<p><strong>ಮೈಸೂರು</strong>: ತಂತ್ರಜ್ಞಾನ, ಕೃಷಿ ಉತ್ಪಾದನೆ ಹೆಚ್ಚಳದ ನೆಪದಲ್ಲಿ ಸಾಂಪ್ರದಾಯಿಕ ಕೃಷಿ ಹಾಗೂ ಕೃಷಿಕರನ್ನು ಕಾರ್ಪೊರೇಟ್ ಕಂಪನಿಗಳ ಪಾಲು ಮಾಡುವುದನ್ನು ವಿರೋಧಿಸಿ ‘ಕಿಸಾನ್ ಸ್ವರಾಜ್ ಸಮ್ಮೇಳನ’ದಲ್ಲಿ ರೈತರು ಘೋಷಣೆ ಮೊಳಗಿಸಿದರು.</p>.<p>ಇಲ್ಲಿನ ಮುಕ್ತ ಗಂಗೋತ್ರಿಯಲ್ಲಿ ‘ಆಶಾ (ಅಲಯನ್ಸ್ ಫಾರ್ ಸಸ್ಟೈನಬಲ್ ಆ್ಯಂಡ್ ಹೊಲಿಸ್ಟಿಕ್ ಅಗ್ರಿಕಲ್ಚರ್) ಕಿಸಾನ್ ಸ್ವರಾಜ್ ಒಕ್ಕೂಟ’ವು ಭಾನುವಾರ ಆಯೋಜಿಸಿದ್ದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ದೇಶದ ವಿವಿಧೆಡೆಯಿಂದ ಬಂದಿದ್ದ ಸಾವಿರಕ್ಕೂ ಹೆಚ್ಚು ರೈತರು ದನಿಗೂಡಿಸಿದರು.</p>.<p>ರೈತ ಮಹಿಳೆಯರ ಹಕ್ಕುಗಳ ಹೋರಾಟಗಾರ್ತಿ ಆಶ್ಲೇಶಾ ಖಾದ್ಸೆ ಹಾಗೂ ಸಂಜೀವ್ ಕುಲಕರ್ಣಿ ಘೋಷಣೆಗಳನ್ನು ಮಂಡಿಸಿದರು.</p>.<p>* ರೈತರ ಭೂಮಿ, ಬೀಜ, ಮಾರುಕಟ್ಟೆ ಅಸ್ಥಿರಗೊಳಿಸಲು ಕಾರ್ಪೊರೇಟ್ ಕಂಪನಿಗಳು ಸರ್ಕಾರದ ನೀತಿಗಳ ಮೇಲೆ ಪ್ರಭಾವ ಬೀರುತ್ತಿದ್ದು, ಅದರ ವಿರುದ್ಧ ಸಂಘಟಿತರಾಗಿ ಹೋರಾಡಬೇಕು.</p>.<p>* ಎಲ್ಲರನ್ನೂ ಒಳಗೊಳ್ಳುವ ಪರಿಸರಾತ್ಮಕ ಕೃಷಿ ಪದ್ಧತಿಯನ್ನೇ ಅನುಸರಿಸಬೇಕು. ಅದನ್ನು ಬೆಂಬಲಿಸುವ ತಂತ್ರಜ್ಞಾನಗಳನ್ನಷ್ಟೆ ಒಪ್ಪಬೇಕು.</p>.<p>* ರೈತರ ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ಸಾರ್ವಭೌಮತೆ ಹೆಚ್ಚಿಸಬೇಕು. ನೀತಿ ಜಾರಿಗೆ ಮುನ್ನ ರೈತರ ಒಪ್ಪಿಗೆ ಪಡೆಯಬೇಕು.</p>.<p>* ರೈತ ಮಹಿಳೆಯರಿಗೆ ಭೂಮಿ ಹಕ್ಕು ವಿಷಯದಲ್ಲಿ ಕಾನೂನಾತ್ಮಕ ಬೆಂಬಲ ನೀಡಬೇಕು. ನಿಜವಾದ ಕೃಷಿಕರು ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ಭೂಮಿ ಸಿಗಬೇಕು. ಅನ್ಯ ಉದ್ದೇಶಕ್ಕೆ ಮಾರಾಟ ತಪ್ಪಿಸಬೇಕು.</p>.<p>* ಕನಿಷ್ಠ ಬೆಂಬಲ ಬೆಲೆ, ಯೋಗ್ಯ ಪರಿಹಾರ, ವಿಮೆ ನೀಡಬೇಕು. ರೈತರ ಆತ್ಮಹತ್ಯೆ ತಡೆಯಬೇಕು.</p>.<p>* ಬೀಜಗಳ ಹಕ್ಕುಸ್ವಾಮ್ಯ ಕಂಪನಿಗಳ ಪಾಲಾಗಬಾರದು. ಕೃಷಿ ವೈವಿಧ್ಯ ಉಳಿಸಿಕೊಳ್ಳಬೇಕು.</p>.<p>* ಸುರಕ್ಷಿತ, ವೈವಿಧ್ಯಮಯ, ಸಮಗ್ರ ಆಹಾರವು ಪ್ರತಿಯೊಬ್ಬ ನಾಗರಿಕರಿಗೂ ಸಿಗಬೇಕು. ಏನನ್ನು ತಿನ್ನಬೇಕು, ತಿನ್ನಬಾರದೆಂದು ನಿರ್ಧರಿಸುವುದೂ ಸಂವಿಧಾನಕ್ಕೆ ವಿರುದ್ಧ.</p>.<p>* ಜೀವ ವೈವಿಧ್ಯವನ್ನು ಉಳಿಸಿಕೊಳ್ಳಲು ಕುಲಾಂತರಿ ಸಾಸಿವೆ ಸೇರಿದಂತೆ ಯಾವುದೇ ಹೈಬ್ರೀಡ್ ತಳಿಗೆ ಅವಕಾಶ ನೀಡಬಾರದು. </p>.<p>* ಸ್ಥಳೀಯ ಸುಸ್ಥಿರ ಕೃಷಿ ಪ್ರೋತ್ಸಾಹಿಸಬೇಕು. ನಗರ ಹಾಗೂ ಗ್ರಾಮೀಣರ ನಡುವೆ ಸಂಬಂಧ ಬಲಪಡಿಸಬೇಕು.</p>.<p>ರಾಜ್ಯಸಭಾ ಸದಸ್ಯ ಅನಿಲ್ ಹೆಗ್ಡೆ, ಆಶಾ ಒಕ್ಕೂಟದ ಶ್ರೀಧರ್ ರಾಧಾಕೃಷ್ಣನ್, ಸಂಘಟಕರಾದ ಉಷಾ ಸೂಲಪಾಣಿ, ಕಾರ್ತಿಕ್ ಗುಣಶೇಖರ್, ರಾಷ್ಟ್ರೀಯ ಸಂಚಾಲಕ ಕಪಿಲ್ ಶಾ, ಕೆಎಸ್ಒಯು ಕುಲಸಚಿವ ಖಾದರ್ ಪಾಷಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ತಂತ್ರಜ್ಞಾನ, ಕೃಷಿ ಉತ್ಪಾದನೆ ಹೆಚ್ಚಳದ ನೆಪದಲ್ಲಿ ಸಾಂಪ್ರದಾಯಿಕ ಕೃಷಿ ಹಾಗೂ ಕೃಷಿಕರನ್ನು ಕಾರ್ಪೊರೇಟ್ ಕಂಪನಿಗಳ ಪಾಲು ಮಾಡುವುದನ್ನು ವಿರೋಧಿಸಿ ‘ಕಿಸಾನ್ ಸ್ವರಾಜ್ ಸಮ್ಮೇಳನ’ದಲ್ಲಿ ರೈತರು ಘೋಷಣೆ ಮೊಳಗಿಸಿದರು.</p>.<p>ಇಲ್ಲಿನ ಮುಕ್ತ ಗಂಗೋತ್ರಿಯಲ್ಲಿ ‘ಆಶಾ (ಅಲಯನ್ಸ್ ಫಾರ್ ಸಸ್ಟೈನಬಲ್ ಆ್ಯಂಡ್ ಹೊಲಿಸ್ಟಿಕ್ ಅಗ್ರಿಕಲ್ಚರ್) ಕಿಸಾನ್ ಸ್ವರಾಜ್ ಒಕ್ಕೂಟ’ವು ಭಾನುವಾರ ಆಯೋಜಿಸಿದ್ದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ದೇಶದ ವಿವಿಧೆಡೆಯಿಂದ ಬಂದಿದ್ದ ಸಾವಿರಕ್ಕೂ ಹೆಚ್ಚು ರೈತರು ದನಿಗೂಡಿಸಿದರು.</p>.<p>ರೈತ ಮಹಿಳೆಯರ ಹಕ್ಕುಗಳ ಹೋರಾಟಗಾರ್ತಿ ಆಶ್ಲೇಶಾ ಖಾದ್ಸೆ ಹಾಗೂ ಸಂಜೀವ್ ಕುಲಕರ್ಣಿ ಘೋಷಣೆಗಳನ್ನು ಮಂಡಿಸಿದರು.</p>.<p>* ರೈತರ ಭೂಮಿ, ಬೀಜ, ಮಾರುಕಟ್ಟೆ ಅಸ್ಥಿರಗೊಳಿಸಲು ಕಾರ್ಪೊರೇಟ್ ಕಂಪನಿಗಳು ಸರ್ಕಾರದ ನೀತಿಗಳ ಮೇಲೆ ಪ್ರಭಾವ ಬೀರುತ್ತಿದ್ದು, ಅದರ ವಿರುದ್ಧ ಸಂಘಟಿತರಾಗಿ ಹೋರಾಡಬೇಕು.</p>.<p>* ಎಲ್ಲರನ್ನೂ ಒಳಗೊಳ್ಳುವ ಪರಿಸರಾತ್ಮಕ ಕೃಷಿ ಪದ್ಧತಿಯನ್ನೇ ಅನುಸರಿಸಬೇಕು. ಅದನ್ನು ಬೆಂಬಲಿಸುವ ತಂತ್ರಜ್ಞಾನಗಳನ್ನಷ್ಟೆ ಒಪ್ಪಬೇಕು.</p>.<p>* ರೈತರ ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ಸಾರ್ವಭೌಮತೆ ಹೆಚ್ಚಿಸಬೇಕು. ನೀತಿ ಜಾರಿಗೆ ಮುನ್ನ ರೈತರ ಒಪ್ಪಿಗೆ ಪಡೆಯಬೇಕು.</p>.<p>* ರೈತ ಮಹಿಳೆಯರಿಗೆ ಭೂಮಿ ಹಕ್ಕು ವಿಷಯದಲ್ಲಿ ಕಾನೂನಾತ್ಮಕ ಬೆಂಬಲ ನೀಡಬೇಕು. ನಿಜವಾದ ಕೃಷಿಕರು ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ಭೂಮಿ ಸಿಗಬೇಕು. ಅನ್ಯ ಉದ್ದೇಶಕ್ಕೆ ಮಾರಾಟ ತಪ್ಪಿಸಬೇಕು.</p>.<p>* ಕನಿಷ್ಠ ಬೆಂಬಲ ಬೆಲೆ, ಯೋಗ್ಯ ಪರಿಹಾರ, ವಿಮೆ ನೀಡಬೇಕು. ರೈತರ ಆತ್ಮಹತ್ಯೆ ತಡೆಯಬೇಕು.</p>.<p>* ಬೀಜಗಳ ಹಕ್ಕುಸ್ವಾಮ್ಯ ಕಂಪನಿಗಳ ಪಾಲಾಗಬಾರದು. ಕೃಷಿ ವೈವಿಧ್ಯ ಉಳಿಸಿಕೊಳ್ಳಬೇಕು.</p>.<p>* ಸುರಕ್ಷಿತ, ವೈವಿಧ್ಯಮಯ, ಸಮಗ್ರ ಆಹಾರವು ಪ್ರತಿಯೊಬ್ಬ ನಾಗರಿಕರಿಗೂ ಸಿಗಬೇಕು. ಏನನ್ನು ತಿನ್ನಬೇಕು, ತಿನ್ನಬಾರದೆಂದು ನಿರ್ಧರಿಸುವುದೂ ಸಂವಿಧಾನಕ್ಕೆ ವಿರುದ್ಧ.</p>.<p>* ಜೀವ ವೈವಿಧ್ಯವನ್ನು ಉಳಿಸಿಕೊಳ್ಳಲು ಕುಲಾಂತರಿ ಸಾಸಿವೆ ಸೇರಿದಂತೆ ಯಾವುದೇ ಹೈಬ್ರೀಡ್ ತಳಿಗೆ ಅವಕಾಶ ನೀಡಬಾರದು. </p>.<p>* ಸ್ಥಳೀಯ ಸುಸ್ಥಿರ ಕೃಷಿ ಪ್ರೋತ್ಸಾಹಿಸಬೇಕು. ನಗರ ಹಾಗೂ ಗ್ರಾಮೀಣರ ನಡುವೆ ಸಂಬಂಧ ಬಲಪಡಿಸಬೇಕು.</p>.<p>ರಾಜ್ಯಸಭಾ ಸದಸ್ಯ ಅನಿಲ್ ಹೆಗ್ಡೆ, ಆಶಾ ಒಕ್ಕೂಟದ ಶ್ರೀಧರ್ ರಾಧಾಕೃಷ್ಣನ್, ಸಂಘಟಕರಾದ ಉಷಾ ಸೂಲಪಾಣಿ, ಕಾರ್ತಿಕ್ ಗುಣಶೇಖರ್, ರಾಷ್ಟ್ರೀಯ ಸಂಚಾಲಕ ಕಪಿಲ್ ಶಾ, ಕೆಎಸ್ಒಯು ಕುಲಸಚಿವ ಖಾದರ್ ಪಾಷಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>