<p><strong>ಮೈಸೂರು</strong>: ‘ಹಿಂಸೆಗೆ ಪ್ರತಿ ಹಿಂಸೆ ಕನ್ನಡಿಗರ ಮನಸ್ಥಿತಿಯಲ್ಲ. ಅಖಂಡ ಕರ್ನಾಟಕದ ಕನಸು ಮತ್ತು ಸಾಂಸ್ಕೃತಿಕ ಅಸ್ಮಿತೆಯ ಹೃದಯ ವೈಶಾಲ್ಯತೆ ನಮ್ಮೆಲ್ಲರ ರಕ್ತಗತವಾದ ಗುಣವಾಗಿದೆ’ ಎಂದು ನಿವೃತ್ತ ಪ್ರಾಧ್ಯಾಪಕಿ ಎಚ್.ಎಂ. ಕಲಾಶ್ರೀ ಹೇಳಿದರು.</p>.<p>ನಗರದ ಕೃಷ್ಣಮೂರ್ತಿಪುರಂನ ಎಂಎಂಕೆ ಮತ್ತು ಎಸ್ಡಿಎಂ ಮಹಿಳಾ ಕಾಲೇಜಿನ ಕನ್ನಡ ವಿಭಾಗ ‘ನುಡಿಯತ್ನ’ ಕನ್ನಡ ಸಂಘವು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಮತ್ತು ನಾಡಗೀತೆಗೆ ನೂರರ ಸಂಭ್ರಮದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.</p>.<p>‘ರಾಷ್ಟ್ರೀಯತೆ ಪರಿಕಲ್ಪನೆಯಲ್ಲಿ ಕನ್ನಡ ನಾಡು–ನುಡಿ ನಡೆದು ಬಂದಿದೆ. ಭಾರತವನ್ನು ತಾಯಿಯೆಂದು, ಕರ್ನಾಟಕವನ್ನು ಮಗಳೆಂದು ಕರೆದುಕೊಂಡಂತಹ ರಾಜ್ಯ ನಮ್ಮದು’ ಎಂದರು.</p>.<p>‘ಹೊರ ರಾಜ್ಯದವರೊಂದಿಗೆ ಕನ್ನಡದಲ್ಲಿ ಮಾತನಾಡಿ ಅವರಿಗೆ ನಮ್ಮ ಭಾಷೆ ಕಲಿಸಬೇಕು. ತಂತ್ರಜ್ಞಾನ ಮತ್ತು ಇಂಗ್ಲಿಷನ್ನು ಕಲಿಕೆಗೆ ಹಾಗೂ ಸಂವಹನಕ್ಕಾಗಿ ಬಳಸಬೇಕೆ ಹೊರತು ನಮ್ಮ ಮಾತೃಭಾಷೆಯನ್ನು ಬಿಡಬಾರದು’ ಎಂದು ಹೇಳಿದರು.</p>.<p>‘ಯುವಜನತೆ ಕನ್ನಡವನ್ನು ಬಳಸುವ ಮೂಲಕ ಉಳಿಸಬೇಕು’ ಎಂದರು.</p>.<p>ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಯನಕುಮಾರಿ, ಐಕ್ಯೂಎಸಿ ಸಂಚಾಲಕಿ ಕೆ.ಎಸ್. ಸುಕೃತಾ, ಕನ್ನಡ ವಿಭಾಗದ ಮುಖ್ಯಸ್ಥೆ ವಿನೋದಾ, ಅಧ್ಯಾಪಕರಾದ ಬಿ.ಎನ್. ಮಾರುತಿ ಪ್ರಸನ್ನ, ಅರುಣ್ ಕುಮಾರ್ ಪಾಲ್ಗೊಂಡಿದ್ದರು.</p>.<p>ವರ್ಷಾ ನಿರೂಪಿಸಿದರು. ರಕ್ಷಿತಾ ಸ್ವಾಗತಿಸಿದರು. ವಿನೋದಾ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಹಿಂಸೆಗೆ ಪ್ರತಿ ಹಿಂಸೆ ಕನ್ನಡಿಗರ ಮನಸ್ಥಿತಿಯಲ್ಲ. ಅಖಂಡ ಕರ್ನಾಟಕದ ಕನಸು ಮತ್ತು ಸಾಂಸ್ಕೃತಿಕ ಅಸ್ಮಿತೆಯ ಹೃದಯ ವೈಶಾಲ್ಯತೆ ನಮ್ಮೆಲ್ಲರ ರಕ್ತಗತವಾದ ಗುಣವಾಗಿದೆ’ ಎಂದು ನಿವೃತ್ತ ಪ್ರಾಧ್ಯಾಪಕಿ ಎಚ್.ಎಂ. ಕಲಾಶ್ರೀ ಹೇಳಿದರು.</p>.<p>ನಗರದ ಕೃಷ್ಣಮೂರ್ತಿಪುರಂನ ಎಂಎಂಕೆ ಮತ್ತು ಎಸ್ಡಿಎಂ ಮಹಿಳಾ ಕಾಲೇಜಿನ ಕನ್ನಡ ವಿಭಾಗ ‘ನುಡಿಯತ್ನ’ ಕನ್ನಡ ಸಂಘವು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಮತ್ತು ನಾಡಗೀತೆಗೆ ನೂರರ ಸಂಭ್ರಮದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.</p>.<p>‘ರಾಷ್ಟ್ರೀಯತೆ ಪರಿಕಲ್ಪನೆಯಲ್ಲಿ ಕನ್ನಡ ನಾಡು–ನುಡಿ ನಡೆದು ಬಂದಿದೆ. ಭಾರತವನ್ನು ತಾಯಿಯೆಂದು, ಕರ್ನಾಟಕವನ್ನು ಮಗಳೆಂದು ಕರೆದುಕೊಂಡಂತಹ ರಾಜ್ಯ ನಮ್ಮದು’ ಎಂದರು.</p>.<p>‘ಹೊರ ರಾಜ್ಯದವರೊಂದಿಗೆ ಕನ್ನಡದಲ್ಲಿ ಮಾತನಾಡಿ ಅವರಿಗೆ ನಮ್ಮ ಭಾಷೆ ಕಲಿಸಬೇಕು. ತಂತ್ರಜ್ಞಾನ ಮತ್ತು ಇಂಗ್ಲಿಷನ್ನು ಕಲಿಕೆಗೆ ಹಾಗೂ ಸಂವಹನಕ್ಕಾಗಿ ಬಳಸಬೇಕೆ ಹೊರತು ನಮ್ಮ ಮಾತೃಭಾಷೆಯನ್ನು ಬಿಡಬಾರದು’ ಎಂದು ಹೇಳಿದರು.</p>.<p>‘ಯುವಜನತೆ ಕನ್ನಡವನ್ನು ಬಳಸುವ ಮೂಲಕ ಉಳಿಸಬೇಕು’ ಎಂದರು.</p>.<p>ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಯನಕುಮಾರಿ, ಐಕ್ಯೂಎಸಿ ಸಂಚಾಲಕಿ ಕೆ.ಎಸ್. ಸುಕೃತಾ, ಕನ್ನಡ ವಿಭಾಗದ ಮುಖ್ಯಸ್ಥೆ ವಿನೋದಾ, ಅಧ್ಯಾಪಕರಾದ ಬಿ.ಎನ್. ಮಾರುತಿ ಪ್ರಸನ್ನ, ಅರುಣ್ ಕುಮಾರ್ ಪಾಲ್ಗೊಂಡಿದ್ದರು.</p>.<p>ವರ್ಷಾ ನಿರೂಪಿಸಿದರು. ರಕ್ಷಿತಾ ಸ್ವಾಗತಿಸಿದರು. ವಿನೋದಾ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>