲ್ಲಿ ಭೂಮಿ ಜಂಟಿ ಸರ್ವೆ ಸೇರಿದಂತೆ ವಿವಿಧ ಹಂತದಲ್ಲಿದ್ದು, 4 ತಿಂಗಳಲ್ಲಿ ಪ್ರಕ್ರಿಯೆ ಮುಗಿದ ಬಳಿಕ ಫಲಾನುಭವಿಗೆ ಸಾಗುವಳಿ ಪತ್ರ ವಿತರಿಸಲಿದ್ದೇವೆ ಎಂದರು. ಸಾಗುವಳಿ ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದ ವೀರನಹೊಸಹಳ್ಳಿ ಗ್ರಾಮದ ಕೆರೆ ಹಾಡಿಯ ಗಿರಿಜನ ಮಹಿಳೆ ಜೆ.ಕೆ. ನಾಗಮ್ಮ ಅವರಿಗೆ 1 .9 ಎಕರೆ ಭೂಮಿ ಮಂಜೂರಾತಿ ನೀಡಿ ಸ್ವಾವಲಂಬಿ ಬದುಕಿಗೆ ಸಮಿತಿ ಸ್ಪಂದಿಸಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ತಿಳಿಸಿದರು.</p>.<p> ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಸಭೆಯಲ್ಲಿ 20 ಅರ್ಜಿಗಳನ್ನು ಅನುಮೋದಿಸಿ ಸಾಗುವಳಿ ಮಂಜೂರಾತಿ ಮಾಡಲಾಗಿದೆ ಎಂದರು. ಸಮಿತಿ ಸದಸ್ಯರಾದ ಕುಮಾರ್, ಗುಣಶೇಖರ್, ಲತಾ ಮತ್ತು ನಾಲ್ಕು ಹೋಬಳಿ ರಾಜಸ್ವ ನಿರೀಕ್ಷಣಾಧಿಕಾರಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>