‘ರಾಜ್ಯದಲ್ಲಿ ಒಟ್ಟು 26 ಅಣೆಕಟ್ಟೆಗಳು ಇವೆ. ಅವುಗಳಲ್ಲಿ 21 ಕೂಡಾ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿರ್ಮಾಣ ಆಗಿವೆ. ಕೆಆರ್ಎಸ್ ಅನ್ನು ನಾಲ್ವಡಿ ಕೃಷರಾಜ ಒಡೆಯರ್ ನಿರ್ಮಿಸಿದ್ದರೆ, ಇನ್ನುಳಿದ ನಾಲ್ಕು ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಆಗಿವೆ. ಜೆಡಿಎಸ್ ಅವಧಿಯಲ್ಲಿ ಅಣೆಕಟ್ಟೆ ಅಲ್ಲ, ಒಂದು ಚಿಕ್ಕ ಕೆರೆಯನ್ನಾದರೂ ನಿರ್ಮಿಸಿದ್ದರೆ ಅದನ್ನು ತೋರಿಸಲಿ’ ಎಂದು ಸವಾಲು ಹಾಕಿದರು.