ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆ ಬಿಜೆಪಿ–ಜೆಡಿಎಸ್ ಮೈತ್ರಿ ಮುಂದುವರಿಕೆ ನಾಮಪತ್ರ ವಾಪಸ್ಗೆ ಕಡೆಯ ದಿನ ಇಂದು
ತಲುಪಲು ಪ್ರಯತ್ನ
ಪ್ರೌಢಶಾಲೆಗಳ ಶಿಕ್ಷಕರು ಪಿಯು ಕಾಲೇಜು ಉಪನ್ಯಾಸಕರು ಪದವಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಬೋಧಕರು ನೋಂದಾಯಿಸಿದ ಅತಿಥಿ ಉಪನ್ಯಾಸಕರು ಕ್ಷೇತ್ರದ ಮತದಾರರಾಗಿದ್ದಾರೆ. ಅವರನ್ನು ಮನವೊಲಿಸಿಕೊಳ್ಳಲು ಶಿಕ್ಷಕರು ಉಪನ್ಯಾಸಕರು ಬೋಧಕರ ವಿವಿಧ ಸಂಘಗಳ ಪದಾಧಿಕಾರಿಗಳ ಮೂಲಕ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಮೊಬೈಲ್ ಫೋನ್ಗೆ ಕರೆ ಮಾಡುವುದು ವಾಟ್ಸ್ಆ್ಯಪ್ ಸಂದೇಶದ ಮೂಲಕ ಮನವಿ ಸಣ್ಣ ಸಣ್ಣ ಸಭೆಗಳು ಮೊದಲಾದವುಗಳ ಮೂಲಕ ಅವರನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ರಾಜಕೀಯ ಪಕ್ಷಗಳಿಂದ ಅಲ್ಲಲ್ಲಿ ಜಾತಿವಾರು ಸಭೆಗಳು ಕೂಡ ನಡೆಯುತ್ತಿರುವುದು ಕಂಡುಬಂದಿದೆ. ಸಾಮಾಜಿಕ ಜಾಲತಾಣವನ್ನೂ ಬಳಸಿಕೊಳ್ಳುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನಡೆದ ಸಭೆ ಬಿಟ್ಟರೆ ದೊಡ್ಡ ದೊಡ್ಡ ಪ್ರಚಾರ ಕಾರ್ಯಕ್ರಮಗಳು ಇಲ್ಲಿ ಇನ್ನೂ ಆರಂಭಗೊಂಡಿಲ್ಲ.
ರಜೆ ಇರುವುದರಿಂದ...
ಆಯಾ ಪಕ್ಷದ ಕಾರ್ಯಕರ್ತರು ಅಥವಾ ಬೆಂಬಲಿಗರ ಮೂಲಕವೂ ಫೋನ್ ಕರೆ ಮಾಡಿಸಿ ಮತ ಕೇಳುವುದು ನಡೆಯುತ್ತಿದೆ. ಮತದಾರರ ವಿಳಾಸಕ್ಕೆ ಪತ್ರಗಳು ಬರುತ್ತಿವೆ. ಪ್ರಮುಖ ಅಭ್ಯರ್ಥಿಗಳು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡುತ್ತಿದ್ದಾರೆ. ಪಿಯು ಪ್ರೌಢಶಾಲೆಗಳ ಬಳಿಗೆ ಭೇಟಿ ನಿಡುವುದು ನಡೆಯುತ್ತಿದೆ. ಸದ್ಯ ಪ್ರೌಢಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ಸಾಮೂಹಿಕವಾಗಿ ಮತ ಯಾಚಿಸುವುದಕ್ಕೆ ಅಡ್ಡಿಯಾಗಿದೆ. ಮೇ 29ರಿಂದ ಪ್ರೌಢಶಾಲೆಗಳು ಪುನರಾರಂಭಗೊಳ್ಳಲಿದ್ದು ಪ್ರಚಾರ ಕಣ ರಂಗೇರಲಿದೆ.