<p><strong>ಮೈಸೂರು: </strong>ಜಮೀನಿನ ಮಾಲೀಕ ಗಣಪತಿ ರೆಡ್ಡಿ ಎಂಬುವವರ ಜೊತೆ ಶಾಸಕ ಸಾ.ರಾ.ಮಹೇಶ್ ನಡೆಸಿದ ಮೊಬೈಲ್ ಸಂಭಾಷಣೆಯ ಆಡಿಯೊ, ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ಹರಿದಾಡುತ್ತಿದೆ.</p>.<p>ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಬೆನ್ನಲ್ಲೇ, ಈ ಆಡಿಯೊ ವೈರಲ್ ಆಗಿದೆ.</p>.<p>ರೆಡ್ಡಿ ಅವರಿಗೆ ಮೈಸೂರು ತಾಲ್ಲೂಕಿನ ಕೇರ್ಗಳ್ಳಿಯ ಸರ್ವೇ ನಂ.115ರ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ತರುವಂತೆ, ಶಾಸಕ ಗದರುವ ದನಿಯಲ್ಲಿ ಹೇಳುತ್ತಾರೆ. ‘ನಾನು ಸಾ.ರಾ.ಮಹೇಶ್ ಮಾತಾಡ್ತಾ ಇದ್ದೀನಿ’ ಎಂದು ಸಂಭಾಷಣೆ ಆರಂಭವಾಗುತ್ತದೆ. ‘ಈ ಭೂಮಿ ನಿಮ್ಮದಲ್ಲ; ಮಂಜು ಎಂಬುವವರಿಗೆ ಸೇರಿದ್ದು. ನಿಮ್ಮ ಹುಡುಗನಿಗೆ ಫೆನ್ಸ್ ಹಾಕಿದಾಗಲೇ ದಾಖಲೆ ತಂದು ತೋರಿಸುವಂತೆ ಹೇಳಿದ್ದೆ. ಆದರೂ ಕೇಳಿಲ್ಲ. ನಾಳೆ ದಾಖಲೆ ತೆಗೆದುಕೊಂಡು ಬನ್ನಿ’ ಎನ್ನುತ್ತಾರೆ. ಅದಕ್ಕೆ ರೆಡ್ಡಿ, ‘ನೀವೇನು ಜಡ್ಜಾ?’ ಎಂದು ಪ್ರಶ್ನಿಸುತ್ತಾರೆ.</p>.<p>ಆಗ ರೆಡ್ಡಿ, ‘ನಮ್ಮ ಪ್ರಾಪರ್ಟಿಗೇ ಪೇಪರ್ ತಗೊಂಡು ಬನ್ನಿ ಎನ್ನಲುನೀವು ಜಡ್ಜಾ‘ ಎಂದು ಮತ್ತೆ ಕೇಳುತ್ತಾರೆ. ಆಗ ಸಾ.ರಾ.ಮಹೇಶ್, ‘ರೀ ಅದು ನಂದು ರೀ ಪ್ರಾಪರ್ಟಿ’ ಎನ್ನುತ್ತಾರೆ.</p>.<p>ತಮ್ಮ ದಾಖಲೆ ಸರಿಯಾಗಿದೆ ಎಂದು ರೆಡ್ಡಿ ಹೇಳಿದಾಗ, ‘ನಾಳೆ ಡಾಕ್ಯುಮೆಂಟ್ ತನ್ನಿ. ಯಾರದೆಂದು ಗೊತ್ತಾಗುತ್ತೆ’ ಎಂದು ಶಾಸಕರು ಹೇಳುತ್ತಾರೆ.</p>.<p>ಸಂಭಾಷಣೆಯ ಕೊನೆಯಲ್ಲಿ ರೆಡ್ಡಿ ಅವರು, ಈ ವಿಷಯವನ್ನು ಮಾಧ್ಯಮದವರಿಗೆ ಹೇಳುವುದಾಗಿ ಹೇಳಿದಾಗ, ಶಾಸಕರು, ‘ಮಾಧ್ಯಮದವರಿಗಲ್ಲ; ಅವರಪ್ಪನಿಗೆ ಹೇಳು’ ಎನ್ನುತ್ತಾರೆ.</p>.<p>ಈ ಆಡಿಯೊ ಬಿಡುಗಡೆ ಮಾಡಿರುವ ಮಾಹಿತಿ ಹಕ್ಕು ಕಾರ್ಯಕರ್ತ ಗಂಗರಾಜು, ‘ಈ ಸಂಭಾಷಣೆ ಕೇರ್ಗಳ್ಳಿ ಸಮೀಪದ ಎರಡು ಎಕರೆ ಭೂಮಿಯ ಮಾಲೀಕ ಗಣಪತಿ ರೆಡ್ಡಿ ಹಾಗೂ ಶಾಸಕ ಸಾ.ರಾ.ಮಹೇಶ್ ಅವರದ್ದಾಗಿದ್ದು, ಐದು ತಿಂಗಳ ಹಿಂದೆ ಈ ಮಾತುಕತೆ ನಡೆದಿದೆ’ ಎಂದು ಹೇಳಿದ್ದಾರೆ.</p>.<p><strong>ಇದು ರೆಡ್ಡಿಗಳ ಪಿತೂರಿ; ತನಿಖೆಯಾಗಲಿ– ಸಾ.ರಾ.ಮಹೇಶ್</strong></p>.<p>ಆಡಿಯೊ ಕುರಿತು ‘ಪ್ರಜಾವಾಣಿ’ ಸಾ.ರಾ.ಮಹೇಶ್ ಅವರನ್ನು ಸಂಪರ್ಕಿಸಿದಾಗ, ‘ಇದು ರೆಡ್ಡಿಗಳ ಪಿತೂರಿಯೇ ಹೊರತು ಬೇರೇನೂ ಅಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಾಗಲಿ’ ಎಂದು ತಿಳಿಸಿದರು.</p>.<p>‘ವಾಸ್ತವದಲ್ಲಿ ಈ ಭೂಮಿ ರುದ್ರಮೂರ್ತಿ ಎಂಬುವವರ ಪುತ್ರ ಮಂಜು ಅವರಿಗೆ ಸೇರಿದ್ದು. 2006ರಲ್ಲಿ ನಾನು ‘ಮುಡಾ’ ಅಧ್ಯಕ್ಷನಾಗಿದ್ದಾಗ ಆರ್.ಟಿ.ನಗರ ಬಡಾವಣೆಯ 60 ಅಡಿ ರಸ್ತೆಗಾಗಿ ಇವರ ಭೂಮಿ ಪಡೆಯಲಾಗಿತ್ತು. ರೆಡ್ಡಿ ಅವರು ಏಕಾಏಕಿ ಅಲ್ಲಿ ಬಂದು ತಮ್ಮ ಫಲಕ ಹಾಕಿದರು. ಈ ವಿಚಾರವನ್ನು ಮಂಜು ಅವರು ನನ್ನ ಗಮನಕ್ಕೆ ತರುತ್ತಿದ್ದಂತೆ, ನಾನು ರೆಡ್ಡಿ ಅವರಿಗೆ ಈ ರೀತಿ ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದೆ. ಆರು ತಿಂಗಳ ಹಿಂದೆ ಮಾತಾಡಿದ್ದು. ಈ ಬಗ್ಗೆ ತನಿಖೆ ನಡೆಯಲಿ. ಆಗ ಯಾಕೆ ಮಾತಾಡಿದ್ದು ಎಂಬುದು ಗೊತ್ತಾಗುತ್ತದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಜಮೀನಿನ ಮಾಲೀಕ ಗಣಪತಿ ರೆಡ್ಡಿ ಎಂಬುವವರ ಜೊತೆ ಶಾಸಕ ಸಾ.ರಾ.ಮಹೇಶ್ ನಡೆಸಿದ ಮೊಬೈಲ್ ಸಂಭಾಷಣೆಯ ಆಡಿಯೊ, ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ಹರಿದಾಡುತ್ತಿದೆ.</p>.<p>ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಬೆನ್ನಲ್ಲೇ, ಈ ಆಡಿಯೊ ವೈರಲ್ ಆಗಿದೆ.</p>.<p>ರೆಡ್ಡಿ ಅವರಿಗೆ ಮೈಸೂರು ತಾಲ್ಲೂಕಿನ ಕೇರ್ಗಳ್ಳಿಯ ಸರ್ವೇ ನಂ.115ರ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ತರುವಂತೆ, ಶಾಸಕ ಗದರುವ ದನಿಯಲ್ಲಿ ಹೇಳುತ್ತಾರೆ. ‘ನಾನು ಸಾ.ರಾ.ಮಹೇಶ್ ಮಾತಾಡ್ತಾ ಇದ್ದೀನಿ’ ಎಂದು ಸಂಭಾಷಣೆ ಆರಂಭವಾಗುತ್ತದೆ. ‘ಈ ಭೂಮಿ ನಿಮ್ಮದಲ್ಲ; ಮಂಜು ಎಂಬುವವರಿಗೆ ಸೇರಿದ್ದು. ನಿಮ್ಮ ಹುಡುಗನಿಗೆ ಫೆನ್ಸ್ ಹಾಕಿದಾಗಲೇ ದಾಖಲೆ ತಂದು ತೋರಿಸುವಂತೆ ಹೇಳಿದ್ದೆ. ಆದರೂ ಕೇಳಿಲ್ಲ. ನಾಳೆ ದಾಖಲೆ ತೆಗೆದುಕೊಂಡು ಬನ್ನಿ’ ಎನ್ನುತ್ತಾರೆ. ಅದಕ್ಕೆ ರೆಡ್ಡಿ, ‘ನೀವೇನು ಜಡ್ಜಾ?’ ಎಂದು ಪ್ರಶ್ನಿಸುತ್ತಾರೆ.</p>.<p>ಆಗ ರೆಡ್ಡಿ, ‘ನಮ್ಮ ಪ್ರಾಪರ್ಟಿಗೇ ಪೇಪರ್ ತಗೊಂಡು ಬನ್ನಿ ಎನ್ನಲುನೀವು ಜಡ್ಜಾ‘ ಎಂದು ಮತ್ತೆ ಕೇಳುತ್ತಾರೆ. ಆಗ ಸಾ.ರಾ.ಮಹೇಶ್, ‘ರೀ ಅದು ನಂದು ರೀ ಪ್ರಾಪರ್ಟಿ’ ಎನ್ನುತ್ತಾರೆ.</p>.<p>ತಮ್ಮ ದಾಖಲೆ ಸರಿಯಾಗಿದೆ ಎಂದು ರೆಡ್ಡಿ ಹೇಳಿದಾಗ, ‘ನಾಳೆ ಡಾಕ್ಯುಮೆಂಟ್ ತನ್ನಿ. ಯಾರದೆಂದು ಗೊತ್ತಾಗುತ್ತೆ’ ಎಂದು ಶಾಸಕರು ಹೇಳುತ್ತಾರೆ.</p>.<p>ಸಂಭಾಷಣೆಯ ಕೊನೆಯಲ್ಲಿ ರೆಡ್ಡಿ ಅವರು, ಈ ವಿಷಯವನ್ನು ಮಾಧ್ಯಮದವರಿಗೆ ಹೇಳುವುದಾಗಿ ಹೇಳಿದಾಗ, ಶಾಸಕರು, ‘ಮಾಧ್ಯಮದವರಿಗಲ್ಲ; ಅವರಪ್ಪನಿಗೆ ಹೇಳು’ ಎನ್ನುತ್ತಾರೆ.</p>.<p>ಈ ಆಡಿಯೊ ಬಿಡುಗಡೆ ಮಾಡಿರುವ ಮಾಹಿತಿ ಹಕ್ಕು ಕಾರ್ಯಕರ್ತ ಗಂಗರಾಜು, ‘ಈ ಸಂಭಾಷಣೆ ಕೇರ್ಗಳ್ಳಿ ಸಮೀಪದ ಎರಡು ಎಕರೆ ಭೂಮಿಯ ಮಾಲೀಕ ಗಣಪತಿ ರೆಡ್ಡಿ ಹಾಗೂ ಶಾಸಕ ಸಾ.ರಾ.ಮಹೇಶ್ ಅವರದ್ದಾಗಿದ್ದು, ಐದು ತಿಂಗಳ ಹಿಂದೆ ಈ ಮಾತುಕತೆ ನಡೆದಿದೆ’ ಎಂದು ಹೇಳಿದ್ದಾರೆ.</p>.<p><strong>ಇದು ರೆಡ್ಡಿಗಳ ಪಿತೂರಿ; ತನಿಖೆಯಾಗಲಿ– ಸಾ.ರಾ.ಮಹೇಶ್</strong></p>.<p>ಆಡಿಯೊ ಕುರಿತು ‘ಪ್ರಜಾವಾಣಿ’ ಸಾ.ರಾ.ಮಹೇಶ್ ಅವರನ್ನು ಸಂಪರ್ಕಿಸಿದಾಗ, ‘ಇದು ರೆಡ್ಡಿಗಳ ಪಿತೂರಿಯೇ ಹೊರತು ಬೇರೇನೂ ಅಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಾಗಲಿ’ ಎಂದು ತಿಳಿಸಿದರು.</p>.<p>‘ವಾಸ್ತವದಲ್ಲಿ ಈ ಭೂಮಿ ರುದ್ರಮೂರ್ತಿ ಎಂಬುವವರ ಪುತ್ರ ಮಂಜು ಅವರಿಗೆ ಸೇರಿದ್ದು. 2006ರಲ್ಲಿ ನಾನು ‘ಮುಡಾ’ ಅಧ್ಯಕ್ಷನಾಗಿದ್ದಾಗ ಆರ್.ಟಿ.ನಗರ ಬಡಾವಣೆಯ 60 ಅಡಿ ರಸ್ತೆಗಾಗಿ ಇವರ ಭೂಮಿ ಪಡೆಯಲಾಗಿತ್ತು. ರೆಡ್ಡಿ ಅವರು ಏಕಾಏಕಿ ಅಲ್ಲಿ ಬಂದು ತಮ್ಮ ಫಲಕ ಹಾಕಿದರು. ಈ ವಿಚಾರವನ್ನು ಮಂಜು ಅವರು ನನ್ನ ಗಮನಕ್ಕೆ ತರುತ್ತಿದ್ದಂತೆ, ನಾನು ರೆಡ್ಡಿ ಅವರಿಗೆ ಈ ರೀತಿ ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದೆ. ಆರು ತಿಂಗಳ ಹಿಂದೆ ಮಾತಾಡಿದ್ದು. ಈ ಬಗ್ಗೆ ತನಿಖೆ ನಡೆಯಲಿ. ಆಗ ಯಾಕೆ ಮಾತಾಡಿದ್ದು ಎಂಬುದು ಗೊತ್ತಾಗುತ್ತದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>