<p><strong>ಮೈಸೂರು:</strong> ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಕರೆಯಲಾಗಿದ್ದ ವಿಶೇಷ ಸಭೆ ಕೋರಂ ಇಲ್ಲದೆಯೇ ಆರಂಭವಾಯಿತು. ಕೆಲವೇ ಸದಸ್ಯರು ಭಾಗಿಯಾಗಿದ್ದ ಸಭೆಯಲ್ಲಿ ಒಂದೆರಡು ಮಂದಿ ಮಾತನಾಡಿದರು. ₹ 52 ಕೋಟಿಯಷ್ಟು ಮೊತ್ತದ ಉಳಿಕೆ ಅನುದಾನದ ಕ್ರಿಯಾಯೋಜನೆಗೆ ಅನುಮೋದನೆಯನ್ನೂ ನೀಡಿತು.</p>.<p>ಈ ಮೊದಲೇ ಎಲ್ಲ ಸದಸ್ಯರಿಗೂ ನೋಟಿಸ್ ನೀಡಿದ್ದರೂ, ಸರಿಯಾದ ಸಮಯಕ್ಕೆ ಬಂದವರು ಬೆರಳೆಣಿಕೆಯಷ್ಟು ಸದಸ್ಯರು ಮಾತ್ರ. ಮತ್ತಷ್ಟು ಸದಸ್ಯರು ತಡವಾಗಿ ಬಂದರು. ಕೆಲವರು ಊಟದ ಸಮಯಕ್ಕೆ ಸರಿಯಾಗಿಯೇ ಸಭಾಂಗಣ ಪ್ರವೇಶಿಸಿದರು. ಈ ಮೂಲಕ ಕೋರಂ ಇಲ್ಲದೇ ಆರಂಭವಾಗಿದ್ದ ಸಭೆಗೆ ಅಂತಿಮ ಗಳಿಗೆಯಲ್ಲಿ ಬಲ ತುಂಬಿದರು.</p>.<p>ವಿಷಯ ಪ್ರಸ್ತಾಪಿಸಿದ ಸದಸ್ಯ ವೆಂಕಟಸ್ವಾಮಿ, ‘ಸದಸ್ಯರಿಗಾಗಿ ಕಾದು ಕುಳಿತುಕೊಳ್ಳುವುದರಲ್ಲಿ ಅರ್ಥ ಇಲ್ಲ. ಸಭೆ ಆರಂಭಿಸಿ, ಸಣ್ಣಪುಟ್ಟ ಬದಲಾವಣೆಗೆ ಅವಕಾಶ ನೀಡಿ ಕ್ರಿಯಾಯೋಜನೆಗೆ ಅನುಮೋದನೆ ನೀಡೋಣ. ನಂತರ, ಎಲ್ಲ ಸದಸ್ಯರಿಂದ ಕಡತಕ್ಕೆ ಸಹಿ ಹಾಕಿಸಿಕೊಂಡರಾಯಿತು. ಗ್ರಾಮ ಪಂಚಾಯಿತಿ ಚುನಾವಣೆಯ ನೀತಿ ಸಂಹಿತೆ ಬಂದರೆ, ಈ ಅನುದಾನ ವಾಪಸ್ ಹೋಗುತ್ತದೆ. ಆಗ ಎಲ್ಲ ಸದಸ್ಯರಿಗೂ ನಷ್ಟವಾಗುತ್ತದೆ’ ಎಂದು ಹೇಳಿದರು.</p>.<p>ಸಲಹೆಯನ್ನು ಪುರಸ್ಕರಿಸಿದ ಅಧ್ಯಕ್ಷೆ ಪರಿಮಳಾ ಶ್ಯಾಂ ₹ 52 ಕೋಟಿ ಮೊತ್ತದ ಕ್ರಿಯಾಯೋಜನೆ ಮಂಡಿಸಿದರು. ಬದಲಾವಣೆಗೆ ಅವಕಾಶ ನೀಡಿ ಸಭೆ ಅನುಮೋದನೆ ನೀಡಿತು.</p>.<p><strong>ಮಾಹಿತಿ ಇಲ್ಲ, ಏನೇನೂ ತಿಳಿಯುತ್ತಿಲ್ಲ– ಸದಸ್ಯರ ಅಳಲು</strong></p>.<p>‘ಕೊಟ್ಟಿರುವ ಪುಸ್ತಕದಲ್ಲಿರುವ ಬಹಳಷ್ಟು ವಿಷಯಗಳು ಬಹುತೇಕ ಸದಸ್ಯರಿಗೆ ತಿಳಿಯುತ್ತಿಲ್ಲ. ಈ ಹಿಂದೆಯೇ ಕ್ರಿಯಾಯೋಜನೆಗೆ ಅನುಮತಿ ನೀಡಲಾಗಿದೆ. ಈ ಕ್ರಿಯಾಯೋಜನೆ ಯಾವುದು ಎಂಬುದು ಗೊತ್ತಾಗುತ್ತಿಲ್ಲ. ನಾವೇನು ಕೆಎಎಸ್, ಐಎಎಸ್ ಮಾಡಿಲ್ಲ. ಎಲ್ಲರಿಗೂ ಅರ್ಥವಾಗುವಂತೆ ಬಿಡಿಸಿ ಹೇಳಿ’ ಎಂದು ಮಂಗಳಾ ಸೋಮಶೇಖರ್ ಕಿಡಿಕಾರಿದರು. ಇದಕ್ಕೆ ವೆಂಕಟಸ್ವಾಮಿ ಸೇರಿದಂತೆ ಇತರೆ ಸದಸ್ಯರೂ ದನಿಗೂಡಿಸಿದರು. ನಂತರ, ಮುಖ್ಯ ಯೋಜನಾಧಿಕಾರಿ ಧನುಷ್ ಕ್ರಿಯಾಯೋಜನೆ ಕುರಿತು ವಿವರಣೆ ನೀಡಿದರು.</p>.<p>ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ವಹಣೆ ಮಾಡುವ ಏಜೆನ್ಸಿಗಳನ್ನು ಕುರಿತು ಸಾಕಷ್ಟು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸರಿಯಾಗಿ ನಿರ್ವಹಣೆ ಮಾಡದ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು.</p>.<p>ಲಸಿಕೆ ಬರುವವರೆಗೂ ಶಾಲೆಗಳನ್ನು ತೆರೆಯುವುದು ಬೇಡ ಎಂದು ಬಹುಪಾಲು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಪಾಂಡುರಂಗ, ‘ಸರ್ಕಾರ ಶಾಲೆಗಳನ್ನು ತೆರೆಯುವ ಸಾಧ್ಯತೆ ಇದ್ದು, ಇದಕ್ಕೆ ಅಗತ್ಯವಾದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ. ಈಗಾಗಲೇ ಈ ಸಂಬಂಧ ಒಂದು ವಿಡಿಯೊ ಕಾನ್ಫರೆನ್ಸ್ ಸಹ ಆಗಿದೆ’ ಎಂದು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಕರೆಯಲಾಗಿದ್ದ ವಿಶೇಷ ಸಭೆ ಕೋರಂ ಇಲ್ಲದೆಯೇ ಆರಂಭವಾಯಿತು. ಕೆಲವೇ ಸದಸ್ಯರು ಭಾಗಿಯಾಗಿದ್ದ ಸಭೆಯಲ್ಲಿ ಒಂದೆರಡು ಮಂದಿ ಮಾತನಾಡಿದರು. ₹ 52 ಕೋಟಿಯಷ್ಟು ಮೊತ್ತದ ಉಳಿಕೆ ಅನುದಾನದ ಕ್ರಿಯಾಯೋಜನೆಗೆ ಅನುಮೋದನೆಯನ್ನೂ ನೀಡಿತು.</p>.<p>ಈ ಮೊದಲೇ ಎಲ್ಲ ಸದಸ್ಯರಿಗೂ ನೋಟಿಸ್ ನೀಡಿದ್ದರೂ, ಸರಿಯಾದ ಸಮಯಕ್ಕೆ ಬಂದವರು ಬೆರಳೆಣಿಕೆಯಷ್ಟು ಸದಸ್ಯರು ಮಾತ್ರ. ಮತ್ತಷ್ಟು ಸದಸ್ಯರು ತಡವಾಗಿ ಬಂದರು. ಕೆಲವರು ಊಟದ ಸಮಯಕ್ಕೆ ಸರಿಯಾಗಿಯೇ ಸಭಾಂಗಣ ಪ್ರವೇಶಿಸಿದರು. ಈ ಮೂಲಕ ಕೋರಂ ಇಲ್ಲದೇ ಆರಂಭವಾಗಿದ್ದ ಸಭೆಗೆ ಅಂತಿಮ ಗಳಿಗೆಯಲ್ಲಿ ಬಲ ತುಂಬಿದರು.</p>.<p>ವಿಷಯ ಪ್ರಸ್ತಾಪಿಸಿದ ಸದಸ್ಯ ವೆಂಕಟಸ್ವಾಮಿ, ‘ಸದಸ್ಯರಿಗಾಗಿ ಕಾದು ಕುಳಿತುಕೊಳ್ಳುವುದರಲ್ಲಿ ಅರ್ಥ ಇಲ್ಲ. ಸಭೆ ಆರಂಭಿಸಿ, ಸಣ್ಣಪುಟ್ಟ ಬದಲಾವಣೆಗೆ ಅವಕಾಶ ನೀಡಿ ಕ್ರಿಯಾಯೋಜನೆಗೆ ಅನುಮೋದನೆ ನೀಡೋಣ. ನಂತರ, ಎಲ್ಲ ಸದಸ್ಯರಿಂದ ಕಡತಕ್ಕೆ ಸಹಿ ಹಾಕಿಸಿಕೊಂಡರಾಯಿತು. ಗ್ರಾಮ ಪಂಚಾಯಿತಿ ಚುನಾವಣೆಯ ನೀತಿ ಸಂಹಿತೆ ಬಂದರೆ, ಈ ಅನುದಾನ ವಾಪಸ್ ಹೋಗುತ್ತದೆ. ಆಗ ಎಲ್ಲ ಸದಸ್ಯರಿಗೂ ನಷ್ಟವಾಗುತ್ತದೆ’ ಎಂದು ಹೇಳಿದರು.</p>.<p>ಸಲಹೆಯನ್ನು ಪುರಸ್ಕರಿಸಿದ ಅಧ್ಯಕ್ಷೆ ಪರಿಮಳಾ ಶ್ಯಾಂ ₹ 52 ಕೋಟಿ ಮೊತ್ತದ ಕ್ರಿಯಾಯೋಜನೆ ಮಂಡಿಸಿದರು. ಬದಲಾವಣೆಗೆ ಅವಕಾಶ ನೀಡಿ ಸಭೆ ಅನುಮೋದನೆ ನೀಡಿತು.</p>.<p><strong>ಮಾಹಿತಿ ಇಲ್ಲ, ಏನೇನೂ ತಿಳಿಯುತ್ತಿಲ್ಲ– ಸದಸ್ಯರ ಅಳಲು</strong></p>.<p>‘ಕೊಟ್ಟಿರುವ ಪುಸ್ತಕದಲ್ಲಿರುವ ಬಹಳಷ್ಟು ವಿಷಯಗಳು ಬಹುತೇಕ ಸದಸ್ಯರಿಗೆ ತಿಳಿಯುತ್ತಿಲ್ಲ. ಈ ಹಿಂದೆಯೇ ಕ್ರಿಯಾಯೋಜನೆಗೆ ಅನುಮತಿ ನೀಡಲಾಗಿದೆ. ಈ ಕ್ರಿಯಾಯೋಜನೆ ಯಾವುದು ಎಂಬುದು ಗೊತ್ತಾಗುತ್ತಿಲ್ಲ. ನಾವೇನು ಕೆಎಎಸ್, ಐಎಎಸ್ ಮಾಡಿಲ್ಲ. ಎಲ್ಲರಿಗೂ ಅರ್ಥವಾಗುವಂತೆ ಬಿಡಿಸಿ ಹೇಳಿ’ ಎಂದು ಮಂಗಳಾ ಸೋಮಶೇಖರ್ ಕಿಡಿಕಾರಿದರು. ಇದಕ್ಕೆ ವೆಂಕಟಸ್ವಾಮಿ ಸೇರಿದಂತೆ ಇತರೆ ಸದಸ್ಯರೂ ದನಿಗೂಡಿಸಿದರು. ನಂತರ, ಮುಖ್ಯ ಯೋಜನಾಧಿಕಾರಿ ಧನುಷ್ ಕ್ರಿಯಾಯೋಜನೆ ಕುರಿತು ವಿವರಣೆ ನೀಡಿದರು.</p>.<p>ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ವಹಣೆ ಮಾಡುವ ಏಜೆನ್ಸಿಗಳನ್ನು ಕುರಿತು ಸಾಕಷ್ಟು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸರಿಯಾಗಿ ನಿರ್ವಹಣೆ ಮಾಡದ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು.</p>.<p>ಲಸಿಕೆ ಬರುವವರೆಗೂ ಶಾಲೆಗಳನ್ನು ತೆರೆಯುವುದು ಬೇಡ ಎಂದು ಬಹುಪಾಲು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಪಾಂಡುರಂಗ, ‘ಸರ್ಕಾರ ಶಾಲೆಗಳನ್ನು ತೆರೆಯುವ ಸಾಧ್ಯತೆ ಇದ್ದು, ಇದಕ್ಕೆ ಅಗತ್ಯವಾದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ. ಈಗಾಗಲೇ ಈ ಸಂಬಂಧ ಒಂದು ವಿಡಿಯೊ ಕಾನ್ಫರೆನ್ಸ್ ಸಹ ಆಗಿದೆ’ ಎಂದು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>