<p><strong>ಹುಣಸೂರು:</strong> ಬೇಸಿಗೆ ಝಳದಿಂದ ತತ್ತರಿಸಿದ ನಾಗರಹೊಳೆ ಅಭಯಾರಣ್ಯಕ್ಕೆ ಎರಡು ದಿನ ಮಳೆಯಾಗಿ ಪ್ರಾಣಿಗಳ ನೀರಿನ ದಾಹ ನೀಗಿಸಿದೆ.</p>.<p>‘ನಾಗರಹೊಳೆಯ 8 ವಲಯದಲ್ಲೂ ಮಾರ್ಚ್ 16 ಮತ್ತು 17ರ ರಾತ್ರಿ ಭಾರಿ ಮಳೆಯಾಗಿದ್ದು ಅರಣ್ಯದಲ್ಲಿ ಅಲ್ಲಲ್ಲಿ ನೀರು ನಿಂತು ವನ್ಯಪ್ರಾಣಿಗಳಿಗೆ ಪೂರಕವಾಗಿದೆ’ ಎಂದು ನಾಗರಹೊಳೆ ಎಸಿಎಫ್ ಲಕ್ಷ್ಮಿಕಾಂತ್ ತಿಳಿಸಿದ್ದಾರೆ.</p>.<p>ಬೇಸಿಗೆ ಬಿಸಿಲು ಆರಂಭವಾಗುತ್ತಿದ್ದಂತೆ ಅರಣ್ಯದ ಹಳ್ಳಗಳಲ್ಲಿ ನೀರು ಬತ್ತಿದ್ದು, ಈ ಮಳೆಯಿಂದಾಗಿ ಸಸ್ಯ ಪ್ರಾಣಿಗಳಿಗೆ ಮೇವು ಸಿಗಲಿದೆ. ಬೇಸಿಗೆ ಬಿಸಿಲಿಗೆ ಅರಣ್ಯ ಒಣಗಿದ್ದು ಬೆಂಕಿ ಆತಂಕ ಇತ್ತು, ಈಗ ಅದು ಅಲ್ಪ ಪ್ರಮಾಣದಲ್ಲಿ ತಪ್ಪಿದೆ ಎಂದು ಹೇಳಿದರು.</p>.<p>‘ಮುಂದಿನ ದಿನಗಳಲ್ಲಿ ಮುಂಗಾರು ಮುಂದುವರಿದಲ್ಲಿ ವನ್ಯಪ್ರಾಣಿಗಳು ನೀರಿನ ಕೊರತೆಯಿಂದ ಮುಕ್ತವಾಗಲಿದೆ. ಅರಣ್ಯದಲ್ಲಿನ ಸೋಲಾರ್ ಪಂಪ್ ದಿನದ 24 ಗಂಟೆ ಕೆಲಸ ನಿರ್ವಹಿಸುತ್ತಿದ್ದು ಕೆಲವೊಂದು ಕೆರೆಗಳಿಗೆ ನೀರು ಸೇರಿಸುವ ಕೆಲಸ ನಿರಂತರವಾಗಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು:</strong> ಬೇಸಿಗೆ ಝಳದಿಂದ ತತ್ತರಿಸಿದ ನಾಗರಹೊಳೆ ಅಭಯಾರಣ್ಯಕ್ಕೆ ಎರಡು ದಿನ ಮಳೆಯಾಗಿ ಪ್ರಾಣಿಗಳ ನೀರಿನ ದಾಹ ನೀಗಿಸಿದೆ.</p>.<p>‘ನಾಗರಹೊಳೆಯ 8 ವಲಯದಲ್ಲೂ ಮಾರ್ಚ್ 16 ಮತ್ತು 17ರ ರಾತ್ರಿ ಭಾರಿ ಮಳೆಯಾಗಿದ್ದು ಅರಣ್ಯದಲ್ಲಿ ಅಲ್ಲಲ್ಲಿ ನೀರು ನಿಂತು ವನ್ಯಪ್ರಾಣಿಗಳಿಗೆ ಪೂರಕವಾಗಿದೆ’ ಎಂದು ನಾಗರಹೊಳೆ ಎಸಿಎಫ್ ಲಕ್ಷ್ಮಿಕಾಂತ್ ತಿಳಿಸಿದ್ದಾರೆ.</p>.<p>ಬೇಸಿಗೆ ಬಿಸಿಲು ಆರಂಭವಾಗುತ್ತಿದ್ದಂತೆ ಅರಣ್ಯದ ಹಳ್ಳಗಳಲ್ಲಿ ನೀರು ಬತ್ತಿದ್ದು, ಈ ಮಳೆಯಿಂದಾಗಿ ಸಸ್ಯ ಪ್ರಾಣಿಗಳಿಗೆ ಮೇವು ಸಿಗಲಿದೆ. ಬೇಸಿಗೆ ಬಿಸಿಲಿಗೆ ಅರಣ್ಯ ಒಣಗಿದ್ದು ಬೆಂಕಿ ಆತಂಕ ಇತ್ತು, ಈಗ ಅದು ಅಲ್ಪ ಪ್ರಮಾಣದಲ್ಲಿ ತಪ್ಪಿದೆ ಎಂದು ಹೇಳಿದರು.</p>.<p>‘ಮುಂದಿನ ದಿನಗಳಲ್ಲಿ ಮುಂಗಾರು ಮುಂದುವರಿದಲ್ಲಿ ವನ್ಯಪ್ರಾಣಿಗಳು ನೀರಿನ ಕೊರತೆಯಿಂದ ಮುಕ್ತವಾಗಲಿದೆ. ಅರಣ್ಯದಲ್ಲಿನ ಸೋಲಾರ್ ಪಂಪ್ ದಿನದ 24 ಗಂಟೆ ಕೆಲಸ ನಿರ್ವಹಿಸುತ್ತಿದ್ದು ಕೆಲವೊಂದು ಕೆರೆಗಳಿಗೆ ನೀರು ಸೇರಿಸುವ ಕೆಲಸ ನಿರಂತರವಾಗಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>