ವಿಸ್ಮಯ ಬುಕ್ಹೌಸ್ ಪ್ರಕಟಿಸಿರುವ ‘ಈಶಾನ್ಯ ದಿಕ್ಕಿನಿಂದ’ ಅಂಕಣ ಬರಹ, ‘ಹಂಗರಹಳ್ಳಿಯ ಬರ್ಬರ ಸಂಕೋಲೆಗಳು’ ವಿಭಿನ್ನ ಬರಹಗಳ ಕಟ್ಟು ಹಾಗೂ ‘ಒಲವು ನಮ್ಮ ಬದುಕು’ (ಪ್ರೇಮ ಕಥನಗಳ ಸರಣಿ–3ನೇ ಮುದ್ರಣ) ಪುಸ್ತಕಗಳನ್ನು ಪತ್ರಕರ್ತ ಕೃಷ್ಣಪ್ರಸಾದ್ ಬಿಡುಗಡೆ ಮಾಡಲಿದ್ದಾರೆ. ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಪುಸ್ತಕಗಳ ಬಗ್ಗೆ ಮಾತನಾಡಲಿದ್ದಾರೆ. ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಕೃಪಾಕರ–ಸೇನಾನಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿಸ್ಮಯ ಬುಕ್ಹೌಸ್ ಪ್ರಕಾಶ್ ಚಿಕ್ಕಪಾಳ್ಯ ತಿಳಿಸಿದ್ದಾರೆ.