<p><strong>ಮೈಸೂರು:</strong> ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಕ್ಷೇತ್ರದಲ್ಲಿ ಮಂಟೇಸ್ವಾಮಿ, ರಾಚಪ್ಪಾಜಿ ಮತ್ತು ಸಿದ್ದಪ್ಪಾಜಿ ಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದಕ್ಕೆ ಸಂಸದ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ.</p><p>‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಈ ಕಮ್ಯುನಿಸ್ಟ್ ನಿಯಂತ್ರಿತ ಇಸ್ಲಾಮಿಕ್ ಓಲೈಕೆ ಸರ್ಕಾರವು ಪ್ರಾಚೀನ ಹಿಂದೂ ಸಂಪ್ರದಾಯಕ್ಕೆ ಸೇರಿದ, ಅದರಲ್ಲೂ ಹಿಂದುಳಿದ ವರ್ಗಗಳ, ತಳ ಸಮುದಾಯಗಳ ಹಾಗೂ ಜಾತ್ಯತೀತ ನಿಲುವುಗಳನ್ನು ಒಳಗೊಂಡಿರುವ ಮಂಟೇಸ್ವಾಮಿ ಮಠವನ್ನು ಸ್ವಾಧೀನಪಡಿಸಿಕೊಳ್ಳುವ ಈ ಘೋಷಣೆಯು ಹಿಂದೂ ನಂಬಿಕೆಯ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸುವ ನೇರ ಪ್ರಯತ್ನವಾಗಿದೆ’ ಎಂದು ದೂರಿದ್ದಾರೆ.</p><p>‘ಇದು ಅತ್ಯಂತ ಖಂಡನೀಯ ಕೃತ್ಯವಾಗಿದೆ. ಇಂತಹ ಪ್ರಯತ್ನವನ್ನು ಎಲ್ಲ ಹಂತಗಳಲ್ಲೂ ಬಹಿರಂಗಪಡಿಸಬೇಕಾಗಿದೆ. ಸರ್ಕಾರ ಈ ನಿಲುವಿನಿಂದ ಹಿಂದೆ ಸರಿದು ನಮ್ಮ ನೀಲಗಾರ ಪರಂಪರೆಯ ನಂಬಿಕೆ, ಆಚರಣೆ, ಜಾನಪದ ಪರಂಪರೆಯನ್ನು ಉಳಿಸಬೇಕು’ ಎಂದು ಆಗ್ರಹಿಸಿದ್ದಾರೆ.</p><p>‘ಮಂಟೇಸ್ವಾಮಿ ಮಠವು ನೀಲಗಾರ/ ಸಿದ್ಧ ಪರಂಪರೆಯ ಅಡಿಯಲ್ಲಿ ಬರುವ ಜಾತ್ಯತೀತ ಹಿಂದೂ ಧಾರ್ಮಿಕ ಮಠವಾಗಿದೆ. ಹಳೆಯ ಮೈಸೂರು ಭಾಗದ ಬಹುಪಾಲು ಹಿಂದೂ ಪಂಗಡಗಳು ಅತಿ ಹೆಚ್ಚಾಗಿ ಹಿಂದುಳಿದ ವರ್ಗ ಮತ್ತು ತಳ ಸಮುದಾಯಗಳ ಜನರು ಈ ಗುರುಪೀಠದ ಅನುಯಾಯಿಗಳಾಗಿದ್ದಾರೆ. ತಮಿಳುನಾಡಿನ ಕೆಲವು ಭಾಗಗಳ ಭಕ್ತರೂ ಇದ್ದಾರೆ. ಅರಸು ಸಮುದಾಯದವರು 500 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಪೀಠಾಧಿಪತಿಗಳಾಗಿದ್ದಾರೆ. ಮಠವನ್ನು ಇತರ ಅನೇಕ ಹಿಂದೂ ಸಮುದಾಯಗಳ ಸಹಕಾರ ಮತ್ತು ಸಮನ್ವಯದಿಂದ ಸಾಮೂಹಿಕವಾಗಿ ನಡೆಸಲಾಗುತ್ತಿದೆ. ಇದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಕ್ಷೇತ್ರದಲ್ಲಿ ಮಂಟೇಸ್ವಾಮಿ, ರಾಚಪ್ಪಾಜಿ ಮತ್ತು ಸಿದ್ದಪ್ಪಾಜಿ ಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದಕ್ಕೆ ಸಂಸದ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ.</p><p>‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಈ ಕಮ್ಯುನಿಸ್ಟ್ ನಿಯಂತ್ರಿತ ಇಸ್ಲಾಮಿಕ್ ಓಲೈಕೆ ಸರ್ಕಾರವು ಪ್ರಾಚೀನ ಹಿಂದೂ ಸಂಪ್ರದಾಯಕ್ಕೆ ಸೇರಿದ, ಅದರಲ್ಲೂ ಹಿಂದುಳಿದ ವರ್ಗಗಳ, ತಳ ಸಮುದಾಯಗಳ ಹಾಗೂ ಜಾತ್ಯತೀತ ನಿಲುವುಗಳನ್ನು ಒಳಗೊಂಡಿರುವ ಮಂಟೇಸ್ವಾಮಿ ಮಠವನ್ನು ಸ್ವಾಧೀನಪಡಿಸಿಕೊಳ್ಳುವ ಈ ಘೋಷಣೆಯು ಹಿಂದೂ ನಂಬಿಕೆಯ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸುವ ನೇರ ಪ್ರಯತ್ನವಾಗಿದೆ’ ಎಂದು ದೂರಿದ್ದಾರೆ.</p><p>‘ಇದು ಅತ್ಯಂತ ಖಂಡನೀಯ ಕೃತ್ಯವಾಗಿದೆ. ಇಂತಹ ಪ್ರಯತ್ನವನ್ನು ಎಲ್ಲ ಹಂತಗಳಲ್ಲೂ ಬಹಿರಂಗಪಡಿಸಬೇಕಾಗಿದೆ. ಸರ್ಕಾರ ಈ ನಿಲುವಿನಿಂದ ಹಿಂದೆ ಸರಿದು ನಮ್ಮ ನೀಲಗಾರ ಪರಂಪರೆಯ ನಂಬಿಕೆ, ಆಚರಣೆ, ಜಾನಪದ ಪರಂಪರೆಯನ್ನು ಉಳಿಸಬೇಕು’ ಎಂದು ಆಗ್ರಹಿಸಿದ್ದಾರೆ.</p><p>‘ಮಂಟೇಸ್ವಾಮಿ ಮಠವು ನೀಲಗಾರ/ ಸಿದ್ಧ ಪರಂಪರೆಯ ಅಡಿಯಲ್ಲಿ ಬರುವ ಜಾತ್ಯತೀತ ಹಿಂದೂ ಧಾರ್ಮಿಕ ಮಠವಾಗಿದೆ. ಹಳೆಯ ಮೈಸೂರು ಭಾಗದ ಬಹುಪಾಲು ಹಿಂದೂ ಪಂಗಡಗಳು ಅತಿ ಹೆಚ್ಚಾಗಿ ಹಿಂದುಳಿದ ವರ್ಗ ಮತ್ತು ತಳ ಸಮುದಾಯಗಳ ಜನರು ಈ ಗುರುಪೀಠದ ಅನುಯಾಯಿಗಳಾಗಿದ್ದಾರೆ. ತಮಿಳುನಾಡಿನ ಕೆಲವು ಭಾಗಗಳ ಭಕ್ತರೂ ಇದ್ದಾರೆ. ಅರಸು ಸಮುದಾಯದವರು 500 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಪೀಠಾಧಿಪತಿಗಳಾಗಿದ್ದಾರೆ. ಮಠವನ್ನು ಇತರ ಅನೇಕ ಹಿಂದೂ ಸಮುದಾಯಗಳ ಸಹಕಾರ ಮತ್ತು ಸಮನ್ವಯದಿಂದ ಸಾಮೂಹಿಕವಾಗಿ ನಡೆಸಲಾಗುತ್ತಿದೆ. ಇದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>