’ಈ ಭಾಗದಲ್ಲಿ ಗೌಡ ಲಿಂಗಾಯತ ಸಮಾಜ ಧಾರ್ಮಿಕವಾಗಿ ಮುಂದುವರೆದಿದೆ, ಆರ್ಥಿಕವಾಗಿ ಹಿಂದುಳಿದಿದೆ. ಆದರೆ, ರಾಜಕೀಯ ಪ್ರಾತಿನಿಧ್ಯ ಇಲ್ಲವಾಗಿದೆ. ಇಲ್ಲಿ ರಾಜಕೀಯ ನಾಯಕರ ಕೊರತೆಯಿದೆ. ಚಾಮರಾಜನಗರ, ಹನೂರು, ವರುಣಾ, ಕೃಷ್ಣರಾಜ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಗೌಡ ಲಿಂಗಾಯತ ಸಮುದಾಯದವರಿದ್ದಾರೆ. ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ ಕುಮಾರ್ ಹೊರತುಪಡಿಸಿದರೆ ಬೇರೆ ಶಾಸಕರಿಲ್ಲ. ಆದ್ದರಿಂದ ರಾಜಕೀಯ ಪ್ರಾತಿನಿಧ್ಯ ಕೊಡಿ’ ಎಂದು ಆಗ್ರಹಿಸಿದರು.