<p><strong>ಮೈಸೂರು</strong>: ಜಿಲ್ಲೆಯ ಹಣ್ಣುಪ್ರಿಯರಿಗೆ ಈ ವಾರಾಂತ್ಯದಲ್ಲಿ ಬಗೆಬಗೆಯ ಮಾವು ಸವಿಯುವ ಅವಕಾಶ ಒದಗಲಿದೆ. ನಗರದ ಕುಪ್ಪಣ್ಣ ಉದ್ಯಾನದಲ್ಲಿ ಮೇ 23ರಿಂದ 25ರವರೆಗೆ ಮಾವು ಮತ್ತು ಹಲಸು ಮೇಳ ನಡೆಯಲಿದೆ.</p>.<p>ತೋಟಗಾರಿಕೆ ಇಲಾಖೆಯು ಪ್ರತಿ ವರ್ಷ ಮೇನಲ್ಲಿ ಮಾವು ಮೇಳ ಆಯೋಜಿಸುತ್ತಿದ್ದು, ಮಾವು ಬೆಳೆಗಾರರಿಂದ ಗ್ರಾಹಕರಿಗೆ ನೇರವಾಗಿ ಕಾರ್ಬೈಡ್ ಮುಕ್ತ ಮಾವು ಮಾರಾಟಕ್ಕೆ ವೇದಿಕೆ ಒದಗಿಸುತ್ತಿದೆ. ಮೂರು ದಿನಗಳ ಮೇಳದಲ್ಲಿ ರಾಮನಗರ, ಮೈಸೂರು, ಮಂಡ್ಯ, ಕೋಲಾರ ಮೊದಲಾದ ಜಿಲ್ಲೆಗಳಿಂದ ಮಾವು ಮಾರಾಟಕ್ಕೆ ಬರಲಿದೆ.</p>.<p>ಕಳೆದ ಕೆಲವು ವರ್ಷಗಳಿಂದ ಮಾವಿನ ಜೊತೆಗೆ ಹಲಸು ಮಾರಾಟಕ್ಕೂ ಅವಕಾಶ ನೀಡುತ್ತಿದ್ದು, ಈ ಬಾರಿಯ ಮೇಳದಲ್ಲೂ ಹಲಸಿನ ಹಣ್ಣು ಗ್ರಾಹಕರಿಗೆ ಸಿಗಲಿದೆ.</p>.<p>ಉತ್ತಮ ವಹಿವಾಟಿನ ನಿರೀಕ್ಷೆ: ವರ್ಷದಿಂದ ವರ್ಷಕ್ಕೆ ಸಾರ್ವಜನಿಕರಿಂದ ಮಾವು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಈ ಬಾರಿಯ ಮೇಳದಲ್ಲಿ ಇನ್ನಷ್ಟು ಉತ್ತಮ ವಹಿವಾಟು ನಡೆಯುವ ನಿರೀಕ್ಷೆ ಇದೆ. ಬದಾಮಿ, ರಸಪುರಿ, ಸೇಂದೂರ, ಮಲಗೋವಾ, ಮಲ್ಲಿಕಾ, ರಸಪುರಿ, ಸಕ್ಕರೆಗುತ್ತಿ, ತೋತಾಪುರಿ ಹಣ್ಣುಗಳೂ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರಿಗೆ ಸಿಗಲಿವೆ.</p>.<p>ಕಳೆದ ವರ್ಷ ಮೇ 24ರಿಂದ 26ರವರೆಗೆ ನಡೆದ ಮೇಳದಲ್ಲಿ ಬರೋಬ್ಬರಿ 130 ಟನ್ಗೂ ಅಧಿಕ ಮಾವು ಮಾರಾಟವಾಗಿತ್ತು. 35ಕ್ಕೂ ಅಧಿಕ ರೈತರು ಮಳಿಗೆಗಳ ಮೂಲಕ ಗ್ರಾಹಕರಿಗೆ ನೇರವಾಗಿ ಮಾವು ಮಾರಾಟ ಮಾಡಿದ್ದರು.</p>.<div><blockquote>ಮೇ 23ರಿಂದ 25ರವರೆಗೆ ಕುಪ್ಪಣ್ಣ ಉದ್ಯಾನದಲ್ಲಿ ಮಾವು ಮತ್ತು ಹಲಸು ಮೇಳ ಆಯೋಜಿಸಲಾಗುತ್ತಿದ್ದು ರೈತರಿಂದ ಗ್ರಾಹಕರಿಗೆ ನೇರವಾಗಿ ಹಣ್ಣುಗಳ ಮಾರಾಟ ಇರಲಿದೆ. </blockquote><span class="attribution">ಮಂಜುನಾಥ ಅಂಗಡಿ, ತೋಟಗಾರಿಕೆ ಉಪನಿರ್ದೇಶಕ</span></div>.<p>2023ರ ಮೇ ಅಂತ್ಯದಲ್ಲಿ ನಡೆದಿದ್ದ ಮಾವು ಮೇಳದಲ್ಲಿ ಒಟ್ಟು 28 ರೈತರು ಪಾಲ್ಗೊಂಡಿದ್ದರು. 88 ಟನ್ನಷ್ಟು ಮಾವು ಮಾರಾಟ ನಡೆದಿತ್ತು. ಸುಮಾರು 30 ಸಾವಿರದಷ್ಟು ಗ್ರಾಹಕರು ಮಾವು ಖರೀದಿಸಿದ್ದರು. </p>.<p><strong>ಹಣ್ಣಿನ ಬೆಲೆ ಇಳಿಕೆ:</strong></p><p>ಮಾರುಕಟ್ಟೆಗೆ ಮಾವಿನ ಆವಕ ಹೆಚ್ಚಿರುವ ಹಿನ್ನೆಲೆಯಲ್ಲಿ ಹಣ್ಣುಗಳ ಬೆಲೆಯೂ ಇಳಿಕೆ ಕಾಣುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ರಸಪುರಿ ಹಾಗೂ ಬದಾಮಿ ತಳಿಯ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ರಸಪುರಿ ಪ್ರತಿ ಕೆ.ಜಿ.ಗೆ ಸರಾಸರಿ ₹120ರ ದರವಿದ್ದರೆ ಬದಾಮಿ ₹100ರ ಸರಾಸರಿಯಲ್ಲಿ ವ್ಯಾಪಾರ ನಡೆದಿದೆ. ಸೇಂದೂರ ₹60 ತೋತಾಪುರಿ ₹40ರ ದರ ಹೊಂದಿದೆ. ಮಲಗೋವಾ ಮಲ್ಲಿಕಾ ಮೊದಲಾದ ತಳಿಗಳ ಮಾವು ಹೆಚ್ಚು ಬಂದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಜಿಲ್ಲೆಯ ಹಣ್ಣುಪ್ರಿಯರಿಗೆ ಈ ವಾರಾಂತ್ಯದಲ್ಲಿ ಬಗೆಬಗೆಯ ಮಾವು ಸವಿಯುವ ಅವಕಾಶ ಒದಗಲಿದೆ. ನಗರದ ಕುಪ್ಪಣ್ಣ ಉದ್ಯಾನದಲ್ಲಿ ಮೇ 23ರಿಂದ 25ರವರೆಗೆ ಮಾವು ಮತ್ತು ಹಲಸು ಮೇಳ ನಡೆಯಲಿದೆ.</p>.<p>ತೋಟಗಾರಿಕೆ ಇಲಾಖೆಯು ಪ್ರತಿ ವರ್ಷ ಮೇನಲ್ಲಿ ಮಾವು ಮೇಳ ಆಯೋಜಿಸುತ್ತಿದ್ದು, ಮಾವು ಬೆಳೆಗಾರರಿಂದ ಗ್ರಾಹಕರಿಗೆ ನೇರವಾಗಿ ಕಾರ್ಬೈಡ್ ಮುಕ್ತ ಮಾವು ಮಾರಾಟಕ್ಕೆ ವೇದಿಕೆ ಒದಗಿಸುತ್ತಿದೆ. ಮೂರು ದಿನಗಳ ಮೇಳದಲ್ಲಿ ರಾಮನಗರ, ಮೈಸೂರು, ಮಂಡ್ಯ, ಕೋಲಾರ ಮೊದಲಾದ ಜಿಲ್ಲೆಗಳಿಂದ ಮಾವು ಮಾರಾಟಕ್ಕೆ ಬರಲಿದೆ.</p>.<p>ಕಳೆದ ಕೆಲವು ವರ್ಷಗಳಿಂದ ಮಾವಿನ ಜೊತೆಗೆ ಹಲಸು ಮಾರಾಟಕ್ಕೂ ಅವಕಾಶ ನೀಡುತ್ತಿದ್ದು, ಈ ಬಾರಿಯ ಮೇಳದಲ್ಲೂ ಹಲಸಿನ ಹಣ್ಣು ಗ್ರಾಹಕರಿಗೆ ಸಿಗಲಿದೆ.</p>.<p>ಉತ್ತಮ ವಹಿವಾಟಿನ ನಿರೀಕ್ಷೆ: ವರ್ಷದಿಂದ ವರ್ಷಕ್ಕೆ ಸಾರ್ವಜನಿಕರಿಂದ ಮಾವು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಈ ಬಾರಿಯ ಮೇಳದಲ್ಲಿ ಇನ್ನಷ್ಟು ಉತ್ತಮ ವಹಿವಾಟು ನಡೆಯುವ ನಿರೀಕ್ಷೆ ಇದೆ. ಬದಾಮಿ, ರಸಪುರಿ, ಸೇಂದೂರ, ಮಲಗೋವಾ, ಮಲ್ಲಿಕಾ, ರಸಪುರಿ, ಸಕ್ಕರೆಗುತ್ತಿ, ತೋತಾಪುರಿ ಹಣ್ಣುಗಳೂ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರಿಗೆ ಸಿಗಲಿವೆ.</p>.<p>ಕಳೆದ ವರ್ಷ ಮೇ 24ರಿಂದ 26ರವರೆಗೆ ನಡೆದ ಮೇಳದಲ್ಲಿ ಬರೋಬ್ಬರಿ 130 ಟನ್ಗೂ ಅಧಿಕ ಮಾವು ಮಾರಾಟವಾಗಿತ್ತು. 35ಕ್ಕೂ ಅಧಿಕ ರೈತರು ಮಳಿಗೆಗಳ ಮೂಲಕ ಗ್ರಾಹಕರಿಗೆ ನೇರವಾಗಿ ಮಾವು ಮಾರಾಟ ಮಾಡಿದ್ದರು.</p>.<div><blockquote>ಮೇ 23ರಿಂದ 25ರವರೆಗೆ ಕುಪ್ಪಣ್ಣ ಉದ್ಯಾನದಲ್ಲಿ ಮಾವು ಮತ್ತು ಹಲಸು ಮೇಳ ಆಯೋಜಿಸಲಾಗುತ್ತಿದ್ದು ರೈತರಿಂದ ಗ್ರಾಹಕರಿಗೆ ನೇರವಾಗಿ ಹಣ್ಣುಗಳ ಮಾರಾಟ ಇರಲಿದೆ. </blockquote><span class="attribution">ಮಂಜುನಾಥ ಅಂಗಡಿ, ತೋಟಗಾರಿಕೆ ಉಪನಿರ್ದೇಶಕ</span></div>.<p>2023ರ ಮೇ ಅಂತ್ಯದಲ್ಲಿ ನಡೆದಿದ್ದ ಮಾವು ಮೇಳದಲ್ಲಿ ಒಟ್ಟು 28 ರೈತರು ಪಾಲ್ಗೊಂಡಿದ್ದರು. 88 ಟನ್ನಷ್ಟು ಮಾವು ಮಾರಾಟ ನಡೆದಿತ್ತು. ಸುಮಾರು 30 ಸಾವಿರದಷ್ಟು ಗ್ರಾಹಕರು ಮಾವು ಖರೀದಿಸಿದ್ದರು. </p>.<p><strong>ಹಣ್ಣಿನ ಬೆಲೆ ಇಳಿಕೆ:</strong></p><p>ಮಾರುಕಟ್ಟೆಗೆ ಮಾವಿನ ಆವಕ ಹೆಚ್ಚಿರುವ ಹಿನ್ನೆಲೆಯಲ್ಲಿ ಹಣ್ಣುಗಳ ಬೆಲೆಯೂ ಇಳಿಕೆ ಕಾಣುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ರಸಪುರಿ ಹಾಗೂ ಬದಾಮಿ ತಳಿಯ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ರಸಪುರಿ ಪ್ರತಿ ಕೆ.ಜಿ.ಗೆ ಸರಾಸರಿ ₹120ರ ದರವಿದ್ದರೆ ಬದಾಮಿ ₹100ರ ಸರಾಸರಿಯಲ್ಲಿ ವ್ಯಾಪಾರ ನಡೆದಿದೆ. ಸೇಂದೂರ ₹60 ತೋತಾಪುರಿ ₹40ರ ದರ ಹೊಂದಿದೆ. ಮಲಗೋವಾ ಮಲ್ಲಿಕಾ ಮೊದಲಾದ ತಳಿಗಳ ಮಾವು ಹೆಚ್ಚು ಬಂದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>