<p><strong>ಮೈಸೂರು;</strong> ‘ಕನ್ನಡ ಬಳಕೆ ದಿನೇ ದಿನೇ ಕಡಿಮೆಯಾಗುತ್ತಿದೆ. ಸಂದಿಗ್ದ ಸ್ಥಿತಿಯಲ್ಲಿರುವ ಕನ್ನಡದ ಬಳಕೆ ಹೆಚ್ಚಿಸಲು ಕನ್ನಡಿಗರು ಕಠಿಣ ಪರಿಶ್ರಮ ಪಡಬೇಕು’ ಎಂದು ಲೇಖಕ ಮೂಡ್ನಾಕೂಡು ಚಿನ್ನಸ್ವಾಮಿ ಪ್ರತಿಪಾದಿಸಿದರು.</p>.<p>ನಗರ ಹೊರವಲಯದ ಶೇಷಾದ್ರಿಪುರಂ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಹಳ್ಳಿ ಅನುಭವ, ಮಾತೃಭಾಷೆ ಶಿಕ್ಷಣ ಪಡೆದವರು ಉತ್ತಮಸ್ಥಾನ ತಲುಪುತ್ತಾರೆ ಎಂಬುದಕ್ಕೆ ಹಲವರ ನಿದರ್ಶನಗಳಿವೆ. ಆದರೆ, ಇತ್ತೀಚಿನ ವಿದ್ಯಮಾನದಲ್ಲಿ ಕನ್ನಡ ಹಲವು ಆತಂಕಗಳನ್ನು ಎದುರಿಸುತ್ತಿದೆ’ ಎಂದರು.</p>.<p>‘ಪೋಷಕರಲ್ಲಿ ಇಂಗ್ಲಿಷ್ ಒಲವು ಹೆಚ್ಚಿದೆ. ಸಾಲ ಮಾಡಿ, ಎಲ್ಲವನ್ನೂ ಕಳೆದುಕೊಂಡು ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುತ್ತಾರೆ. ಸರ್ಕಾರವೂ ಎಲ್ಲವನ್ನೂ ಇಂಗ್ಲಿಷ್ಮಯಗೊಳಿಸುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>‘ಇನ್ನು ಕೆಲವು ದಶಕಗಳಲ್ಲಿ ಕನ್ನಡದ ಸ್ಥಿತಿ ಏನಾಗಬಹುದು ಎಂದು ಆತಂಕ ಶುರುವಾಗಿದೆ. ಕನ್ನಡ ಶಾಲೆಗಳು ಇಲ್ಲವಾಗುತ್ತಿವೆ. ಕನ್ನಡ ನಶಿಸುತ್ತಿದೆ. ಕೆಲವು ವರ್ಷಗಳ ಹಿಂದೆ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಆರಂಭಿಸಿದರೂ, ಒಬ್ಬನೇ ವಿದ್ಯಾರ್ಥಿ ದಾಖಲಾಗಿದ್ದರಿಂದ ಸ್ಥಗಿತಗೊಂಡಿತು' ಎಂದು ವಿಷಾದಿಸಿದರು.</p>.<p>‘ಕನ್ನಡ ಉಳಿಸುವ ನಿಟ್ಟಿನಲ್ಲಿ ಸರ್ಕಾರ, ಪೋಷಕರು ಒಟ್ಟಾಗಿ ಯೋಚಿಸಬೇಕು' ಎಂದು ಸಲಹೆ ನೀಡಿದರು.</p>.<p>‘ರಾಜಧಾನಿಯಲ್ಲಿ ಹೊರ ರಾಜ್ಯದವರ ಹಿಂದಿ ಬಳಕೆಯು ಗಾಬರಿ ಮೂಡಿಸುವಂತಿದೆ. ದೈನಂದಿನ ವ್ಯವಹಾರಗಳಲ್ಲಿ ಹಿಂದಿಯೇ ಅಧಿಕೃತ ಭಾಷೆಯಂತಾಗಿದೆ. ಬೆಂಗಳೂರು, ಧಾರವಾಡದಲ್ಲಿ ಹಿಂದಿಯವರು ಹೆಚ್ಚಿದ್ದಾರೆ. ಇದೇ ವೇಳೆ ಕನ್ನಡಿಗರು ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ಪ್ರಶ್ನೆಯೂ ಮೂಡುತ್ತದೆ’ ಎಂದರು.</p>.<p>‘ಪ್ರಜಾವಾಣಿ’ ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಾದ ಡಿಸಿಪಿ ಸುಂದರ್ರಾಜ್, ವಿಶ್ವನಾಥ್, ಪಾರ್ಥೇಗೌಡ, ಎಂ.ಆರ್.ಲೋಕೇಶ್, ತೆಂಕಮ್ಮ ಎಂ.ತೆರೇಸ, ಆಶಾ ವಿ., ಉದಯಶಂಕರ್, ಡಾ.ಸುಜಿತ್ ಚಂದ್ರಹಾಸ್, ರಾಷ್ಟ್ರೀಯ ಕೊಕ್ಕೊ ಆಟಗಾರ್ತಿ ಚೈತ್ರಾ ಬಿ. ಅವರನ್ನು ಸನ್ಮಾನಿಸಲಾಯಿತು.</p>.<p>ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.</p>.<p>ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಪದವಿ ಕಾಲೇಜಿನ ಸೌಮ್ಯಾ ಈರಪ್ಪ ಕೆ., ಪದವಿಪೂರ್ವ ಕಾಲೇಜಿನ ಅರ್ಚನಾ ಸ್ವಾಮಿ ಎನ್. ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು;</strong> ‘ಕನ್ನಡ ಬಳಕೆ ದಿನೇ ದಿನೇ ಕಡಿಮೆಯಾಗುತ್ತಿದೆ. ಸಂದಿಗ್ದ ಸ್ಥಿತಿಯಲ್ಲಿರುವ ಕನ್ನಡದ ಬಳಕೆ ಹೆಚ್ಚಿಸಲು ಕನ್ನಡಿಗರು ಕಠಿಣ ಪರಿಶ್ರಮ ಪಡಬೇಕು’ ಎಂದು ಲೇಖಕ ಮೂಡ್ನಾಕೂಡು ಚಿನ್ನಸ್ವಾಮಿ ಪ್ರತಿಪಾದಿಸಿದರು.</p>.<p>ನಗರ ಹೊರವಲಯದ ಶೇಷಾದ್ರಿಪುರಂ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಹಳ್ಳಿ ಅನುಭವ, ಮಾತೃಭಾಷೆ ಶಿಕ್ಷಣ ಪಡೆದವರು ಉತ್ತಮಸ್ಥಾನ ತಲುಪುತ್ತಾರೆ ಎಂಬುದಕ್ಕೆ ಹಲವರ ನಿದರ್ಶನಗಳಿವೆ. ಆದರೆ, ಇತ್ತೀಚಿನ ವಿದ್ಯಮಾನದಲ್ಲಿ ಕನ್ನಡ ಹಲವು ಆತಂಕಗಳನ್ನು ಎದುರಿಸುತ್ತಿದೆ’ ಎಂದರು.</p>.<p>‘ಪೋಷಕರಲ್ಲಿ ಇಂಗ್ಲಿಷ್ ಒಲವು ಹೆಚ್ಚಿದೆ. ಸಾಲ ಮಾಡಿ, ಎಲ್ಲವನ್ನೂ ಕಳೆದುಕೊಂಡು ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುತ್ತಾರೆ. ಸರ್ಕಾರವೂ ಎಲ್ಲವನ್ನೂ ಇಂಗ್ಲಿಷ್ಮಯಗೊಳಿಸುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>‘ಇನ್ನು ಕೆಲವು ದಶಕಗಳಲ್ಲಿ ಕನ್ನಡದ ಸ್ಥಿತಿ ಏನಾಗಬಹುದು ಎಂದು ಆತಂಕ ಶುರುವಾಗಿದೆ. ಕನ್ನಡ ಶಾಲೆಗಳು ಇಲ್ಲವಾಗುತ್ತಿವೆ. ಕನ್ನಡ ನಶಿಸುತ್ತಿದೆ. ಕೆಲವು ವರ್ಷಗಳ ಹಿಂದೆ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಆರಂಭಿಸಿದರೂ, ಒಬ್ಬನೇ ವಿದ್ಯಾರ್ಥಿ ದಾಖಲಾಗಿದ್ದರಿಂದ ಸ್ಥಗಿತಗೊಂಡಿತು' ಎಂದು ವಿಷಾದಿಸಿದರು.</p>.<p>‘ಕನ್ನಡ ಉಳಿಸುವ ನಿಟ್ಟಿನಲ್ಲಿ ಸರ್ಕಾರ, ಪೋಷಕರು ಒಟ್ಟಾಗಿ ಯೋಚಿಸಬೇಕು' ಎಂದು ಸಲಹೆ ನೀಡಿದರು.</p>.<p>‘ರಾಜಧಾನಿಯಲ್ಲಿ ಹೊರ ರಾಜ್ಯದವರ ಹಿಂದಿ ಬಳಕೆಯು ಗಾಬರಿ ಮೂಡಿಸುವಂತಿದೆ. ದೈನಂದಿನ ವ್ಯವಹಾರಗಳಲ್ಲಿ ಹಿಂದಿಯೇ ಅಧಿಕೃತ ಭಾಷೆಯಂತಾಗಿದೆ. ಬೆಂಗಳೂರು, ಧಾರವಾಡದಲ್ಲಿ ಹಿಂದಿಯವರು ಹೆಚ್ಚಿದ್ದಾರೆ. ಇದೇ ವೇಳೆ ಕನ್ನಡಿಗರು ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ಪ್ರಶ್ನೆಯೂ ಮೂಡುತ್ತದೆ’ ಎಂದರು.</p>.<p>‘ಪ್ರಜಾವಾಣಿ’ ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಾದ ಡಿಸಿಪಿ ಸುಂದರ್ರಾಜ್, ವಿಶ್ವನಾಥ್, ಪಾರ್ಥೇಗೌಡ, ಎಂ.ಆರ್.ಲೋಕೇಶ್, ತೆಂಕಮ್ಮ ಎಂ.ತೆರೇಸ, ಆಶಾ ವಿ., ಉದಯಶಂಕರ್, ಡಾ.ಸುಜಿತ್ ಚಂದ್ರಹಾಸ್, ರಾಷ್ಟ್ರೀಯ ಕೊಕ್ಕೊ ಆಟಗಾರ್ತಿ ಚೈತ್ರಾ ಬಿ. ಅವರನ್ನು ಸನ್ಮಾನಿಸಲಾಯಿತು.</p>.<p>ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.</p>.<p>ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಪದವಿ ಕಾಲೇಜಿನ ಸೌಮ್ಯಾ ಈರಪ್ಪ ಕೆ., ಪದವಿಪೂರ್ವ ಕಾಲೇಜಿನ ಅರ್ಚನಾ ಸ್ವಾಮಿ ಎನ್. ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>