<p><strong>ಮೈಸೂರು: ‘</strong>70ರ ದಶಕದಲ್ಲಿ ಆರಂಭವಾದ ರೈತ, ದಲಿತ, ಬಂಡಾಯ ಸೇರಿದಂತೆ ಜನಪರ ಚಳವಳಿಗಳಿಗೆ ಸ್ಪಂದಿಸಿದ ‘ಸಮುದಾಯ ಕರ್ನಾಟಕ’ವು ರಂಗ ಚಳವಳಿ ಕಟ್ಟಿತು’ ಎಂದು ವಿಮರ್ಶಕ ಪ್ರೊ.ಕೆ.ಮರುಳಸಿದ್ದಪ್ಪ ಅಭಿಪ್ರಾಯಪಟ್ಟರು.</p>.<p>ನಗರದ ಕಿರುರಂಗಮಂದಿರದ ಆವರಣದಲ್ಲಿ ‘ಮನುಷ್ಯತ್ವಡೆಡೆಗೆ ಸಮುದಾಯ 50’ ಆಶಯದಲ್ಲಿ ಶುಕ್ರವಾರ ಆರಂಭವಾದ 3 ದಿನಗಳ ‘ಸಮುದಾಯ ಮೈಸೂರು ರಂಗೋತ್ಸವ’ ಉದ್ಘಾಟಿಸಿ ಮಾತನಾಡಿ, ‘ಸಮುದಾಯವನ್ನು ಸಂಘಟನೆ ಎನ್ನಲಾಗದು, ನಾಡಿನ ಜನರ ಅಭಿವ್ಯಕ್ತಿಯಾಗಿ ರೂಪುಗೊಂಡ ಚಳವಳಿಯಿದು’ ಎಂದು ಬಣ್ಣಿಸಿದರು. </p>.<p>‘50 ವರ್ಷದ ಪಯಣ ನೆನಪು ಮಾಡಿಕೊಂಡರೆ, ಸಂತಸದ ಜೊತೆ ಆಶ್ಚರ್ಯವೂ ಆಗುತ್ತದೆ. ಆರಂಭದ ದಿನಗಳಲ್ಲಿ ನಾಡನ್ನು ಇಷ್ಟು ಪ್ರಭಾವಿಸುತ್ತದೆಂದು ನಾನು ಅಂದುಕೊಂಡಿರಲಿಲ್ಲ. ನಾಟಕಗಳನ್ನು ಮಾಡುತ್ತಾ ನಿರಂತರವಾಗಿ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ’ ಎಂದು ಹೇಳಿದರು. </p>.<p>ಒಗ್ಗಟ್ಟಾಗಬೇಕು: ‘ಕೋಮುವಾದಿಗಳು ಹಾಗೂ ಬಂಡವಾಳಶಾಹಿಗಳು ಒಂದಾಗಿವೆ. ಇಂಥ ಸಂದರ್ಭವನ್ನು ನೋಡುತ್ತಿದ್ದರೆ ಮನಸ್ಸು ಖಿನ್ನವಾಗುತ್ತದೆ. ಈ ಪ್ರತಿಗಾಮಿ ಶಕ್ತಿಗಳು ರಾಜಕೀಯ ಅಧಿಕಾರ ಹಿಡಿದಿರುವ ಹೊತ್ತಿನಲ್ಲಿ ಯುವ ಪ್ರಗತಿಪರ ಮನಸ್ಸುಗಳು ಸಂಘಟಿತರಾಗಬೇಕಿದೆ. ರೈತರು, ದಲಿತರು, ಪ್ರಗತಿಪರರು ಮತ್ತೆ ಒಗ್ಗಟ್ಟಾಗಬೇಕಿದೆ’ ಎಂದು ಮರುಳಸಿದ್ದಪ್ಪ ಪ್ರತಿಪಾದಿಸಿದರು. </p>.<p>‘ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್, ಪೆರಿಯಾರ್ ಸಿದ್ಧಾಂತದ ಪ್ರಭಾವ 70ರ ದಶಕದ ಚಳವಳಿಗಳಿಗಿತ್ತು. ಕನ್ನಡ ಸಾಹಿತ್ಯದಲ್ಲಿರುವುದು ಬೂಸಾ ಎಂಬ ಬಿ.ಬಸವಲಿಂಗಪ್ಪ ಅವರ ಹೇಳಿಕೆಯಿಂದ ಬೂಸಾ ಚಳವಳಿ ಆರಂಭವಾಯಿತು. ಅವರ ಹೇಳಿಕೆಯನ್ನು ಕುವೆಂಪು ಸಮರ್ಥಿಸಿಕೊಂಡರು. ಬಸವಲಿಂಗಪ್ಪ, ಲಂಕೇಶ್ ಅವರ ಮೇಲೆ ದಾಳಿಗಳು ಆದವು’ ಎಂದು ನೆನಪು ಮಾಡಿಕೊಂಡರು. </p>.<p>‘ದೇಶದಲ್ಲಿ ಜಾತಿ– ಧರ್ಮವೇ ಮುಖ್ಯವಾಗಿದೆ. ಮನುಷ್ಯರು ಮನುಷ್ಯರಾಗಿ ನೋಡಬೇಕಿದೆ. ಮನುಜಕುಲವೊಂದೇ ಎಂದ ಪಂಪ, ಕುವೆಂಪು ಪ್ರತಿಪಾದಿಸಿದ ವಿಶ್ವಮಾನವ ತತ್ವ ಅನುಸರಿಸಬೇಕಿದೆ. ಈಗ ನಮಗೆ ಹಿನ್ನೆಡೆಯಾಗಿರಬಹುದು. ಆದರೆ, ಬೆಳಕು ಬಂದೇ ಬರುತ್ತದೆಂಬ ಆಶಯದಲ್ಲಿ ಎಲ್ಲ ಜೀವಪರ ಮನಸ್ಸುಗಳು ಒಂದಾಗಬೇಕಿದೆ’ ಎಂದರು. </p>.<p>ಗಾಯಕರಾದ ದೇವಾನಂದ ವರಪ್ರಸಾದ್, ಶುಭಾ ರಾಘವೇಂದ್ರ, ತನುಶ್ರೀ, ಸಿ.ಎಂ.ನರಸಿಂಹಮೂರ್ತಿ, ಜಯಶಂಕರಮೇಸ್ತ್ರಿ ಮತ್ತು ನಾರಾಯಣಸ್ವಾಮಿ ಅವರು ‘ಮಂಟೇಸ್ವಾಮಿ ಕಾವ್ಯ’ ಹಾಡಿದರು. </p>.<p>ಸಮುದಾಯದ ಶ್ರೀನಿವಾಸ ಜಿ.ಕಪ್ಪಣ್ಣ, ಮಾವಳ್ಳಿ ಶಂಕರ್, ನಂದಾ ಹಳೆಮನೆ, ಪ್ರೊ.ಕೆ.ಪಿ.ವಾಸುದೇವನ್, ಜೆ.ಸಿ.ಶಶಿಧರ್, ಸವಿತಾ ಪ.ಮಲ್ಲೇಶ್, ಎಚ್.ಜನಾರ್ಧನ್ ಪಾಲ್ಗೊಂಡಿದ್ದರು. </p>.<p>ನಂತರ ಜಿಪಿಐಇಆರ್ ತಂಡದವರು ಮೈಮ್ ರಮೇಶ್ ನಿರ್ದೇಶನದ ಆಂಟನ್ ಚೆಕಾಫ್ನ ‘ವಾರ್ಡ್ ನಂ 6’ ನಾಟಕವನ್ನು ಪ್ರದರ್ಶಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: ‘</strong>70ರ ದಶಕದಲ್ಲಿ ಆರಂಭವಾದ ರೈತ, ದಲಿತ, ಬಂಡಾಯ ಸೇರಿದಂತೆ ಜನಪರ ಚಳವಳಿಗಳಿಗೆ ಸ್ಪಂದಿಸಿದ ‘ಸಮುದಾಯ ಕರ್ನಾಟಕ’ವು ರಂಗ ಚಳವಳಿ ಕಟ್ಟಿತು’ ಎಂದು ವಿಮರ್ಶಕ ಪ್ರೊ.ಕೆ.ಮರುಳಸಿದ್ದಪ್ಪ ಅಭಿಪ್ರಾಯಪಟ್ಟರು.</p>.<p>ನಗರದ ಕಿರುರಂಗಮಂದಿರದ ಆವರಣದಲ್ಲಿ ‘ಮನುಷ್ಯತ್ವಡೆಡೆಗೆ ಸಮುದಾಯ 50’ ಆಶಯದಲ್ಲಿ ಶುಕ್ರವಾರ ಆರಂಭವಾದ 3 ದಿನಗಳ ‘ಸಮುದಾಯ ಮೈಸೂರು ರಂಗೋತ್ಸವ’ ಉದ್ಘಾಟಿಸಿ ಮಾತನಾಡಿ, ‘ಸಮುದಾಯವನ್ನು ಸಂಘಟನೆ ಎನ್ನಲಾಗದು, ನಾಡಿನ ಜನರ ಅಭಿವ್ಯಕ್ತಿಯಾಗಿ ರೂಪುಗೊಂಡ ಚಳವಳಿಯಿದು’ ಎಂದು ಬಣ್ಣಿಸಿದರು. </p>.<p>‘50 ವರ್ಷದ ಪಯಣ ನೆನಪು ಮಾಡಿಕೊಂಡರೆ, ಸಂತಸದ ಜೊತೆ ಆಶ್ಚರ್ಯವೂ ಆಗುತ್ತದೆ. ಆರಂಭದ ದಿನಗಳಲ್ಲಿ ನಾಡನ್ನು ಇಷ್ಟು ಪ್ರಭಾವಿಸುತ್ತದೆಂದು ನಾನು ಅಂದುಕೊಂಡಿರಲಿಲ್ಲ. ನಾಟಕಗಳನ್ನು ಮಾಡುತ್ತಾ ನಿರಂತರವಾಗಿ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ’ ಎಂದು ಹೇಳಿದರು. </p>.<p>ಒಗ್ಗಟ್ಟಾಗಬೇಕು: ‘ಕೋಮುವಾದಿಗಳು ಹಾಗೂ ಬಂಡವಾಳಶಾಹಿಗಳು ಒಂದಾಗಿವೆ. ಇಂಥ ಸಂದರ್ಭವನ್ನು ನೋಡುತ್ತಿದ್ದರೆ ಮನಸ್ಸು ಖಿನ್ನವಾಗುತ್ತದೆ. ಈ ಪ್ರತಿಗಾಮಿ ಶಕ್ತಿಗಳು ರಾಜಕೀಯ ಅಧಿಕಾರ ಹಿಡಿದಿರುವ ಹೊತ್ತಿನಲ್ಲಿ ಯುವ ಪ್ರಗತಿಪರ ಮನಸ್ಸುಗಳು ಸಂಘಟಿತರಾಗಬೇಕಿದೆ. ರೈತರು, ದಲಿತರು, ಪ್ರಗತಿಪರರು ಮತ್ತೆ ಒಗ್ಗಟ್ಟಾಗಬೇಕಿದೆ’ ಎಂದು ಮರುಳಸಿದ್ದಪ್ಪ ಪ್ರತಿಪಾದಿಸಿದರು. </p>.<p>‘ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್, ಪೆರಿಯಾರ್ ಸಿದ್ಧಾಂತದ ಪ್ರಭಾವ 70ರ ದಶಕದ ಚಳವಳಿಗಳಿಗಿತ್ತು. ಕನ್ನಡ ಸಾಹಿತ್ಯದಲ್ಲಿರುವುದು ಬೂಸಾ ಎಂಬ ಬಿ.ಬಸವಲಿಂಗಪ್ಪ ಅವರ ಹೇಳಿಕೆಯಿಂದ ಬೂಸಾ ಚಳವಳಿ ಆರಂಭವಾಯಿತು. ಅವರ ಹೇಳಿಕೆಯನ್ನು ಕುವೆಂಪು ಸಮರ್ಥಿಸಿಕೊಂಡರು. ಬಸವಲಿಂಗಪ್ಪ, ಲಂಕೇಶ್ ಅವರ ಮೇಲೆ ದಾಳಿಗಳು ಆದವು’ ಎಂದು ನೆನಪು ಮಾಡಿಕೊಂಡರು. </p>.<p>‘ದೇಶದಲ್ಲಿ ಜಾತಿ– ಧರ್ಮವೇ ಮುಖ್ಯವಾಗಿದೆ. ಮನುಷ್ಯರು ಮನುಷ್ಯರಾಗಿ ನೋಡಬೇಕಿದೆ. ಮನುಜಕುಲವೊಂದೇ ಎಂದ ಪಂಪ, ಕುವೆಂಪು ಪ್ರತಿಪಾದಿಸಿದ ವಿಶ್ವಮಾನವ ತತ್ವ ಅನುಸರಿಸಬೇಕಿದೆ. ಈಗ ನಮಗೆ ಹಿನ್ನೆಡೆಯಾಗಿರಬಹುದು. ಆದರೆ, ಬೆಳಕು ಬಂದೇ ಬರುತ್ತದೆಂಬ ಆಶಯದಲ್ಲಿ ಎಲ್ಲ ಜೀವಪರ ಮನಸ್ಸುಗಳು ಒಂದಾಗಬೇಕಿದೆ’ ಎಂದರು. </p>.<p>ಗಾಯಕರಾದ ದೇವಾನಂದ ವರಪ್ರಸಾದ್, ಶುಭಾ ರಾಘವೇಂದ್ರ, ತನುಶ್ರೀ, ಸಿ.ಎಂ.ನರಸಿಂಹಮೂರ್ತಿ, ಜಯಶಂಕರಮೇಸ್ತ್ರಿ ಮತ್ತು ನಾರಾಯಣಸ್ವಾಮಿ ಅವರು ‘ಮಂಟೇಸ್ವಾಮಿ ಕಾವ್ಯ’ ಹಾಡಿದರು. </p>.<p>ಸಮುದಾಯದ ಶ್ರೀನಿವಾಸ ಜಿ.ಕಪ್ಪಣ್ಣ, ಮಾವಳ್ಳಿ ಶಂಕರ್, ನಂದಾ ಹಳೆಮನೆ, ಪ್ರೊ.ಕೆ.ಪಿ.ವಾಸುದೇವನ್, ಜೆ.ಸಿ.ಶಶಿಧರ್, ಸವಿತಾ ಪ.ಮಲ್ಲೇಶ್, ಎಚ್.ಜನಾರ್ಧನ್ ಪಾಲ್ಗೊಂಡಿದ್ದರು. </p>.<p>ನಂತರ ಜಿಪಿಐಇಆರ್ ತಂಡದವರು ಮೈಮ್ ರಮೇಶ್ ನಿರ್ದೇಶನದ ಆಂಟನ್ ಚೆಕಾಫ್ನ ‘ವಾರ್ಡ್ ನಂ 6’ ನಾಟಕವನ್ನು ಪ್ರದರ್ಶಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>